ಬಳ್ಳಾರಿ : ಡಿಸಿಎಂ ಆಸೆಯಲ್ಲಿದ್ದ ಸಚಿವ ಶ್ರೀ ರಾಮುಲು (Ramulu) ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಶಾಕ್ ನೀಡಿದ್ದು, ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ನೀಡಿದ್ದಾರೆ. ಆದ್ರೆ ರಾಮುಲು (Ramulu) ಮತ್ತೆ ಡಿಸಿಎಂ ಆಗೋ ಆಸೆಯನ್ನು ಹೊರಹಾಕಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡಿಸಿಎಂ ಆಗಬೇಕೆಂಬ ಅಭಿಮಾನಿಗಳ ಬೇಡಿಕೆ ಇದೆ ನಿಜ, ಆದ್ರೆ ಅಂದು ನಾನು ಸಮಾಜ ಕಲ್ಯಾಣ ಕೇಳಿದ್ದೆ ಈಗ ಕೊಟ್ಟಿದ್ದಾರೆ.
ಡಿಸಿಎಂ ಪಟ್ಟ ಮುಂದೆಯೂ ಸಿಗಬಹುದು, ಭಗವಂತ ಆ ಅವಕಾಶ ಕೊಡಬಹುದು, ಎಲ್ಲವನ್ನೂ ಕಾದು ನೋಡಬೇಕು. ಪಾರ್ಟಿ ಕೂಡ ಮುಂದೆ ಅವಕಾಶ ಮಾಡಿಕೊಡಬಹುದು ಎಂದರು.
ಇದನ್ನೂ ಓದಿ : ನಾನು ಹುಟ್ಟಿನಿಂದ ಒಕ್ಕಲಿಗ : ಡಿ.ಕೆ.ಶಿವಕುಮಾರ್ ಖಡಕ್ ಉತ್ತರ
ಸದ್ಯ ನಮ್ಮ ಪಾರ್ಟಿಗೆ ಚುನಾವಣೆ ಗೆಲ್ಲೋ ಸವಾಲಿದೆ. ಚುನಾವಣೆ ಗೆದ್ದ ನಂತರ ನಮಗೆ ಬಲ ಬರುತ್ತದೆ.
ಆಗ ನಾವು ನಮ್ಮ ನಾಯಕರು ಮತ್ತು ಹೈ ಕಮಾಂಡ್ ಹತ್ತಿರ ಕೇಳೋ ಅವಕಾಶ ಸಿಗುತ್ತದೆ.
ಇವತ್ತಿಗೂ ನಮ್ಮ ಪಾರ್ಟಿ ಶ್ರೀ ರಾಮುಲು ಅವರನ್ನು ಬಿಟ್ಟು ಕೊಟ್ಟಿಲ್ಲಾ. ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದ ಮೇಲೆ ನಮ್ಮ ವರ್ಚಸ್ಸು ಕಡಿಮೆಯಾಗಿಲ್ಲಾ.
ಪಾರ್ಟಿ ಅನ್ನೋದು ಯಾರು ಕಷ್ಟ ಪಡ್ತಾರೋ ಅವರನ್ನ ಗುರುತಿಸೋ ಕೆಲಸ ಮಾಡುತ್ತದೆ. ನಮ್ಮ ಪಾರ್ಟಿ ನಮ್ಮ ಕೈ ಬಿಡೋಲ್ಲಾ ಎಂದು ರಾಮುಲು ಹೇಳಿದ್ದಾರೆ.
ಇದನ್ನೂ ಓದಿ : ‘ಸಂಪತ್ ರಾಜ್ ರನ್ನು ಉಚ್ಚಾಟಿಸಬೇಕು’ ಅಖಂಡ ಹೇಳಿಕೆಗೆ ಡಿಕೆಶಿ ಹೇಳಿದ್ದೇನು?
ಇದೇ ವೇಳೆ ಉಪಚುನಾವಣೆ ಬಗ್ಗೆ ಮಾತನಾಡಿದ ರಾಮುಲು, ರಾಜ್ಯದಲ್ಲಿ ಎರಡು ಉಪಚುನಾವಣೆ ನಡೆಯುತ್ತಿವೆ. ಎರಡರಲ್ಲೂ ಬಿಜೆಪಿ ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel