ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

Rishab pant – ಇದು ಸಾವಿನ ಬಾಗಿಲು ಬಡಿದು..ವಾಪಸ್ ಬಂದವನ ನೈಜ ಕಥೆ..!

admin by admin
August 7, 2023
in Sports, ಕ್ರಿಕೆಟ್, ಕ್ರೀಡೆ
ENG vs IND

eng-vs-ind-pant-becomes-third-indian-wicketkeeper-hit-odi-century-outside-asia saaksha tv

Share on FacebookShare on TwitterShare on WhatsappShare on Telegram

Rishab pant – ಇದು ಸಾವಿನ ಬಾಗಿಲು ಬಡಿದು..ವಾಪಸ್ ಬಂದವನ ನೈಜ ಕಥೆ..!

ಆತ ಬದುಕಿ ಬಂದಿದ್ದೇ ಪವಾಡ..! ಯಾಕಂದ್ರೆ ಅದು ಅಂತಿಂಥ ಅಪಘಾತವಲ್ಲ. ರಣ ಭೀಕರ ಅಫಘಾತ. ಮೀತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದ ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದ ಪರಿಣಾಮ, ನಾಲ್ಕೈದು ಬಾರಿ ಪಲ್ಟಿಯಾಗಿ ಕಾರಿನಲ್ಲಿ ಬೆಂಕಿ ಆವರಿಸಿಕೊಂಡಿತ್ತು. ಆ ಕ್ಷಣವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಆ ಘಟನೆಯನ್ನು ನೆನಪಿಸಿಕೊಂಡಾಗ ಒಂದು ಘಳಿಗೆ ಮೈ ಝುಂ ಅನ್ನಿಸುತ್ತದೆ. ಅಂತಹುದರಲ್ಲಿ ಆ ಕಾರಿನಲ್ಲಿದ್ದ 25ರ ತರುಣನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ

Related posts

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

March 19, 2026
vvs lakshman and rahul dravid

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!

March 16, 2026

ಆದ್ರೆ ಆ ತರುಣ ವಿಚಲಿತನಾಗಲಿಲ್ಲ. ಸಾವನ್ನು ಕಣ್ಣಾರೆ ಕಂಡ್ರೂ ಒಂಚೂರು ಧೈರ್ಯ ಕಳೆದುಕೊಳ್ಳಲಿಲ್ಲ. ಕೈಗಳಿಗೆ ಬ¯ವಾದ ಏಟು… ಮೊಣಕಾಲು ಮುರಿದು ಹೋಗಿತ್ತು. .ಮೈಮೇಲೆ ರಕ್ತ ಸುರಿಯುತ್ತಿತ್ತು. ದೇಹ ಪೂರ್ತಿ ಸುಟ್ಟ ಗಾಯ. ನಡೆಯುವುದು ಅಸಾಧ್ಯ ಅಂತ ಗೊತ್ತಿತ್ತು. ಜೀವ ಉಳಿಸಿಕೊಳ್ಳಬೇಕಾದ್ರೆ ಬೆಂಕಿಗೆ ಆಹುತಿಯಾಗಿದ್ದ ಕಾರಿನಿಂದ ಹೊರಬರಲೇಬೇಕಿತ್ತು. ನರಕಯಾತನೆಯ ನೋವನ್ನು ಮರೆತು ಹೊರಬರುವ ಪ್ರಯತ್ನ ನಡೆಸುತ್ತಿದ್ದಾಗಲೇ ಸ್ಥಳಿಯ ಜನರು ಆತನನ್ನು ರಕ್ಷಣೆ ಮಾಡಿದ್ರು. ಒಂದು ಕ್ಷಣ ತೆವಲುತ್ತಾ ಬಂದು ನಡು ರಸ್ತೆಯಲ್ಲಿ ಕಷ್ಟಪಟ್ಟು ಕುಳಿತುಕೊಂಡು ಬೆಂಕಿಯಲ್ಲಿ ಉರಿಯುತ್ತಿದ್ದ ಕಾರನ್ನು ದಿಟ್ಟಿಸಿನೋಡುತ್ತಿದ್ದ. ನಾನು ಹೇಗೆ ಬದುಕಿ ಬಂದೆ ಎಂಬ ಪ್ರಶ್ನೆ ಆತನನ್ನು ಈಗಲೂ ಕಾಡುತ್ತಿರಬಹುದು.

ಆ ಕ್ಷಣ ಆತನಿಗೆ ಜೀವ ಉಳಿದ್ರೆ ಸಾಕು ಎಂದು ಅನ್ನಿಸಿರಬಹುದು. ಆದ್ರೆ ಕೈ ಕಾಲು ಮುರಿದು ಹೋಗಿದೆ ಎಂಬುದು ಗೊತ್ತಾದಾಗ ತನ್ನ ಬದುಕಿನ ಕನಸುಗಳು ಭಗ್ನವಾಯ್ತಲ್ಲ ಅಂತ ನೋವಿನ ವೇದನೆಯಲ್ಲೂ ಕಣ್ಣೀರು ಸುರಿಸುತ್ತಿದ್ದ. ಆತನ ಅದೃಷ್ಟವೋ ಏನೋ…ಗೊತ್ತಿಲ್ಲ. ತಲೆಗೆ ಮತ್ತು ಬೆನ್ನಿಗೆ ಸುಟ್ಟು ಗಾಯಗಳನ್ನು ಬಿಟ್ಟು ಬೇರೆ ಯಾವುದೇ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ. ಆತನಿಗೆ ಅಷ್ಟೇ ಸಾಕಿತ್ತು. ತನ್ನ ಅಪ್ಪ – ಅಮ್ಮನ ಕನಸುಗಳನ್ನು ಸಾಕಾರಗೊಳಿಸಲು ಇದು ಕೂಡ ಸವಾಲು. ಈ ಸವಾಲನ್ನು ಗೆದ್ರೆ ತಾನು ಮತ್ತೆ ಮೊದಲಿನಂತೆ ಆಗುತ್ತೇನೆ ಅನ್ನೋ ಆತ್ಮವಿಶ್ವಾಸ ಆತನ ಮನಸ್ಸಿನಲ್ಲಿ ಮೂಡಿತ್ತು. ಮತ್ತೆ ಎಲ್ಲವೂ ಪವಾಡ..ಜೊತೆಗೆ ಬಿಸಿಸಿಐನ ಮನಿ ಪವರ್ ಹಾಗೂ ಆತನದಲ್ಲಿದ್ದ ಛಲಗಾರಿಕೆ ಮತ್ತು ಧೈರ್ಯ. ಇದೀಗ ಆತ ಮತ್ತೆ ಮೈದಾನದಲ್ಲಿ ಬ್ಯಾಟ್ ಹಿಡಿದು ಅಭ್ಯಾಸ ಮಾಡುತ್ತಿದ್ದಾನೆ. ಕೈಗೆ ಗ್ಲೌಸ್ ಹಾಕೊಂಡು ವಿಕೆಟ್ ಕೀಪಿಂಗ್ ಪ್ರಾಕ್ಟೀಸ್ ಮಾಡ್ತಾ ಇದ್ದಾನೆ.
ಹೌದು, ಆತನೇ ರಿಷಬ್ ಪಂತ್. ಟೀಮ್ ಇಂಡಿಯಾದ ಫಿಯರ್‍ಲೆಸ್ ಕ್ರಿಕೆಟಿಗ. ಯಮನನ್ನೇ ಗೆದ್ದ ಛಲದಂಕಮಲ್ಲ. ಕಳೆದ ಡಿಸೆಂಬರ್‍ನಲ್ಲಿ ಡೆಹರಡೂನ್ ಹೆದ್ದಾರಿಯಲ್ಲಿ ಅಫಘಾತಕ್ಕೀಡಾದಾಗ ರಿಷಬ್ ಪಂತ್‍ನ ಕ್ರಿಕೆಟ್ ಬದುಕು ಮುಗಿದು ಹೋಯ್ತು ಅಂತ ಎಲ್ಲರೂ ಭಾವಿಸಿದ್ರು. ಆದ್ರೆ ರಿಷಬ್ ಪಂತ್ ಈಗ ಮೊದಲಿನ ರಿಷಬ್ ಪಂತ್ ಆಗುವತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದ್ದಾನೆ.
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್‍ನ ಎಲ್ಲಾ ಚಿಕಿತ್ಸೆಗಳ ವೆಚ್ಚಗಳನ್ನು ನೋಡಿಕೊಂಡ ಬಿಸಿಸಿಐ, ರಿಷಬ್ ಪಂತ್‍ಗೆ ಮರು ಜೀವ ನೀಡಿದೆ. ಸದ್ಯ ಎನ್‍ಸಿಎನಲ್ಲಿ ಅಭ್ಯಾಸದಲ್ಲಿ ನಿರತವಾಗಿರೋ ಪಂತ್, ಗಂಟೆಗೆ 140 ಕಿಲೋ ಮೀಟರ್ ವೇಗದಲ್ಲಿ ಬರುವಂತಹ ಎಸೆತಗಳನ್ನು ಎದುರಿಸುತ್ತಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರೋ ಪಂತ್, ಸದ್ಯದಲ್ಲೇ ಟೀಮ್ ಇಂಡಿಯಾವನ್ನು ಸೇರಿಕೊಳ್ಳಬಹುದು. ಆದ್ರೆ ಮುಂಬರುವ ವಿಶ್ವಕಪ್‍ನಲ್ಲಿ ಆಡೋದು ಅನುಮಾನವಾಗಿದೆ. ಫಿಟ್‍ನೆಸ್ ಪರೀಕ್ಷೆ, ಅಭ್ಯಾಸ ಪಂದ್ಯಗಳಲ್ಲಿ ಆಡಲು ಇನ್ನೂ ಕೆಲವು ಸಮಯ ಬೇಕಾಗಬಹುದು. ಹಾಗಾಗಿ ರಿಷಬ್ ಪಂತ್ ಮುಂದಿನ ವರ್ಷ ಫಿಟ್ ಆಂಡ್ ಫೈನ್ ಆಗಿ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳಬಹುದು.
ಏನೇ ಆದ್ರೂ ರಿಷಬ್ ಪಂತ್ ಅವರ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೆಚ್ಚಿಕೊಳ್ಳಲೇಬೇಕು. ಮೈದಾನದಲ್ಲಿ ಆಕ್ರಮಣಕಾರಿ ಪ್ರವೃತ್ತಿಯ ಆಟದ ಮೂಲಕ ಗಮನ ಸೆಳೆದಿರುವ ಪಂತ್, ನಿಜ ಬದುಕಿನಲ್ಲೂ ಆಕ್ರಮಣಕಾರಿ ಪ್ರವೃತ್ತಿಯಿಂದಲೇ ಸಾವನ್ನೇ ಗೆದ್ದು ಬಂದಿರೋ ಮಹಾಧೀರ

Tags: #rishab pantbccibengaluruCricketDelhidelhi capitalsncateam india
ShareTweetSendShare
Join us on:

Related Posts

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

by Shwetha
March 19, 2026
0

ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಇತ್ತೀಚೆಗೆ ನಡೆದ 2026ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಐತಿಹಾಸಿಕ ಜಯ ಸಾಧಿಸುವ ಮೂಲಕ...

vvs lakshman and rahul dravid

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!

by admin
March 16, 2026
0

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..! ಅದು 2001. ಮಾರ್ಚ್ 15. ಭಾರತ - ಆಸ್ಟ್ರೇಲಿಯಾ ನಡುವಿನ...

ವಿಶ್ವಕಪ್ ಗೆಲುವಿನ ಅಮಲಿನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಕಂಟಕವಾದ ಸಂಭ್ರಮಾಚರಣೆ

ವಿಶ್ವಕಪ್ ಗೆಲುವಿನ ಅಮಲಿನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಗೆ ಕಂಟಕವಾದ ಸಂಭ್ರಮಾಚರಣೆ

by Shwetha
March 13, 2026
0

ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮವು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ...

ಪಾಕ್ ಆಟಗಾರನಿಗೆ ಕೋಟಿ ಕೋಟಿ ಸುರಿದ ಕಾವ್ಯ ಮಾರನ್ : ದೇಶದ ಭಾವನೆಗಳಿಗಿಂತ ಆಟವೇ ಮುಖ್ಯವಾಯ್ತಾ ; ಸನ್‌ರೈಸರ್ಸ್ ಬಾಯ್ಕಾಟ್ ಟ್ರೆಂಡ್ ಶುರು

ಪಾಕ್ ಆಟಗಾರನಿಗೆ ಕೋಟಿ ಕೋಟಿ ಸುರಿದ ಕಾವ್ಯ ಮಾರನ್ : ದೇಶದ ಭಾವನೆಗಳಿಗಿಂತ ಆಟವೇ ಮುಖ್ಯವಾಯ್ತಾ ; ಸನ್‌ರೈಸರ್ಸ್ ಬಾಯ್ಕಾಟ್ ಟ್ರೆಂಡ್ ಶುರು

by Shwetha
March 13, 2026
0

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಪ್ರತಿಷ್ಠಿತ 'ದಿ ಹಂಡ್ರೆಡ್' ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಇದೀಗ ಭಾರೀ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಬಾರಿಯ ಟೂರ್ನಿಯಲ್ಲಿ ಇದೇ...

team india icc t-20worldcup 2026 champions

ವಿಶ್ವ ವಿಜಯದ ಮಹಾ ಪೂಜೆ… ಭಾರತಾಂಬೆಯ ಮುಕುಟಕ್ಕೆ ಮತ್ತೊಂದು ಐಸಿಸಿ ಗರಿ..!

by admin
March 9, 2026
0

ಮಾರ್ಚ್ 8. ವಿಶ್ವ ಮಹಿಳಾ ದಿನಾಚರಣೆ. ಇನ್ನೊಂದೆಡೆ 2026ರ ಟಿ-20 ವಿಶ್ವಕಪ್ ಫೈನಲ್ ಮ್ಯಾಚ್. ಭಾನುವಾರದ ಹೈವೋಲ್ಟೇಜ್ ಮ್ಯಾಚ್‍ನಲ್ಲಿ ನ್ಯೂಜಿಲೆಂಡ್ ಆಟಗಾರರು ಚೊಚ್ಚಲ ಐಸಿಸಿ ಟಿ-20 ಪ್ರಶಸ್ತಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram