ಮಂಡ್ಯ : ಹೆಚ್ ಡಿ ದೇವೇಗೌಡರ ಸಾವಿನ ಬಗ್ಗೆ ಮಾಜಿ ಶಾಸಕ ರಾಜಣ್ಣ ಹೇಳಿಕೆ ವಿಚಾರವನ್ನ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ.. ರಾಜಕಾರಣದಲ್ಲಿ ಗೆಲ್ಲೋಕೆ ಏನೇನೋ ಹೇಳೋದು ಬೇಡ. ರಾಜಣ್ಣ ನೀವು ಒಕ್ಕಲಿಗ ಮುಖಂಡರಿದ್ದೀರಿ. ನೀವು ಎಂಎಲ್ಎ ಆಗಿ, ನಮಗೆ ಅಭ್ಯಂತರವಿಲ್ಲ. ಆದ್ರೆ ಒಕ್ಕಲಿಗ ಮುಖಂಡ ದೇವೇಗೌಡರಿಗೆ ನಾಲ್ಕು ಜನ ಎತ್ಕೊಂಡು ಹೋಗ್ತಾರೆ ಅಂತೀರಲ್ಲ, ನಿಮ್ಮ ಕಾನ ನಂತರವು ನಾಲ್ಕು ಜನ ಎತ್ಕೊಂಡ್ ಹೋಗಬೇಕು. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡೋದು ನ್ಯಾಯನಾ ಎಂದು ಕಿಡಿಕಾರಿದ್ದಾರೆ..
ನಿಮ್ಮ ರಾಜಕೀಯ ಜೀವನದಲ್ಲಿ ಈ ಹೇಳಿಕೆ ನಿಮಗೆ ಕಳಂಕ. ಇಡೀ ದೇಶವೇ ಮಾಜಿ ಪ್ರಧಾನಿ ದೇವೇಗೌಡರನ್ನ ಮೆಚ್ಚಿದೆ. ನೀವು ಅವರ ಬಗ್ಗೆ ಆಡಿರುವ ಹಗುರ ಮಾತುಗಳನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ತಂದೆಯು ಸತ್ತಿದ್ದಾರೆ. ನಿಮಗು ಸಾವು ಬರುತ್ತೆ, ನನಗು ಸಾವು ಬರುತ್ತೆ. ಆದ್ರೆ ವೇದಿಕೆಯಲ್ಲಿ ಜನರ ಸೇವೆಗೆ ತನ್ನ ಇಡೀ ಜೀವನವನ್ನೆ ಮುಡಿಪಿಟ್ಟ ನಮ್ಮ ನಾಯಕನ ಬಗ್ಗೆ ಅವಹೇಳನಕಾರಿ ಮಾತುಗಳನ್ನ ನಿಲ್ಲಿಸಿ. ಇಲ್ಲದಿದ್ದರೆ ನಿಮ್ಮ ಘನತೆಗೆ ಧಕ್ಕೆ ಬರುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ,.