ADVERTISEMENT
Friday, April 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೇರಿಕನ್ ಯಾತ್ರೆ:- ಚಿನ್ನದ ನಾಡೆಂದು ಕ್ಯಾಲಿಫೋರ್ನಿಯಾವನ್ನು ಸುಮ್ಮನೆ ಕರೆಯುವುದಿಲ್ಲ

Shwetha by Shwetha
October 22, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv yatrika episode 2
Share on FacebookShare on TwitterShare on WhatsappShare on Telegram

ಅಮೇರಿಕನ್ ಯಾತ್ರೆ:- ಚಿನ್ನದ ನಾಡೆಂದು ಕ್ಯಾಲಿಫೋರ್ನಿಯಾವನ್ನು ಸುಮ್ಮನೆ ಕರೆಯುವುದಿಲ್ಲ: Saakshatv yatrika episode 2

ನಾನು ಅಮೆರಿಕಾಗೆ ಬಂದ ಶುರುವಿನ 7 ತಿಂಗಳುಗಳ ಕಾಲ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಎಂಜಿಲಿಸ್‌ನಲ್ಲಿದ್ದೆ. Saakshatv yatrika episode 2

Related posts

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

ಮಲ್ಲಿಕಾರ್ಜುನ ಖರ್ಗೆಗೆ ಚಲವಾದಿ ನೇರ ಪ್ರಶ್ನೆ!

April 10, 2026
ಖರ್ಗೆ ಕುಟುಂಬದ ತೇಜೋವಧೆ: ಬಿಜೆಪಿ ವಿರುದ್ಧ ಕೆಪಿಸಿಸಿ ಕೆಂಡಾಮಂಡಲ, ಬಿಜೆಪಿ ನಾಯಕರ ‘ಚರಿತ್ರೆ’ ಕೆದಕಿದ ಕಾಂಗ್ರೆಸ್

ಖರ್ಗೆ ಕುಟುಂಬದ ತೇಜೋವಧೆ: ಬಿಜೆಪಿ ವಿರುದ್ಧ ಕೆಪಿಸಿಸಿ ಕೆಂಡಾಮಂಡಲ, ಬಿಜೆಪಿ ನಾಯಕರ ‘ಚರಿತ್ರೆ’ ಕೆದಕಿದ ಕಾಂಗ್ರೆಸ್

April 10, 2026

Saakshatv yatrika episode 2

ಹೆಚ್ಚುಕಮ್ಮಿ ಭಾರತೀಯರೆಲ್ಲಾ ಈ ರಾಜ್ಯದ ಹೆಸರನ್ನ ಕೇಳಿಯೇ ಇರುತ್ತಾರೆ. ಪ್ರವಾಸೋದ್ಯಮದಲ್ಲಿ, ನೈಸರ್ಗಿಕ ಸೌಂದರ್ಯದಲ್ಲಿ, ಆರ್ಥಿಕತೆಯಲ್ಲಿ, ಜನಸಂಖ್ಯೆಯಲ್ಲಿ, ಶಿಕ್ಷಣದಲ್ಲಿ ಯಾವುದೇ ಕ್ಷೇತ್ರ ತೆಗೆದುಕೊಳ್ಳಿ ಎಲ್ಲದರಲ್ಲೂ ಇವರು ಒಂದು ಕೈ ಮುಂದೆ. ಒಂದು ವೇಳೆ ಸ್ವಂತಂತ್ರ ದೇಶವಾಗಿದ್ದಿದ್ದರೂ ಕೂಡ ವಿಶ್ವದ ಮುಂಚೂಣಿ ದೇಶಗಳ ಸಾಲಿನಲ್ಲಿ ನಿಲ್ಲುತ್ತಿತ್ತು. ಒಂದು ಅದ್ಭುತ ರಾಜ್ಯ ಹೀಗಿರಬೇಕು ಅನ್ನುವುದಕ್ಕೆಂದೇ ಸೃಷ್ಟಿ ಮಾಡಿಟ್ಟ ಹಾಗಿದೆ. ಈ ರಾಜ್ಯಕ್ಕೆ ‘ಚಿನ್ನದ ನಾಡು’ ಎಂಬ ಅಡ್ಡಹೆಸರಿಟ್ಟುರುವುದು ಸುಮ್ಮನೇ ಅಲ್ಲ. ಇದರ ಬಗ್ಗೆ ಒಂದೇ ಪೋಸ್ಟಿನಲ್ಲಿ ಹೇಳುವುದು ಕಷ್ಟ. ಎರಡು ಮೂರು ಕಂತಿನಲ್ಲಿ ನನ್ನಿಂದಾದಷ್ಟು ತಿಳಿಸಲು ಪ್ರಯತ್ನಿಸುತ್ತೇನೆ.

ಈ‌ ನಾಡು ಕೇವಲ ಭಾರತೀಯರಿಗಲ್ಲ, ಅಮೆರಿಕನ್ನರಿಗೂ ಕನಸಿನ ತಾಣವೇ. ಹಾಗೆ ಅಷ್ಟು ಜನರನ್ನ ಆಕರ್ಷಿಸಲು ಇರುವ ಕಾರಣಗಳಾದರೂ ಏನು? ಮೊದಲನೆಯದಾಗಿ ವಾತಾವರಣದ ವಿಷಯಕ್ಕೆ ಬರೋಣ. ಪೂರ್ವ ಕರಾವಳಿ, ಪಂಚ ಮಹಾಸರೋವರಗಳ ಸುತ್ತಲಿನ ಪ್ರದೇಶಗಳಲ್ಲಿ ಇರುವಂತಹ ಹವಾಮಾನ ವೈಪರೀತ್ಯಗಳಾಗಲೀ, ಫ್ಲೋರಿಡಾ ಟೆಕ್ಸಸ್‌ಗಳಲ್ಲಿ ಆಗಾಗ ಸಂಭವಿಸುವಂತಹ ನೈಸರ್ಗಿಕ ದುರಂತಗಳಾಗಲಿ, ಇಲ್ಲಿಲ್ಲ. ಇಲ್ಲ ಅಂದರೆ ಇಲ್ಲವೇ ಇಲ್ಲ ಅಂತಲ್ಲ, ಅಂತಹ ಪ್ರದೇಶಗಳು ಜನನಿಬಿಡ ಪ್ರದೇಶಗಳಿಂದ ದೂರದಲ್ಲಿವೆ. ಅತ್ಯಂತ ವಾಸಯೋಗ್ಯ ಸ್ಥಳವಾದ ಶಾಂತಸಾಗರದ ತೀರ ಪ್ರದೇಶಗಳು ನಿಜಕ್ಕೂ ಅದ್ಭುತ ಹವಾಮಾನ ಹೊಂದಿವೆ. ಆದರೆ ವಿಚಿತ್ರವೆಂದರೆ ಇದನ್ನೂ ಕೆಲ ಕಾರಣಕ್ಕೆ ದ್ವೇಷಿಸುತ್ತಾರೆ. ವಾತಾವರಣದ ಬದಲಾವಣೆಗಳೇ ಇಲ್ಲದ ಅಲ್ಲಿ ಯಾವನಿರ್ತಾನೆ ಅಂತ ನನಗೆ ವಾಹನ ಚಾಲನೆ ಕಲಿಸಿಕೊಟ್ಟಿದ್ದ ಮಿಲಿಟರಿ ತಾತ ಅಸಹನೆ ವ್ಯಕ್ತಪಡಿಸಿದ್ದರು.

ಅಮೇರಿಕನ್ ಯಾತ್ರೆ: ನೇಟಿವ್ ಅಮೇರಿಕನ್ನರ ತವರು ಓಕ್ಲಹೋಮಾ ಎಂಬ ಕಟ್ಟರ್ ಸಂಪ್ರದಾಯಸ್ಥ ಕ್ರೈಸ್ತರ ನೆಲೆವೀಡಿನ ಕುರಿತು

ವ್ಯವಸಾಯದಲ್ಲಿ ಕೂಡ ಕ್ಯಾಲಿಫೋರ್ನಿಯಾ ಒಂದು ಕೈ ಮೇಲೇ. ಪ್ರಪಂಚದ 80% ಬಾದಾಮಿ ಈ ರಾಜ್ಯದಿಂದ ಬರುತ್ತದೆ ಎಂದು ಗೊತ್ತಾದಾಗ ನನಗೆ ಬಹಳ ಆಶ್ಚರ್ಯವಾಗಿತ್ತು. ಬಾದಾಮಿ ಮಾತ್ರವಲ್ಲ ಆಹಾರ ಧಾನ್ಯಗಳು, ಹಣ್ಣುಗಳು ಮುಂತಾದವುಗಳು ಕೂಡಾ ಹೇರಳ ಪ್ರಮಾಣದಲ್ಲಿ ಬೆಳೆಯಲ್ಪಡುತ್ತವೆ. ಒಮ್ಮೆ ನಾವು ಪ್ರವಾಸಕ್ಕೆ ಹೋಗಿದ್ದಾಗ ಚಿಕ್ಕ ಪುಟ್ಟ ಗುಡ್ಡಗಳ ದಾಟಿ ಅತ್ಯಂತ ವಿಸ್ತಾರವಾದ ಬಯಲು ಪ್ರದೇಶಕ್ಕೆ ನಮ್ಮ‌ ಬಸ್ಸು ಪ್ರವೇಶಿಸಿದಾಗ ಆಶ್ಚರ್ಯವಾಗಿತ್ತು. ಮುಗಿದರೂ ಮುಗಿಯದಷ್ಟು ದೂರದವರೆಗೆ ಕೃಷಿ ಭೂಮಿಗಳು ಕಾಣುತ್ತಿದ್ದವು. ಕುತೂಹಲ ತಡೆಯಲಾಗದೇ ಅಲ್ಲೇ ಆ ಪ್ರದೇಶದ ಬಗ್ಗೆ ಹುಡುಕಿದ್ದೆ. ಅದು ಕ್ಯಾಲೊಫೋರ್ನಿಯಾದ ಮಧ್ಯ ಕಣಿವೆ. ಹೆಸರೇ ಹೇಳುವಂತೆ ಅಲ್ಲಿನ ಕೇಂದ್ರಭಾಗದಲ್ಲಿನ ವಿಸ್ತಾರವಾದ ಬಯಲು ಭೂಮಿ. ಪ್ರಪಂಚದ ಅತ್ಯುತ್ತಮ ಕೃಷಿ ಪ್ರದೇಶಗಳಲ್ಲಿ ಒಂದು. ಅದೇ ನೀವು ಕ್ಯಾಲಿಫೋರ್ನಿಯಾದ ಉತ್ತರ ಭಾಗದಲ್ಲಿರುವ ನಾಪಾ ಕಣಿವೆಗೆ ಹೋದರೆ ಉತ್ತಮ ದರ್ಜೆಯ ದ್ರಾಕ್ಷಿಯನ್ನು ಬೆಳೆಯುತ್ತಾರೆ. ಅದಕ್ಕೆ ನಾಪಾ ಕಾಣಿವಯ ವೈನುಗಳು ಬಹು ಪ್ರಸಿದ್ಧ. ಸರಿ ಅಲ್ಲಿ ಬಾದಾಮಿ ಬೆಳಿತಾರೆ, ದ್ರಾಕ್ಷಿ ಬೆಳಿತಾರೆ, ಇತರ ಹಣ್ಣುಗಳಾಯ್ತು, ಆಹಾರ ಧಾನ್ಯಗಳಾಯ್ತು, ಹಾಲಿನ ಉತ್ಪನ್ನಗಳಾಯ್ತು ಮತ್ತೇನು?

ನಂಬುವುದಕ್ಕೆ ಕಷ್ಟ, ಕ್ಯಾಲಿಫೋರ್ನಿಯಾದ ನಾಲ್ಕನೇ ದೊಡ್ಡ ಕೃಷಿ ಉತ್ಪನ್ನ ಗಾಂಜಾ. ಮೆರುವಾನಾ ಅಥವಾ ಗಾಂಜಾವನ್ನು ಇಲ್ಲಿ ಮನೋರಂಜನೆಯ ಉದ್ದೇಶಕ್ಕೆ ಬಳಸುವುದನ್ನ ಕಾನೂನುಬದ್ಧಗೊಳಿಸಲಾಗಿದೆ (ಕ್ಯಾಲಿಫೋರ್ನಿಯಾ ಮತ್ತು ಇನ್ನೂ ಹಲವು ರಾಜ್ಯಗಳಲ್ಲಿ ಇದು ಲೀಗಲ್). ನಿಗದಿತ ವಯಸ್ಸನ್ನು ದಾಟಿದ ಯಾವುದೇ ವ್ಯಕ್ತಿ ತನ್ನ ಗುರುತಿನ ಚೀಟಿ ತೋರಿಸಿ ತರಕಾರಿ ತೆಗೆದುಕೊಳ್ಳುವಂತೆ ನಿಗದಿತ ಪ್ರಮಾಣದ ಗಾಂಜಾ ತೆಗೆದುಕೊಳ್ಳಬಹುದು‌. ಆದ್ದರಿಂದ ಕೆಲ ಅನುಮತಿಯೊಡನೆ ರಾಜಾರೋಶವಾಗಿ ಗಾಂಜಾ ಕೃಷಿ ,ಸಾಗಾಣಿಕೆ ಮಾಡಬಹುದು (ಇದರಲ್ಲಿ ದೊಡ್ಡಪಾಲು ವೈದ್ಯಕೀಯ ಬಳಕೆಗೆ ಹೋಗುತ್ತದೆ). ಒಂದು ವಿಷಯ ಮೆರುವಾನಾಗೆ ಅನುಮತಿಯಿದೆ ಅಂದ ಮಾತ್ರಕ್ಕೆ ಆ ವಿಷಯದಲ್ಲಿ ಸ್ವೇಚ್ಛೆಯಿದೆ ಅಂತ ಅಲ್ಲ. ಅದಕ್ಕೆ ಸೇವನೆಗಾಗಲೀ ಕೃಷಿಗಾಗಲೀ ಕಟ್ಟುನಿಟ್ಟಾದ ನೀತಿ ನಿಯಮಗಳಿವೆ, ಅದಕ್ಕೇ ಅದು ಅಲ್ಲಿ ಸಾಮಾಜಿಕ ಪಿಡುಗಾಗಿಲ್ಲ.

Saakshatv yatrika episode 2

ರಾಜ್ಯದ ಹೆಚ್ಚಿನ ಜನಸಂಖ್ಯೆ ಸ್ಥಿತವಾಗಿರುವುದು ಮುಖ್ಯವಾಗಿ ಎರಡು ಪ್ರದೇಶಗಳಲ್ಲಿ. ಸ್ಯಾನ್ ಫ್ರಾನ್‌ಸಿಸ್ಕೋ ಮತ್ತಿತ್ತರ ನಗರಗಳನ್ನು ಒಳಗೊಂಡ ಕೊಲ್ಲಿ ಪ್ರದೇಶ ಮತ್ತು ಲಾಸ್ ಎಂಜಿಲಿಸ್, ಸ್ಯಾನ್ ಡಿಯಾಗೋ ಮೊದಲಾದ ನಗರಗಳ ದಕ್ಷಿಣ ಕ್ಯಾಲಿಫೋರ್ನಿಯಾ. ಇದನ್ನ ಬಿಟ್ಟು ರಾಜಧಾನಿಯಾದ ಸ್ಯಾಕ್ರಮೆಂಟೋ, ಫ್ರೆಸ್ನೋ ಮುಂತಾದ ಕೆಲ ನಗರ ಪ್ರದೇಶಗಳಿವೆ.

ಈಗಲೇ ತುಂಬಾ ಹೇಳಿ ಬೋರು ಹೊಡೆಸಲ್ಲ. ಮುಂದಿನ ಪೋಸ್ಟಿನಲ್ಲಿ ಅಲ್ಲಿನ ಉದ್ಯಮಗಳ ಕುರಿತು ಹೇಳಲು ಪ್ರಯತ್ನಿಸುತ್ತೇನೆ.

ವಿ.ಸೂ:- ಪಟಕ್ಕೆ ಪ್ರತ್ಯೇಕ ವಿವರಣೆ ಬೇಕಿಲ್ಲ. ಸ್ಯಾನ್ ಫ್ರಾನ್ಸಿಸ್ಕೋದ ಸ್ವರ್ಣಸೇತುವಿನ ದೃಷ್ಯ.

ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ

-ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Tweets by SaakshaTv

 

Tags: americaCaliforniagolden gatesan francisco
ShareTweetSendShare
Join us on:

Related Posts

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

ಮಲ್ಲಿಕಾರ್ಜುನ ಖರ್ಗೆಗೆ ಚಲವಾದಿ ನೇರ ಪ್ರಶ್ನೆ!

by Shwetha
April 10, 2026
0

ಬ್ರಾಹ್ಮಣರ ಕುರಿತು ನೀಡಿದ ಹೇಳಿಕೆಗಳ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನೀವು ಬ್ರಾಹ್ಮಣರ ಬಗ್ಗೆ ಇಷ್ಟು ಮಾತಾಡ್ತೀರಾ,...

ಖರ್ಗೆ ಕುಟುಂಬದ ತೇಜೋವಧೆ: ಬಿಜೆಪಿ ವಿರುದ್ಧ ಕೆಪಿಸಿಸಿ ಕೆಂಡಾಮಂಡಲ, ಬಿಜೆಪಿ ನಾಯಕರ ‘ಚರಿತ್ರೆ’ ಕೆದಕಿದ ಕಾಂಗ್ರೆಸ್

ಖರ್ಗೆ ಕುಟುಂಬದ ತೇಜೋವಧೆ: ಬಿಜೆಪಿ ವಿರುದ್ಧ ಕೆಪಿಸಿಸಿ ಕೆಂಡಾಮಂಡಲ, ಬಿಜೆಪಿ ನಾಯಕರ ‘ಚರಿತ್ರೆ’ ಕೆದಕಿದ ಕಾಂಗ್ರೆಸ್

by Shwetha
April 10, 2026
0

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಬಿಜೆಪಿ ನಾಯಕರು ನಡೆಸುತ್ತಿರುವ ನಿರಂತರ ವೈಯಕ್ತಿಕ ದಾಳಿಗಳ ವಿರುದ್ಧ...

ವಿಶ್ವಗುರು ಭ್ರಮೆಯಲ್ಲಿ ಭಾರತ, ಸಂಧಾನದ ಕಣದಲ್ಲಿ ಪಾಕ್: ದೇಶದ ವಿದೇಶಾಂಗ ನೀತಿಯನ್ನು ಹೀಯಾಳಿಸಿದ ನಟ ಕಿಶೋರ್

ವಿಶ್ವಗುರು ಭ್ರಮೆಯಲ್ಲಿ ಭಾರತ, ಸಂಧಾನದ ಕಣದಲ್ಲಿ ಪಾಕ್: ದೇಶದ ವಿದೇಶಾಂಗ ನೀತಿಯನ್ನು ಹೀಯಾಳಿಸಿದ ನಟ ಕಿಶೋರ್

by Shwetha
April 10, 2026
0

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವನ್ನು ತಗ್ಗಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವುದು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯನ್ನು ತೀವ್ರವಾಗಿ ಟೀಕಿಸಿರುವ...

ದಲಿತರು ಅಲ್ಪಸಂಖ್ಯಾತರು ಈ ದೇಶದವರಲ್ಲ ಎಂದು ಹೇಳಿಬಿಡಿ ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು

ದಲಿತರು ಅಲ್ಪಸಂಖ್ಯಾತರು ಈ ದೇಶದವರಲ್ಲ ಎಂದು ಹೇಳಿಬಿಡಿ ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು

by Shwetha
April 10, 2026
0

ಕಲಬುರಗಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಬಿಜೆಪಿ ಸಂಖ್ಯಾಬಲದ...

‘ಪಾಕ್ ವಿಶ್ವಾಸಾರ್ಹ ಮಧ್ಯಸ್ಥಿಕೆದಾರನಲ್ಲ’.. ಇಸ್ರೇಲ್ ಅನುಮಾನ

‘ಪಾಕ್ ವಿಶ್ವಾಸಾರ್ಹ ಮಧ್ಯಸ್ಥಿಕೆದಾರನಲ್ಲ’.. ಇಸ್ರೇಲ್ ಅನುಮಾನ

by Shwetha
April 10, 2026
0

ಇರಾನ್-ಅಮೆರಿಕಾ ನಡುವೆ ಕದನವಿರಾಮಕ್ಕೆ ನಾವು ಕಾರಣ ಎಂಬಂತೆ ಪಾಕಿಸ್ತಾನ ಹೇಳಿಕೊಳ್ಳುತ್ತಿರುವ ಹಿನ್ನೆಲೆ, ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೂವೆನ್ ಅಜರ್ ಪಾಕ್‌ನ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಸಂಶಯ ವ್ಯಕ್ತಪಡಿಸಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram