Rishi Dhawan | ಐಪಿಎಲ್ ಆಡದಿರುವುದೇ ರಿಷಿ ಧವನ್ ಮಾಡಿದ ಅಪರಾಧವಾ..? rishi-dhawan-ipl team india
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಮತ್ತು ಮೂರು ಟಿ 20 ಸಿರೀಸ್ ಗೆ ಭಾರತ ತಂಡವನ್ನು ಪ್ರಕಟ ಮಾಡಲಾಗಿದೆ. ಬಿಸಿಸಿಐ ಪ್ರಕಟಿಸಿದ ತಂಡದಲ್ಲಿ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಮಿಂಚು ಹರಿಸಿದ್ದ ಆಲ್ ರೌಂಡರ್, ಹಿಮಾಚಲ್ ಪ್ರದೇಶದ ಆಟಗಾರ ರಿಷಿ ಧವನ್ ಹೆಸರು ಮಿಸ್ ಆಗಿದೆ. ಇದು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಂಡದಲ್ಲಿ ಉತ್ತಮವಾದ ಫಾಸ್ಟ್ ಬೌಲಿಂಗ್ ಆಲ್ ರೌಂಡರ್ ಇಲ್ಲದೇ ಎಂದು ಆಯ್ಕೆ ಸಮಿತಿ ಸದಸ್ಯರು ಮೊಸಲೆ ಕಣ್ಣೀರು ಇಡುತ್ತಾರೆ. ಆದ್ರೆ ದೇಶಿ ಟೂರ್ನಿಗಳಲ್ಲಿ ಆಕಾಶವೇ ಮಿತಿ ಎಂಬಂತೆ ಅಬ್ಬರಿಸಿ ರಿಷಿ ಧವನ್ ಗೆ ಯಾಕೆ ಅವಕಾಶ ಕೊಡಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.
Why did Venkatesh Iyer drop out of ODI team?
And why did Rishi Dhawan not get a chance in a format? 👇
*And this guy showed all-round performance like putting out fires in #SMAT & #VijayHazare Trophy.
*Day by day the value of Indian Domestic Cricket is getting lost. @BCCI
— Md Sahid Mondal (@imdsahidmondal) January 27, 2022
ಐಪಿಎಲ್ ನಲ್ಲಿ ಆಡದಿರುವು ರಿಷಿ ಧವನ್ ಮಾಡಿದ ಅಪರಾಧವಾ..? ಅದಕ್ಕೆ ಅವರನ್ನ ಟೀಂ ಇಂಡಿಯಾಗೆ ಸೆಲೆಕ್ಟ್ ಮಾಡಲಿಲ್ಲವಾ..? ಒಂದು ಕಾಲದಲ್ಲಿ ದೇಶಿ ಟೂರ್ನಿಯ ಪ್ರದರ್ಶನದ ಮೇಲೆ ಆಟಗಾರರನ್ನ ಸೆಲೆಕ್ಟ್ ಮಾಡಲಾಗುತ್ತಿತ್ತು. ಈಗ ಐಪಿಎಲ್ ಪ್ರದರ್ಶನದ ಆಧಾರವಾಗಿಟ್ಟುಕೊಂಡು ಆಟಗಾರರನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಕಳೆದ ಐಪಿಎಲ್ ನಲ್ಲಿ ಕೇವಲ ಮೂರು ಮ್ಯಾಚ್ ಗಳಲ್ಲಿ ಮಿಂಚಿದ ವೆಂಕಟೇಶ್ ಅಯ್ಯರ್ ಗೆ ಚಾನ್ಸ್ ನೀಡುತ್ತಿದ್ದೀರಿ.. ಆಯ್ಕೆ ಸಮಿತಿಯ ಸದಸ್ಯರು ಇನ್ನಾದರೂ ನಿದ್ದೆಯಿಂದ ಎದ್ದು ಪ್ರತಿಭಾವಂತರಿಗೆ ಚಾನ್ಸ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇನ್ನು ರಿಷಿ ಧವನ್, ಕಳೆದ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ ಏಳು ಮ್ಯಾಚ್ ಗಳನ್ನು ಆಡಿ 69.33 ಸರಾಸರಿಯೊಂದಿಗೆ 458 ರನ್ ಗಳಿಸಿದ್ದರು. ಇದರಲ್ಲಿ ಐದು ಹಾಪ್ ಸೆಂಚೂರಿಗಳಿವೆ. ಜೊತೆಗೆ 5.95 ಎಕನಾಮಿಯೊಂದಿಗೆ 14 ವಿಕೆಟ್ ಗಳನ್ನು ಪಡೆದಿದ್ದರು. ಬಳಿಕ ಮುಸ್ತಾಕ್ ಅಲಿ ಟೂರ್ನಿಯಲ್ಲಿ 117 ರನ್ ಗಳೊಂದಿಗೆ 14 ವಿಕೆಟ್ ಪಡೆದು ಅಬ್ಬರಿಸಿದ್ದರು.