Raksha Bandhana: ರಾಕಿ ಬಾಯ್ ಗೆ ರಾಖಿ ಕಟ್ಟಿದ ರಕ್ಷಾ ಬಂಧನ ಆಚರಣೆ
ದೇಶದಲ್ಲೇಡೆ ಇಂದು ಸಂಭ್ರಮದಿಂದ ರಕ್ಷಾ ಬಂಧನವನ್ನ ಆಚರಿಸಲಾಗುತಿದೆ. ಶ್ರಾವಣ ಮಾಸದ ನೂಲ ಹುಣ್ಣಿಮೆಯಂದು ಸಹೋದರ ಸಹೋದರಿಯರ ಬಾಂಧವ್ಯದ ಪ್ರತೀಕವಾಗಿ ಪುರಾತನ ಕಾಲದಿಂದ ಹಬ್ಬವನ್ನ ಆಚರಿಸಲಾಗುತ್ತಿದೆ.
ಕನ್ನಡದ ಹಲವು ಸಿನಿ ತಾರೆಯರ ಕೂಡ ಇಂದು ರಕ್ಷಾ ಭಂದನವನ್ನ ಆಚರಿಸಿಕೊಳ್ಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲೂ ರಕ್ಷಾಬಂಧನದ ಸಂಭ್ರಮ ಮನೆ ಮಾಡಿದೆ.. ಯಶ್ ಗೆ ಅವರ ಸಹೋದರಿ ನಂದಿನಿ ರಾಖಿ ಕಟ್ಟಿದ ಫೋಟೋವನ್ನ ಯಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸರ್ವರಿಗೂ ರಕ್ಷಾಬಂಧನ ಶುಭ ಕೋರಿದ್ದಾರೆ.
ಒಡಹುಟ್ಟಿದವರು, ವಿಧಿಯಿಂದ ಒಟ್ಟಿಗೆ ಬಂದವರು, ಆದರೆ ಜೀವಮಾನದ ಪ್ರೀತಿ ಮತ್ತು ಬೆಂಬಲದಿಂದ ಬಂಧಿತರಾಗಿದ್ದಾರೆ. ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.
ಹಿಂದೂ ಪುರಾಣಗಳ ಪ್ರಕಾರ ಮಹಾಭಾರತದಲ್ಲಿ, ಕೃಷ್ಣನ ಮಣಿಕಟ್ಟಿನಿಂದ ರಕ್ತಸ್ರಾವವಾಗುವುದನ್ನು ತಡೆಯಲು ದ್ರೌಪದಿ ತನ್ನ ಸೀರೆಯನ್ನು ಹರಿದು ಕೃಷ್ಣನಿಗೆ ಕಟ್ಟಿದಳು. ಈ ವೇಳೆ ದ್ರೌಪದಿಯ ವಾತ್ಸಲ್ಯ, ಕಾಳಜಿ ಕಂಡ ಕೃಷ್ಣ, ಆಕೆಯನ್ನು ರಕ್ಷಣೆ ಮಾಡುವ ಭರವಸೆ ನೀಡಿಡುತ್ತಾನೆ. ಅದರಂತೆ ವಸ್ತ್ರಾಪಹರಣದ ಸಂದರ್ಭದಲ್ಲಿ ಅಕ್ಷಯ ಬಟ್ಟೆಯನ್ನಿಂತು ದ್ರೌಪದಿಯನ್ನ ರಕ್ಷಿಸುತ್ತಾನೆ. ಅದಲ್ಲದೆ ಹಲವು ಸಂದರ್ಭಗಳಲ್ಲಿ ದ್ರೌಪದಿಯ ಸಹಾಯಕ್ಕೆ ನಿಲ್ಲುತ್ತಾನೆ ಶ್ರೀ ಕೃಷ್ಣ.