Rishabh Pant ಲಂಕಾ ಸರಣಿಗೆ ರಿಷಬ್ ಪಂತ್ ಯಾಕೆ ಆಯ್ಕೆಯಾಗದಿರಲು ಕಾರಣವೇನು..??
ತವರಿನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಬಿಸಿಸಿಐ ತಂಡವನ್ನು ಘೋಷಿಸಿದೆ.
ಆಯ್ಕೆ ಮಂಡಳಿ ಇಶಾನ್ ಕಿಶನ್ ಅವರನ್ನು ಟಿ20 ಹಾಗೂ ಏಕದಿನ ಸರಣಿಗೆ ವಿಕೆಟ್ ಕೀಪರ್ ನ್ನಾಗಿ ನೇಮಿಸಿದೆ. ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದೆ.
ರಿಷಬ್ ಪಂತ್ ಅವರನ್ನು ಈ ಸರಣಿಯಿಂದ ಯಾಕೆ ಕೈಬಿಟ್ಟಿದ್ದು ಅನ್ನೊ ಪ್ರಶ್ನೆ ಎದುರಾಗಿದೆ. ಪಂತ್ಗೆ ವಿಶ್ರಾಂತಿ ಕೊಡಲಾಗಿದೆಯೊ ಅಥವಾ ಕೈಬಿಡಲಾಗಿದೆಯೊ ಅನ್ನೋದು ಗೊತ್ತಾಗಿಲ್ಲ.
ಮೂಲಗಳ ಪ್ರಕಾರ ಪಂತ್ ಬೆಂಗಳೂರಿನ ಎನ್ ಸಿಗೆ ತೆರೆಳಿ ಅಭ್ಯಾಸ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಮೊನ್ನೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ಅಮೋಘ ಪ್ರದರ್ಶನದ ನೆರೆವಿನಿಂದ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡಲು ಸಾಧ್ಯವಾಯಿತು.
ಫೆಬ್ರವರಿ- ಮಾರ್ಚ್ನಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಸ್ಟ್ ಸರಣಿಯಲ್ಲಿ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ವೈಟ್ ಬಾಲ್ನಲ್ಲಿ ಪಂತ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಈ ವರ್ಷ ಪಂತ್ 25 ಟಿ20 ಪಂದ್ಯಗಳಿಂದ 364 ರನ್ ಗಳಿಸಿದ್ದಾರೆ.