ಸಮಂತಾ ನಾಗಚೈತನ್ಯ ಜೊತೆಗಿನ ಡಿವೋರ್ಸ್ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.. ಸಾಕಷ್ಟು ಟೀಕೆಗಳು , ಟ್ರೋಲ್ ಗಳನ್ನ ಎದುರಿಸಿ ಮತ್ತೆ ಸ್ಟ್ರಾಂಗ್ ಆಗಿರುವ ಸ್ಯಾಮ್ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಿದ್ದಾರೆ.. ಬಿಡುವಿನ ಟೈಮ್ ನಲ್ಲಿ ಪ್ರೆಂಡ್ಸ್ ಜೊತೆಗೆ ಎಂಜಾಯ್ ಮಾಡ್ತಾ ಪಾಸ್ಟ್ ಮರೆಯುವ ಪ್ರಯತ್ನದಲ್ಲಿದ್ದಾರೆ..
ಇತ್ತೀಚೆಗೆ ಅಲ್ಲು ಅರ್ಜುನ್ ಅಭಿನಯದ ಪುಷ್ ಸಿನಿಮಾದಲ್ಲಿ ಹಾಟ್ ಅಂಡ್ ಗ್ಲಾಮರಸ್ ಆಗಿ ಐಟಮ್ ಸಾಂಗ್ ಗೆ ಸಮಂತಾ ಹೆಜ್ಜೆ ಹಾಕಿದ್ರು.. ಈ ಹಾಡು ಸಿನಿಮಾಗೆ ಪ್ಲಸ್ ಆಯಿಂಟ್.. ಸದ್ಯ ಸಾಂಪತ್ಯ ಮುರಿದು ಬಿದ್ದ ನಂತರ ಸಾಕಷ್ಟು ಕುಗ್ಗಿ ಹೋಗಿ ತೊಂದರೆ ಅನುಭವಿಸಿ ನೋವಿನಿಂದ ಹೊರಬಂದಿರುವ ಬಗ್ಗೆ ಸಮಂತಾ ಕಾರ್ಯಕ್ರಮದಲ್ಲಿ ಒಂದರಲ್ಲಿ ಮಾತನಾಡುವಾಗ ಅನೇಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ..
‘ನೀವು ಮಾನಸಿಕವಾಗಿ ತೊಂದರೆಗೊಳಗಾದಾಗ ಸಹಾಯವನ್ನು ಪಡೆಯಲು ಯಾವುದೇ ನಿರ್ಬಂಧಗಳು ಇರಬಾರದು. ನನ್ನ ವಿಷಯದಲ್ಲಿ, ನನ್ನ ಸಲಹೆಗಾರರು ಮತ್ತು ಸ್ನೇಹಿತರ ಸಹಾಯದಿಂದ ನಾನು ನನ್ನ ಮಾನಸಿಕ ಆರೋಗ್ಯ ಸುಧಾರಿಸಿಕೊಳ್ಳಲು ಸಾಧ್ಯವಾಯಿತು. ದೈಹಿಕ ಗಾಯಗಳಿಗೆ ನಾವು ಹೇಗೆ ವೈದ್ಯರ ಬಳಿಗೆ ಹೋಗುತ್ತೇವೆಯೋ, ಹಾಗೆಯೇ ನಮ್ಮ ಹೃದಯಕ್ಕೆ ನೋವಾಗಿದ್ದರೆ ಅಥವಾ ಮಾನಸಿಕವಾಗಿ ನಾವು ತೊಂದರೆ ಅನುಭವಿಸುತ್ತಿದ್ದರೆ ನಾವು ವೈದ್ಯರನ್ನು ಸಂಪರ್ಕಿಸಬೇಕು ಎಂದಿದ್ದಾರೆ.
ನಾನೇನಾದ್ರೂ ಮಾನಸಿಕವಾಗಿ ಕುಗ್ಗಿ ಮತ್ತೆ ಸುಧಾರಿಸಿಕೊಂಡು ಯಶಸ್ವಿಯಾಗಿದ್ದೀನಿ ಅಂದ್ರೆ ಅದಕ್ಕೆ ಕಾರಣ ನಾನು ಗಟ್ಟಿಗಿತ್ತಿಯಾಗಿದ್ದಕ್ಕೆ ಅಲ್ಲ. ಅದಕ್ಕೆ ಮುಖ್ಯ ಕಾರಣ ನನ್ನ ಸುತ್ತಲಿರುವ ಅನೇಕರು. ಅವರು ನನಗೆ ಧೈರ್ಯ ತುಂಬಿದ್ದರಿಂದ ನಾನು ಬಲಶಾಲಿಯಾಗಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.
ನಾನು ಕುಗ್ಗಿದ್ದಾಗ ನನಗೆ ಬಹಳಷ್ಟು ಜನರು ಸಹಾಯ ಮಾಡಿದ್ದಾರೆ. ಅವರು ತಮ್ಮ ಸಾಕಷ್ಟು ಸಮಯ ಮತ್ತು ಶ್ರಮವನ್ನು ಖರ್ಚು ಮಾಡಿ ನನಗೆ ಸಹಾಯ ಮಾಡಿದ್ದಾರೆ.. ಅದಕ್ಕೆ ಈಗ ನಾನು ಸಾಮಾನ್ಯ ಜೀವನಕ್ಕೆ ಮರಳಿದ್ದೇನೆ ಎಂದಿದ್ದಾರೆ.