ಬೆಂಗಳೂರು ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳ ವಿಚಾರಣೆ ಚುರುಕುಗೊಂಡಿದ್ದು, ಬಾಂಬರ್ ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಸಮುದ್ರ ಮಾರ್ಗದ ಮೂಲಕ ಬಾಂಬರ್ ಪರಾರಿಯಾಗಲು ಯತ್ನಿಸಬಹುದು ಎಂಬ ಶಂಕೆಯಿಂದ ಕರಾವಳಿ ಪ್ರದೇಶದಲ್ಲಿ ಅಲರ್ಟ್ ಆಗಿದ್ದಾರೆ. ಹೀಗಾಗಿ ಕರಾವಳಿ ಕಾವಲು ಪೊಲೀಸ್ ಪಡೆ ಈ ಭಾಗದಲ್ಲಿ ಅಲರ್ಟ್ ಆಗಿದೆ. ಸಮುದ್ರದಲ್ಲಿ ಕೂಡ ಶೋಧ ಕಾರ್ಯ ನಡೆಸಲಾಗಿದೆ. ಮಂಗಳೂರು, ಉಡುಪಿ, ಕುಂದಾಪುರದವರೆಗೆ ಹಾಗೂ ಭಟ್ಕಳದಿಂದ ಕಾರವಾರದವರೆಗೆ ಶೋಧ ಕಾರ್ಯ ನಡೆಸಲಾಗಿದೆ. ಸಂಶಯಾಸ್ಪದ ವ್ಯಕ್ತಿ ಹಾಗೂ ಬೋಟ್ ಕಂಡು ಬಂದರೆ ಮಾಹಿತಿ ನೀಡುವಂತೆ ಮೀನುಗಾರರಿಗೆ ಸೂಚಿಸಲಾಗಿದೆ.