ಕೊಡಗು: ಕಣ್ಣಿಗೆ ಬೂದಿ ಎರಚಿ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಕುಶಾಲನಗರ ತಾಲ್ಲೂಕಿನ ಗುಡ್ಡಹೊಸೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿನ ಪಿಎಂ ಇಸ್ಮಾಯಿಲ್ ಎಂಬುವವರ ಮನೆಯ ಬಳಿ ಈ ಘಟನೆ ನಡೆದಿದ್ದು, ಖದೀಮರು ಇಸ್ಮಾಯಿಲ್ ಮನೆ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಕಳ್ಳರು ಮುಖಕ್ಕೆ ಬೂದಿ ಎರಚಿದ್ದಾರೆ.
ಕೂಡಲೇ ಇಸ್ಮಾಯಿಲ್ ಪ್ರಜ್ಞೆ ತಪ್ಪಿದ್ದಾರೆ. ಆಗ ಖದೀಮರು ಮನೆಗೆ ನುಗ್ಗಿ ಮನೆಯಲ್ಲಿದ್ದ 45 ಗ್ರಾಂ ಚಿನ್ನವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ.
45 ಗ್ರಾಂ ಚಿನ್ನ ಹಾಗೂ ಐದು ಸಾವಿರ ರೂ. ನಗದು ದೊಚಿ ಪರಾರಿಯಾಗಿದ್ದಾರೆ. ಇದೇ ರೀತಿ ಮತ್ತೊಂದು ಘಟನೆ ಮಾಡಲು ಯತ್ನಿಸಿದ್ದು, ಅದು ವಿಫಲಾಗಿದೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.