ADVERTISEMENT
Thursday, June 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ರಿಷಬ್ ಪಂತ್ ಎಂಬ ಅಪೂರ್ವ ಬೆರಗು.. ಹೀಗೊಂದು ಪ್ರೀತಿಯ ಪತ್ರ..!

ದೆಹಲಿ ಕ್ರಿಕೆಟ್ ಸೂಪರ್ ಸ್ಟಾರ್ ಸದ್ಯ ಟೀಮ್ ಇಂಡಿಯಾದ ಸೂಪರ್ ಮ್ಯಾನ್

Author2 by Author2
September 26, 2024
in Sports, National, News, ಕ್ರಿಕೆಟ್, ಕ್ರೀಡೆ, ದೇಶ - ವಿದೇಶ
Rishab panth
Share on FacebookShare on TwitterShare on WhatsappShare on Telegram

ರಿಷಬ್ ಪಂತ್.. ದೆಹಲಿ ಕ್ರಿಕೆಟ್ ಕೊಟ್ಟ ಮೂರನೆಯ ಸೂಪರ್ ಸ್ಟಾರ್.. ಅನಾಹುತಕಾರಿ ಅಪಘಾತದ ಭೀಕರ ಕರಾಳ ಅನುಭವದ ದುಸ್ವಪ್ನವನ್ನು ಮೀರಿ ಗೆದ್ದ ಅಗ್ನಿ ದಿವ್ಯ.. ಸದ್ಯ ಟೀಮ್ ಇಂಡಿಯಾದ ಸೂಪರ್ ಮ್ಯಾನ್.. ಅಂಗಳದಲ್ಲಿ, ಡ್ರೆಸ್ಸಿಂಗ್ ಕೋಣೆಯಲ್ಲಿ, ಹಾಗೂ ಕ್ರಿಕೆಟ್ ಹೊರಗೆ ಗೌರವ ಕಾಪಾಡಿಕೊಂಡ ಸರಳ ಸಭ್ಯ ಸಜ್ಜನ ಸೌಮ್ಯ ಜೀವಿ.. ವಿಕೆಟ್ ಹಿಂದೆ ಮತ್ತು ವಿಕೆಟ್ ಮುಂದೆ ಎರಡೂ ಕಡೆಯೂ ಸದಾ ಅಲರ್ಟ್ ಆಗಿ ನಿಲ್ಲುವ ಬದ್ಧತೆಯ ಕ್ರಿಕೆಟಿಗ ಈ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷು..

ಆಟದಷ್ಟೇ ಹಾಸ್ಯ ಪ್ರವೃತ್ತಿ ಯಿಂದಲೂ ಮನೆ ಮಾತಾಗಿರೋ ಕ್ರಿಕೆಟಿಗ ರಿಷಬ್. ಕೈ ಕಾಲುಗಳಲ್ಲಿ ರಾಡ್ ಹಾಕೊಂಡು ಮೈದಾನಲ್ಲಿ ಸ್ಪ್ರಿಂಗ್ ನಂತೆ ಕುಣಿಯುತ್ತ ಪಂತ್ ಕ್ರಿಕೆಟ್ ಆಟ ಆಡೋದನ್ನು ನೋಡೋವುದೇ ಒಂದು ಚೆಂದ. ಅದೊಂದು ಭಯಾನಕ ಅಪಘಾತದ ನಂತರ ರಿಷಬ್ ಪಂತ್ ಗೆ ಚೇತರಿಸಿಕೊಂಡು ಮತ್ತೆ ಪಿಂಚ್ ಗೆ ಇಳಿದ ಪರಿ ಇದೆಯಲ್ಲ, ಅದನ್ನು ಯಾರೂ ಊಹಿಸಿಕೊಳ್ಳುವುದೂ ಕಷ್ಟ. ಆದರೆ ರಿಷಬ್ ಪಂತ್ ನ ವಿಲ್ ಪವರ್, ಕ್ರಿಕೆಟ್ ಆಟದ ಕುರಿತಾದ ಅಗಾಧ ಪ್ರೀತಿ ಮತ್ತು ಏನಾದರೂ ಸಾಧಿಸಿಯೇ ತೀರಬೇಕೆನ್ನುವ ಉತ್ಕಟ ಹಂಬಲದ ಪರಿಣಾಮವೇ ಮತ್ತೆ ಬದುಕಲ್ಲಿ ಹಾಗೂ ಇಂಡಿಯನ್ ಕ್ರಿಕೆಟ್ ನಲ್ಲಿ ರಿಷಬ್ ಮರು ಜನ್ಮ ಪಡೆದು ಫಿನಿಕ್ಸ್ ನಂತೆ ಬೂದಿಯಿಂದ ಎದ್ದು ಬಂದಿರುವ ಅನೂಹ್ಯ ಘಟನೆ.

Related posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!

June 18, 2026
5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

June 18, 2026

Rishab Pant Century .. Many records break

ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಕಮ್ ಬ್ಯಾಕ್ ಮಾಡಿರೋ ಫಿಯರ್ ಲೆಸ್ ಕ್ರಿಕೆಟಿಗ ಕ್ರಿಕೆಟ್ ಜಗತ್ತಿನಲ್ಲಿ ಯಾರು ಇಲ್ಲ. ಮುಂದೆ ಬರೋದು ಇಲ್ಲ. ಅಷ್ಟರ ಮಟ್ಟಿಗೆ ರಿಷಬ್ ಈ ಜನರೇಶನ್ ನ ಎವರ್ ಗ್ರೀನ್ ಹೀರೋ. ವಿಕೆಟ್ ಹಿಂದೆ ಗ್ಲೌಸ್ ತೊಟ್ಟ ರಿಷಬ್, ನಿರ್ಭೀತವಾಗಿ ಬ್ಯಾಟ್ ಮಾಡುತ್ತಾ ಕ್ರೀಸ್ ನಲ್ಲಿ ಬೌಲರ್ ಗಳನ್ನು ಚೆಂಡಾಡುವ ರಿಷು ಸದ್ಯಕ್ಕಂತೂ ಅಸಂಖ್ಯ ಕ್ರಿಕೆಟ್ ಪ್ರೇಮಿಗಳ ಫೆವರೇಟ್. ಜಲಾಶಯದ ಗೇಟ್ ತೆರೆದಾಗ ಧುಮ್ಮಿಕ್ಕುವ ಜಲಧಾರೆಯಂತೆ ರಿಷಬ್ ಬ್ಯಾಟ್ ನಿಂದ ವೇಗವಾಗಿ ರನ್ಗಳು ಹರಿದು ಬರ್ತಿದೆ.

ಒಂದಂತೂ ಸತ್ಯ.. ರಿಷಬ್ ಬ್ಯಾಟ್ ಮಾಡುತ್ತಿರುವಾಗ ಯಾವಾಗ ಔಟ್ ಆಗ್ತಾನೆ ಅನ್ನೋ ಆತಂಕ ಅವನ‌ ಅಭಿಮಾನಿಗಳಲ್ಲಿ ಇದ್ದೇ ಇರುತ್ತೆ. ಆದರೂ ನಾನೇ ಬೇರೆ ನನ್ ಸ್ಟೈಲ್ ಬೇರೆ ಅಂತ ಗಾಢ ಗರ್ವದಿಂದಲೇ ಆಡುವ ಕಲೆಗೆ ಮನ ಸೋಲಲೇ ಬೇಕು.

ಗುರು ದ್ರಾವಿಡ್ ಶಿಷ್ಯ.. ಗಂಗೂಲಿಯ ನೀಲಿಗಣ್ಣಿನ ಹುಡುಗ. ರಿಕಿ ಪಾಂಟಿಂಗ್ ನ ಫೆವರೇಟ್ ಆಟಗಾರ. ವಿರಾಟ್ ರೋಹಿತ್ ಗರಡಿ ಯಲ್ಲಿ ಪಳಗಿರೋ ಡೆಲ್ಲಿಯ ಹೆಬ್ಬುಲಿ ಭವಿಷ್ಯದ ಟೀಮ್ ಇಂಡಿಯಾದ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ.

ವಿಕೆಟ್ ಹಿಂದುಗಡೆ ನಿಂತು ಪಂದ್ಯದ ಗತಿಯನ್ನು ಅರಿತುಕೊಳ್ಳುವ ಸಾಮರ್ಥ್ಯವೂ ಇದೆ. ಸೆಹ್ವಾಗ್ ನಂತೆ ಪಂದ್ಯಕ್ಕೆ ತಿರುವು ನೀಡೋ ಅಬ್ಬರದ ಆಟವೂ ಇದೆ. ಹಾಗೇ ಎದುರಾಳಿ ತಂಡದ ವೀಕ್ ನೆಸ್ ಅನ್ನು ಬೊಟ್ಟು ಮಾಡಿ ತೋರಿಸೋ ಧಮ್ ಕೂಡ ಇದೆ. ತಾನು ಗಳಿಸೋ ಪ್ರತಿ ರನ್ ಕೂಡ ಸುಲಭವಾಗಿ ಬರಬಾರದು. ಅದು ಎದುರಾಳಿ ತಂಡದ ಆಟಗಾರರನ್ನು ಸತಾಯಿಸಿ ಬರಬೇಕು ಅನ್ನೋ ಸಿದ್ಧಾಂತ ರಿಷಬ್ ಪಂತ್ ದು

ಹೌದು.. ರಿಷಬ್ ಪಂತ್ ಆಟ ಕೆಲವರಿಗೆ ಇಷ್ಟ ಆಗದೇ ಇರಬಹುದು. ಆತನನ್ನು ಟೀಕೆಯೂ ಮಾಡಬಹುದು. ಆದ್ರೆ ಒಳ್ಳೆಯ ಮನಸ್ಸಿನ ಹುಡುಗ. ಇರೋದನ್ನು ಇರೋ ಹಾಗೇ ಹೇಳುವ ಕಲ್ಮಶ ಇಲ್ಲದ ಹೃದಯವಂತ. ಸೋಲು ಗೆಲುವುಗಳನ್ನು ಸಮಾನವಾಗಿ ನೋಡುವ ಗುಣವೂ ಇದೆ. ಹಿರಿಯ ಆಟಗಾರರಿಗೆ ಗೌರವ.. ಸಹ ಆಟಗಾರರ ಜೊತೆಗೂ ಉತ್ತಮ ಭಾಂಧವ್ಯ ಹೊಂದಿರೋ ರಿಷಬ್ ಎದುರಾಲಿ ಆಟಗಾರರನ್ನು ನಗು ಮುಖದಿಂದಲೇ ಮಾತನಾಡಿಸೋ ಕಲೆಯನ್ನು ಹೊಂದಿದ್ದಾರೆ. ಆದ್ರೆ ನೆನಪಿರಲಿ.. ಯಶಸ್ಸಿನ ಅಲೆಯಲ್ಲಿ ಮೈಮರೆತ್ರೆ ಅಪಾಯವೂ ಇದೆ. ಹೀಗಾಗಿ ಸ್ಥಿರತೆಯನ್ನು ಕಾಯ್ದು ಕೊಳ್ಳಬೇಕಿದೆ.

ಅವಕಾಶಗಳು ಪದೇ ಪದೆ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಬಾಚಿ ಕೊಂಡು ಮುನ್ನಡೆಯಬೇಕು. ಹಾಗಂತ ದೊಡ್ಡವರ ಬೆಂಬಲ ಇದೆ ಅಂತ ಯಶಸ್ಸಿನ ಅಮಲಿನಲ್ಲಿ ತೇಲಾಡಿದರೆ ಅವನೊಬ್ಬನಿದ್ದ ಅಂತ ಆಗೋದು ಬೇಡ.. ಹುಷಾರಾಗಿರು ರಿಷಬ್.. ಕೀರ್ತಿಶನಿ ಹೆಗಲೇರದೇ ಇರಲಿ, ಅಹಂಕಾರ ನೆತ್ತಿಗೆ ಹತ್ತದಿರಲಿ, ಸಾಮರ್ಥ್ಯ ಎಂದಿಗೂ ಕುಗ್ಗದಿರಲಿ, ನಿನ್ನ ಸರಳ ಸಭ್ಯ ಸಜ್ಜನಿಕೆಯ ಸೌಮ್ಯ ಸ್ನೇಹಮಯಿ ವರ್ತನೆ ಸದಾಕಾಲ ಹೀಗೇ ಉಳಿಯಲಿ.. ಕ್ರಿಕೆಟ್ ಆಟದ ಕಡೆಗಿನ ನಿನ್ನ ಬದ್ಧತೆ, ಕೌಶಲ್ಯ ಮತ್ತು ಹೊಸತನಗಳ ದಾಟಿ ನಿತ್ಯ ನಿರಂತರವಾಗಿ ಉಳಿಯಲಿ.

Tags: #comeback#cricketlovers#cricketnews#delhi cricket#indiancricketer#rishab pant#saakshanews#saakshatv
ShareTweetSendShare
Join us on:

Related Posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!

by admin
June 18, 2026
0

ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ. ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಮೂರು...

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

by Shwetha
June 18, 2026
0

ದೇಶದ ಐದು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಅವಧಿಗೆ ಮುನ್ನ ನಡೆಯಲಿವೆ ಎಂಬ ಊಹಾಪೋಹಗಳಿಗೆ ಕೇಂದ್ರ...

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

by Shwetha
June 18, 2026
0

ಜಾಗತಿಕ ಆಹಾರ ಉದ್ಯಮದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಯಮ್.ಕಾಮ್ ತನ್ನ ಅಧೀನದಲ್ಲಿರುವ ಪ್ರಸಿದ್ಧ ಪಿಜ್ಜಾ ಹಟ್ ವ್ಯವಹಾರದ ಕೆಲವು ಭಾಗಗಳನ್ನು ಎರಡು ಪ್ರತ್ಯೇಕ ಒಪ್ಪಂದಗಳ ಮೂಲಕ ಒಟ್ಟು...

ಆ್ಯಪ್‌ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಟೆಲಿಗ್ರಾಮ್

ಆ್ಯಪ್‌ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಟೆಲಿಗ್ರಾಮ್

by Shwetha
June 18, 2026
0

ನೀಟ್ ಮರು-ಪರೀಕ್ಷೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಧಿಸಿರುವ ತಾತ್ಕಾಲಿಕ ನಿಷೇಧವನ್ನು ಪ್ರಶ್ನಿಸಿ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ. ಕೇಂದ್ರ ಸರ್ಕಾರದ ಕ್ರಮದಿಂದ ತಮ್ಮ ಸೇವೆಗೆ...

ಪಿಂಚಣಿ ಸ್ಥಗಿತ.. ಫಲಾನುಭವಿಗಳು ಕಂಗಾಲು.. ಮುಂದೇನು..?

ಪಿಂಚಣಿ ಸ್ಥಗಿತ.. ಫಲಾನುಭವಿಗಳು ಕಂಗಾಲು.. ಮುಂದೇನು..?

by admin
June 18, 2026
0

ಗ್ಯಾರಂಟಿ (GUARANTEE) ಯೋಜನೆಗೆ ಸರ್ಜರಿ ಬೆನ್ನಲ್ಲೇ ಇದೀಗ ರಾಜ್ಯದ ಲಕ್ಷ ಲಕ್ಷ ವೃದ್ಧರಿಗೆ ದೊಡ್ಡ ಆಘಾತವನ್ನೇ ಕೊಟ್ಟಿದೆ ಕಾಂಗ್ರೆಸ್ 2.0 ಸರ್ಕಾರ.. ಒಂದಲ್ಲಾ ಎರಡಲ್ಲಾ… 16 ಲಕ್ಷ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram