Shimoga | ಹಳ್ಳಕ್ಕೆ ಬಿದ್ದು ರೈತ ಮಹಿಳೆ ಸಾವು
ಶಿವಮೊಗ್ಗ : ತೋಟಕ್ಕೆ ಹೋದ ರೈತ ಮಹಿಳೆ ಹಳ್ಳಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಸುಳುಗೋಡಿನಲ್ಲಿ ನಡೆದಿದೆ.
52 ವರ್ಷದ ಭವಾನಿ ಶಂಕರ ನಾರಾಯಣ ಮೃತ ದುರ್ದೈವಿಯಾಗಿದ್ದಾರೆ.
ಈಕೆ ಮೇಲಿನಕುರುವಳ್ಳಿ ಗ್ರಾ. ಪಂ. ವ್ಯಾಪ್ತಿಯ ಬಾಳೆಹಿತ್ತಲು ಹಳ್ಳದಲ್ಲಿ ಕೊಚ್ಚಿಹೋಗಿದ್ದಾರೆ.
![Shimoga A farmer woman died after falling into a ditch saaksha tv](http://saakshatv.com/wp-content/uploads/2022/07/malenadu-300x300.jpg)
ನಿನ್ನೆ ಬೆಳಗ್ಗೆ ಭವಾನಿ ಅವರು ತೋಟಕ್ಕೆ ಹೋಗಿದ್ದರು.
ಅಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ವಾಪಸ್ ಆಗುವಾದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಸಂಜೆಯಾದ್ರೂ ಮನೆಗೆ ಭವಾನಿ ಅವರು ವಾಪಸ್ ಆಗದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ತೋಟದ ಬಳಿ ಹೋಗಿ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಸುಮಾರು 11 ಗಂಟೆ ಸುಮಾರಿಗೆ ಹಳ್ಳದಲ್ಲಿ ಭವಾನಿಯವರ ಮೃತದೇಹ ಪತ್ತೆಯಾಗಿದೆ.