ADVERTISEMENT
Thursday, April 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Siddaramaiah  | ವಿತ್ತೀಯ ಕಲಾಪ ಬಗ್ಗೆ ಸಿದ್ದರಾಮಯ್ಯ ಪಾಠ

Mahesh M Dhandu by Mahesh M Dhandu
February 3, 2022
in Newsbeat, Politics, ರಾಜಕೀಯ
siddaramaiah
Share on FacebookShare on TwitterShare on WhatsappShare on Telegram

Siddaramaiah  | ವಿತ್ತೀಯ ಕಲಾಪ ಬಗ್ಗೆ ಸಿದ್ದರಾಮಯ್ಯ ಪಾಠ

ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ಸದಸ್ಯರಿಗೆ ವಿತ್ತೀಯ ಕಲಾಪದ ಬಗ್ಗೆ ವಿಶೇಷ ಪಾಠ ಮಾಡಿದ್ದಾರೆ. ಪರಿಷತ್ ಅಧ್ಯಕ್ಷ ಬಸವರಾಜ್ ಹೊರಟ್ಟಿ ಅವರು ಪರಿಷತ್ ಸದಸ್ಯರಿಗೆ ಕಾರ್ಯಗಾರ ಆಯೋಜನೆ ಮಾಡಿದ್ದು, ಇಲ್ಲಿ ವಿತ್ತೀಯ ಕಲಾಪದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ.

Related posts

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

April 16, 2026
ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

April 16, 2026

ಕಾರ್ಯಗಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಸವರಾಜ್ ಹೊರಟ್ಟಿ ಏಳು ಬಾರಿ ಪರಿಷತ್ ಸದಸ್ಯರಾಗಿದ್ದು, ಈಗ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರೆ ಮಾಡಿ ಪರಿಷತ್ ಸದಸ್ಯರಿಗೆ ಕಾರ್ಯಗಾರ ಆಯೋಜಿಸಿದ್ದು, ವಿತ್ತೀಯ ಕಲಾಪ ಬಗ್ಗೆ ಮಾತನಾಡುವಂತೆ ಸೂಚಿಸಿದ್ರು.  ನನಗೂ ಹೊರಟ್ಟಿ ಅವರಿಗೂ ಧೀರ್ಘಕಾಲದ ಸ್ನೇಹ.

ಹೀಗಾಗಿ ಅನೇಕ ಸಂದರ್ಭದಲ್ಲಿ ಹೊಗಳಿಕೆ ಹಾಗೂ ತೆಗಳಿಕೆ ಎರಡೂ ಮಾಡ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಗಳಿಕೆ ಮತ್ತು ತೆಗಳಿಕೆಯನ್ನ ಸಮಚಿತ್ತವಾಗಿ ಸ್ವೀಕರಿಸಬೇಕು. ಆ ಮಾತ್ರ ರಾಜಕಾರಣದಲ್ಲಿ ಬೆಳೆಯಲು ಸಾಧ್ಯ ಎಂದು ಹೊರಟ್ಟಿ ಅವರ ಜೊತೆಗಿನ ಸ್ನೇಹವನ್ನ ನೆನಸಿಕೊಂಡರು.

ಬಳಿಕ ಮಾತು ಮುಂದುವರೆಸಿ, ರಾಮಕೃಷ್ಣ ಹೆಗಡೆ ಅವರು 13 ವರ್ಷ ಕಾಲ ಬಜೆಟ್ ಮಂಡಿಸಿದ್ರು, ನಾನೂ ಮಂಡಿಸಿದ್ದೆ. 1966-67ರಿಂದ 88ರವರೆಗೂ ರಾಮಕೃಷ್ಣ ಹೆಗಡೆ ಅವರು ಮಂಡಿಸಿದ್ರು. ನಾನು 95-96 _ರಿಂದ ಮಂಡಿಸಲು ಪ್ರಾರಂಭಿಸಿ, 2018ರ ವರೆಗೂ ಮಂಡಿಸಿದ್ದೇನೆ. ನಾನೇ ಹೆಚ್ಚು ಮಂಡಿಸಿದವನೇನು ಅಲ್ಲ. ಸ್ವಾತಂತ್ರ್ಯ ಬಂದ ಬಳಿಕ ಬಜೆಟ್ ಗಾತ್ರ, ಗಣನೀಯವಾಗಿ ಬೆಳೆದಿದೆ. 1953ರಲ್ಲಿ ಕೆಂಗಲ್ ಹನುಮಂತಯ್ಯ ಅವಧಿಯಲ್ಲಿ ಬಜೆಟ್ ಗಾತ್ರ 21ಕೋಟಿ 3ಲಕ್ಷ ಇತ್ತು. ಈಗ 2,46,207 ಕೋಟಿ ತಲುಪಿದೆ ಎಂದು ತಿಳಿಸಿದರು.

siddaramaiah's lesson about monetary session saaksha tv

ಕರ್ನಾಟಕದಲ್ಲಿ ಇಷ್ಟು ದೊಡ್ಡ ಗಾತ್ರದ ಬಜೆಟ್ ಮಂಡಿಸಿದ್ದೇವೆ. ರಾಜ್ಯಪಾಲರು ನಿಗದಿಪಡಿಸಿದ ದಿನದಂದು ಬಜೆಟ್ ಮಂಡಿಸಬೇಕು. ಸಂವಿಧಾನದ ಪ್ರಕಾರ, ಬಜೆಟ್ ಅನ್ನೋದು ಬಹಳ ಮುಖ್ಯ. ಬಜೆಟ್ ಅಂದ್ರೆ ಫೈನಾನ್ಸಿಯಲ್ ಆನ್ಯುಯಲ್ ಸ್ಟೇಟ್ಮೆಂಟ್ ಈಚ್ ಆಂಡ್ ಎಕ್ಸ್‌ಪೆಂಡೀಚರ್.  ಇದನ್ನೇ ಬಸವಣ್ಣನವರು ಕಾಯಕ ಮತ್ತು ದಾಸೋಹ ಅಂತ ಹೇಳಿದ್ರು. ಆಯವ್ಯಯ ವ್ಯಕ್ತಿ, ಕುಟುಂಬ, ಸಂಸ್ಥೆ, ಕಂಪನಿಗಳ ಖರ್ಚು ವೆಚ್ಚಗಳ ವ್ಯವಸ್ಥಿತ ರೂಪು ರೇಷೆ ಮಾಡಿಕೊಳ್ಳಬೇಕು. ಖರ್ಚು ಕಡಿಮೆ ಇದ್ದು, ಆದಾಯ ಹೆಚ್ಚಿದ್ರೆ ಉಳಿತಾಯ ಬಜೆಟ್ ಅಂತ ಕರೀತಾರೆ. ಉಳಿತಾಯ ಹಣದಲ್ಲಿ ಅಭಿವೃದ್ಧಿ ಮಾಡಬಹುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಬಜೆಟ್ ನಲ್ಲಿ ರೆವಿನ್ಯೂ ರೆಸೀಡ್ಸ್, ಕ್ಯಾಪಿಟಲ್ ರೆಸೀಡ್ಸ್ ಅಂತ ಎರಡು ಭಾಗ ಇದೆ. ಕಮಿಟೆಡ್ ಎಕ್ಸ್ಪೆಂಡೀಚರ್ ಅನ್ನ ಖರ್ಚು ಮಾಡಲೇಬೇಕು. ಯಾವುದು ಅಂದ್ರೆ ಸಂಬಳ, ಪೆನ್‌ಶನ್, ಇತರೆ ಖರ್ಚುಗಳು. ರೆವಿನ್ಯೂ ಆಧಾಯಕ್ಕಿಂತ ಕಮಿಟೆಡ್ ಎಕ್ಸ್‌ಪೆಂಡೀಚರ್ ಹೆಚ್ಚಾದ್ರೆ ಸಾಲ ಮಾಡಿಕೊಳ್ಳಬೇಕಾಗಲಿದೆ. ನಮ್ಮ‌ರಾಜ್ಯದ ಮುನ್ನೋಟ ಐದು ವರ್ಷಗಳ ಕಾಲ ಇರಲಿದೆ. ನಾನು ಹಣಕಾಸು ಮಂತ್ರಿ ಆಗಿದ್ದಾಗ ಕಮಿಟೆಡ್ ಎಕ್ಸ್‌ಪೆಂಡೀಚರ್ 80% ಮೀರಿರಲಿಲ್ಲ. ಈಗ ಅದು 102% ಆಗಿದೆ. ಇದನ್ನ ಸರಿಮಾಡಿಕೊಳ್ಳಬೇಕು ಅಂತ ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ದೇನೆ. ಅನಗತ್ಯ ಖರ್ಚು ಕಡಿಮೆ ಮಾಡಿ, ಕಮಿಟೆಡ್ ಎಕ್ಸ್‌ಪೆಂಡೀಚರ್ ಕಡಿಮೆ ಮಾಡಿಕೊಳ್ಳಬೇಕು. ಇಲ್ಲದೆ ಹೋದ್ರೆ ರಾಜ್ಯದ ಅಭಿವೃದ್ಧಿ ಕುಂಟಿತ ಆಗಲಿದೆ. ಬಜೆಟ್ ಅನ್ನೋದು ಡ್ರೈ ಸಬ್ಜೆಕ್ಸ್, ಆಸಕ್ತಿ ಬಳಸಿಕೊಂಡ್ರೆ ಇಂಟ್ರಸ್ಟಿಂಗ್ ಸಬ್ಕೆಕ್ಟ್ ಆಗಲಿದೆ. ಬಜೆಟ್ ಅಂಕಿ ಅಂಶಗಳು ಅಲಂಕಾರಿಕವಾಗಿ ಇರಬಾರದು. ವಾಸ್ತವಿಕವಾಗಿ ಕೂಡಿದ್ರೆ ಮಾತ್ರ ಉತ್ತಮ ಬಜೆಟ್ ಆಗಲಿದೆ. ತೆರಿಗೆ ಸಂಗ್ರಹ ಸ್ವಾತಂತ್ರ್ಯ ಪೂರ್ವ, ನಂತರವೂ ಇದೆ.  ತೆರಿಗೆ ಇಲ್ಲದೆ ಹೋದ್ರೆ ಅಭಿವೃದ್ಧಿ ಸಾಧ್ಯವಿಲ್ಲ.

ವೇದಗಳ ಕಾಲದಲ್ಲಿ ಕರಗಳನ್ನ ಬಲಿ ಅಂತ ಕರೆಯುತ್ತಿದ್ದರು. ಭೂಮಿ ಮೇಲೆ ಹಾಕುವ ಕಂದಾಯ 30% ಇತ್ತು, ಈಗ ಕಡಿಮೆಯಾಗಿದೆ. ತೋಟಗಾರಿಕಾ ಬೆಳೆಗಳ ಮೇಲೆ ಈಗ ಕಂದಾಯ ಇಲ್ಲ, ಭೂಕಂದಾಯ ಈಗ ತೆಗೆಯಲಾಗಿದೆ ಎಂದು  ವಿವರಿಸಿದರು.

Tags: #Saaksha TVCongressSiddaramaiahvidhana parishat
ShareTweetSendShare
Join us on:

Related Posts

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

by Shwetha
April 16, 2026
0

ರಾಜ್ಯ ರಾಜಕಾರಣದಲ್ಲಿ ಈಗ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ನಂತರದ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಠಿಣ...

ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

ಮೋದಿ ಮುಂದೆ ರಾಜ್ಯದ ಹಿತಾಸಕ್ತಿ ಮಂಡಿಸಿದ ಸಿದ್ದರಾಮಯ್ಯ ಸ್ವಾಗತದ ನಡುವೆಯೇ ಸಲ್ಲಿಕೆಯಾಯಿತು 18 ಅಂಶಗಳ ಹಕ್ಕೊತ್ತಾಯ

by Shwetha
April 16, 2026
0

ಬೆಂಗಳೂರು ನಿನ್ನೆ ಎರಡು ಪ್ರಬಲ ರಾಜಕೀಯ ಶಕ್ತಿಗಳ ಸಮಾಗಮಕ್ಕೆ ಸಾಕ್ಷಿಯಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹೆಚ್‌ಎಎಲ್‌ ವಿಮಾನ...

ಪೋಪ್ ಲಿಯೋ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ

ಪೋಪ್ ಲಿಯೋ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ

by Shwetha
April 16, 2026
0

ಇರಾನ್ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಮತ್ತೆ ಪೋಪ್ ಲಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಇರಾನ್ ಕನಿಷ್ಠ 42,000 ನಿರಾಯುಧ ಪ್ರತಿಭಟನಾಕಾರರನ್ನು ಹತ್ಯೆ ಮಾಡಿದೆ...

ನಂಬಿಕೆ ವರ್ಸಸ್ ಸಂವಿಧಾನ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಎತ್ತಿದ ಅಸಲಿ ಪ್ರಶ್ನೆಗಳೇನು

ನಂಬಿಕೆ ವರ್ಸಸ್ ಸಂವಿಧಾನ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಎತ್ತಿದ ಅಸಲಿ ಪ್ರಶ್ನೆಗಳೇನು

by Shwetha
April 16, 2026
0

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ಹೋರಾಟವು ಈಗ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಈ ಸಂವೇದನಾಶೀಲ ಪ್ರಕರಣದ...

CBSE 10ನೇ ತರಗತಿ ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

CBSE 10ನೇ ತರಗತಿ ಫಲಿತಾಂಶ ಪ್ರಕಟ; ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

by Shwetha
April 16, 2026
0

CBSE 10ನೇ ತರಗತಿಯ ಸೆಷನ್-1 ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ದೇಶಾದ್ಯಂತ ತಮ್ಮ ಫಲಿತಾಂಶವನ್ನು ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು UMANG...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram