SC, S T ಮೀಸಲಾತಿ – ಅಂದು ಗೇಲಿ ಮಾಡಿದವರಿಗೆ ಟಾಂಗ್ ನೀಡದ ಶ್ರೀರಾಮುಲು ..
SC, S T ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳ ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ . ಈ ನಿರ್ಧಾರ ಕೈಗೊಂಡ ಸಿ ಎಂ ಬೊಮ್ಮಾಯಿ ನಿರ್ಧಾರಕ್ಕೆ ನಾನು ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದು ಸಾರಿಗೆ ಸಚಿವ ಶ್ರೀ ರಾಮುಲು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಳಿಗೆ ಮೀಸಲಾತಿ ಹೆಚ್ಚಿಸೋ ಐತಿಹಾಸಿಕ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹೃತ್ಪೂರ್ವಕ ವಂದನೆಗಳು.
ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿಯ ನ್ಯಾಯ ಸಮ್ಮತ ವರದಿ ಅನುಷ್ಠಾನಕ್ಕೆ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಪರಿಶಿಷ್ಟ ಜಾತಿ ಮೀಸಲಾತಿ ಶೇ.15 ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡ ಮೀಸಲಾತಿ ಶೇ.3 ರಿಂದ ಶೇ.7ಕ್ಕೆ ಏರಿಕೆಗೆ ಸರ್ವ ಸಮ್ಮತ ನಿರ್ಣಯ ಕೈಗೊಳ್ಳಲಾಗಿದೆ. ಸಮಾಜಿಕ ನ್ಯಾಯದ ಪರ ನುಡಿದಂತೆ ನಡೆವ ಸರ್ಕಾರ ನಮ್ಮದು ಎಂದು ಶ್ರೀ ರಾಮುಲು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನ ವಿಧಾನಸೌಧ ದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಾರಿಗೆ ಸಚಿವರು ವಾಲ್ಮಿಕಿ ಸಮುದಾಯ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳ ಐತಿಹಾಸಿಕ ಕ್ಷಣದಲ್ಲಿ ನಾವಿದ್ದೇವೆ. ಹಲವು ವರ್ಷಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ.
ಇನ್ನೂ ಈ ವಿಚಾರವಾಗಿ ನಾನು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ರಕ್ತದಿಂದ ಬರೆದುಕೊಡ್ತಿನಿ ಎಂದು ಹೇಳುತ್ತಾನೆ ಆದ್ರೆ ಏನೂ ಆಗಲ್ಲ ಎಂದು ಗೇಲಿ ಮಾಡಿದ್ರು ಆದ್ರೆ ಮೀಸಲಾತಿ ಬೇಡಿಕೆ ಕೈ ಬಿಡಲಿಲ್ಲ ಎಂದು ಶ್ರೀ ರಾಮುಲು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
SC, ST Reservation – Sriramulu give a tong to those who made fun of him that day..