ಬ್ರಿಸ್ಟೇನ್ ಟೆಸ್ಟ್ ಪಂದ್ಯದಲ್ಲಿ ವರುಣನ ಕಾಟ ಮುಂದುವರಿದಿದೆ. ಭೋಜನ ವಿರಾಮದ ನಂತರ ಪಂದ್ಯದ ಆರಂಭಕ್ಕೆ ಸಿದ್ಧವಾಗಿದ್ದಾಗ, ಮತ್ತೆ ಮಳೆ ಶುರುವಾಯಿತು. ಕೂಡಲೇ ಪಿಚ್ ಅನ್ನು ಕವರ್ಗಳಿಂದ ಮುಚ್ಚಲಾಯಿತು. ಮಳೆ ಮೂರನೇ ಟೆಸ್ಟ್ ಪಂದ್ಯದ ಪ್ರಾರಂಭದಿಂದಲೇ ಅಡ್ಡಿ ಪಡಿಸುತ್ತಾ ಇದೆ, ಮತ್ತು ಇಂದು ನಾಲ್ಕನೇ ದಿನವಾಗಿದ್ದು, ಭಾರತ 278 ರನ್ಗಳ ಹಿನ್ನಡೆಯಲ್ಲಿದೆ.
ಜಡೇಜಾ (41) ಮತ್ತು ನಿತೀಶ್ ರೆಡ್ಡಿ (7) ಕ್ರೀಸ್ನಲ್ಲಿದ್ದಾರೆ. ಮಳೆ ಜೋರಾಗಿರುವುದರಿಂದ, ಎರಡನೇ ಅವಧಿಯ ಆಟ ಮತ್ತಷ್ಟು ವಿಳಂಬವಾಗುವುದೆಂದು ನಿರೀಕ್ಷಿಸಲಾಗುತ್ತಿದೆ.
ಮತ್ತೆ ಮಳೆ ಅಡ್ಡಿಯಾಗುವ ಮೂಲಕ, ಕ್ರಿಕೆಟ್ ಅಭಿಮಾನಿಗಳ ತಾಳ್ಮೆಗೆ ಮತ್ತಷ್ಟು ಪರೀಕ್ಷೆ ಎದುರಾಗಿದೆ.








