Senior political leader announced his retirement-ಮೈಸೂರು : ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕಂಡ ಹಿರಿಯ ರಾಜಕೀಯ ನಾಯಕರಾದ ದಲಿತ ಮುಕಂಡರಾಗಿರುವ ಚಾಮರಾಜನಗರದ ಸಂಸದರಾಗಿರುವ ವಿ ಶ್ರೀನಿವಾಸ್ ಅವರು ತಮ್ಮ ಸುಧೀರ್ಘ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು
ನನ್ನ ರಾಜಕೀಯ ಜೀವನಕ್ಕೆ ೫೦ ವರ್ಷ ತುಂಬುತ್ತಿದೆ. ಇನ್ನೂ ಒಂದುವರೆ ವರ್ಷದಲ್ಲಿ ನನ್ನ ಸಂಸದಿಯ ಅವಧಿಯು ಮುಗಿಯುತ್ತದೆ. ಈಗ ನನಗೆ ಆರೋಗ್ಯ ಸರಿಯಿಲ್ಲ. ಹಾಗಾಗಿ ಅಲ್ಲಿಗೆ ನಾನು ನಿವೃತ್ತಿ ಪಡೆಯುತ್ತೆನೆ ಎಂದು ಭಾವುಕರಾಗಿ ಕಣ್ಣಿರಿಟ್ಟು ನುಡಿದರು.
ನಾನು 1977 ರಲ್ಲಿ ಜನತಾಪಕ್ಷದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದೆ, ರಾಜಕೀಯ ಪ್ರವೇಶಿಸಿದ ಮೊದಲನೇ ಭಾರಿಯೆ ಗೆಲುವು ಪಡೆದಿದ್ದೇನೆ , ನಾನು ಇಲ್ಲಿಯವರೆಗೆ ಒಟ್ಟು14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೆನೆ , ಅದರಲ್ಲಿ 11 ಚುನಾವಣೆಯಲ್ಲಿ ಜಯ ಸಾಧಿಸಿದ್ದೆನೆ.
ಈಗ ಸಂಸದನಾಗಿ ಒಂದುವರೆ ವರ್ಷ ಪೂರ್ಣಗೋಳಿಸಿದರೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷ ಸಂಪೂರ್ಣವಾಗುತ್ತದೆ . ಅಲ್ಲಿಗೆ ನಾನು ನಿವೃತ್ತಿಯಾಗುತ್ತೆನೆ .
ನಾನು ರಾಜಕೀಯದಲ್ಲಿ ಇರುವವರೆಗೂ ಒಂದು ಕಪ್ಪು ಚುಕ್ಕೆ ಇಲ್ಲದಂತೆ ,ಒಬ್ಬರಿಂದಲೂ ಬೊಟ್ಟು ಮಾಡಿಸಿಕೊಳ್ಳದಂತೆ ನಡೆದು ಬಂದಿದ್ದೆನೆ ಎಂದರು.
ಆದರೆ ಈಗ ಅಭಿವೃದ್ದಿಯಬದಲು ಕೇವಲ ಮತಕ್ಕಾಗಿ ರಾಜಕಾರಣಿಗಳು ದಲಿತರನ್ನು ಬಳಸಿಕೊಂಡು ನಂತರ ಅವರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ .
ಈ ರೀತಿಯ ನೀತಿಯನ್ನು ಬ್ರಿಟಿಷರ ಅನುಸಿಸುತ್ತಿದ್ದರು ಇದಕ್ಕೆ ಒಡೆದು ಆಳುವ ನೀತಿ ಎಂದು ಕರೆಯುತ್ತಾರೆ. ಇದು ಅತ್ಯಂತ ಅಪಾಯಕಾರಿದ ನೀತಿಯಾಗಿದೆ. ದಲಿತರು ಒಗ್ಗಟನ್ನು ಮುರಿಯಲು ಅವಕಾಶ ಕೊಡಬಾರದು . ದೇಶದಲ್ಲಿ ದಲಿತರ ಸ್ಥಿತಿಗತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಿರುವೆ .
ಇಂದಿಗೂ ಹಳ್ಳಿಗಳಲ್ಲಿ ಪ್ರತ್ಯೇಕವಾಗಿ ಕಾಲೋನಿಗಳಿವೆ . ನಗರದಲ್ಲಿ ಸ್ಲಂ ಗಳಲ್ಲಿ ದಲಿತರು ಜೀವನ ನಡೆಸುತ್ತಿದ್ದಾರೆ. ಶಿಕ್ಷಣ ಅಧಿಕಾರ ,ಸಂಪತ್ತು ಇಲ್ಲದೆ ಈ ಸಮೂಹವನ್ನು ಹೇಗೆ ಮುಂದೆ ತರಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದೆ ಎಂದು ಹೇಳಿದರು.