ಬೆಂಗಳೂರು: ಆರ್ ಸಿಬಿ ತಂಡ ಮತ್ತೊಮ್ಮೆ ಕಳಪೆ ಬೌಲಿಂಗ್ ಹಾಗೂ ಬ್ಯಾಟಿಂಗ್ ನಿಂದಾಗಿ ಹೀನಾಯ ಸೋಲು ಕಂಡಿದೆ.
ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತವರಿನಲ್ಲಿ ಹೀನಾಯ ಸೋಲಿಗೆ ಕಾರಣವಾಗಿದೆ. ಸಂಘಟಿತ ಆಟದಿಂದಾಗಿ ಲಕ್ನೋ ತಂಡವು 28 ರನ್ ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಆರ್ ಸಿಬಿ, ಲಕ್ನೋ ತಂಡಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಲಕ್ನೋ ತಂಡ ನಿಗದಿತ ಓವರ್ ನಲ್ಲಿ 181 ರನ್ ಗಳಿಸಿತ್ತು. 182 ರನ್ಗಳ ಗುರಿ ಬೆನ್ನತ್ತಿದ್ದ ಆರ್ಸಿಬಿ 19.4 ಓವರ್ಗಳಲ್ಲಿ 153 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಒಪ್ಪಿಕೊಂಡಿತು. ಈ ಬಾರಿಯೂ ಆರ್ ಸಿಬಿ ಬ್ಯಾಟಿಂಗ್ ಕ್ರಮಾಂಕ ಕೈ ಕೊಟ್ಟಿತು.
ವಿರಾಟ್ ಕೊಹ್ಲಿ, ಡುಪ್ಲೆಸಿಸ್, ಮ್ಯಾಕ್ಸವೆಲ್ ಸೇರಿದಂತೆ ಅಗ್ರ ಆಟಗಾರರು ಯಾವುದೇ ಪ್ರತಿರೋಧ ಒಡ್ಡದೆ ವಿಕೆಟ್ ಒಪ್ಪಿಸಿದರು. ಪರಿಣಾಮವಾಗಿ ಆರ್ ಸಿಬಿ ಸೋಲು ಕಾಣುವಂತಾಯಿತು.