Zameer Ahmed ಅಕ್ರಮದಲ್ಲಿ ಸಿದ್ದರಾಮಯ್ಯ ಪಾಲೆಷ್ಟು?
ಬೆಂಗಳೂರು : ಜಮೀರ್ ವಿರುದ್ಧ ಭ್ರಷ್ಟಾಚಾರದ ತನಿಖೆ ಮಾಡಿದರೆ ಸಿದ್ದರಾಮಯ್ಯ ಸಿಡುಕುವುದೇಕೆ ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನೆ ಮಾಡಿದೆ.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಆಸ್ತಿ ಏರಿಕೆ ವಿಚಾರವಾಗಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಸಿದ್ದರಾಮೋತ್ಸವದ ಗುಂಗಿನಲ್ಲಿರುವ ಸಿದ್ದರಾಮಯ್ಯ ಅವರೇ, ನಿಮ್ಮ ಅತ್ಯಾಪ್ತ ಶಾಸಕ ಜಮೀರ್ ಅಹ್ಮದ್ ಆಸ್ತಿ ಎರಡು ಸಾವಿರ ಪಟ್ಟು ಹೆಚ್ಚಾಗಿದೆ.ಸಿದ್ದರಾಮೋತ್ಸವ ಸಮಿತಿಯಲ್ಲಿ ಸ್ಥಾನ ಪಡೆದಿರುವ ಜಮೀರ್ ಎಷ್ಟು ಹೂಡಿಕೆ ಮಾಡಿದ್ದಾರೆ?
ಜಮೀರ್ ವಿರುದ್ಧ ಭ್ರಷ್ಟಾಚಾರದ ತನಿಖೆ ಮಾಡಿದರೆ ಸಿದ್ದರಾಮಯ್ಯ ಸಿಡುಕುವುದೇಕೆ?
ಜಾರಿ ನಿರ್ದೇಶನಾಲಯದ ವರದಿ ಆಧರಿಸಿ ಎಸಿಬಿ ದಾಳಿ ನಡೆದಿದೆಯೇ ಹೊರತು ಇದರಲ್ಲಿ ಬೇರೆ ಯಾವುದೇ ಹಿಡನ್ ಅಜೆಂಡಾ ಇಲ್ಲ.
ಸತ್ಯಕ್ಕೆ ಅಂಜುವುದೇಕೆ?#ಸಿದ್ದುಹಾಸ್ಯೋತ್ಸವ
— BJP Karnataka (@BJP4Karnataka) July 7, 2022
ಜಮೀರ್ ವಿರುದ್ಧ ಭ್ರಷ್ಟಾಚಾರದ ತನಿಖೆ ಮಾಡಿದರೆ ಸಿದ್ದರಾಮಯ್ಯ ಸಿಡುಕುವುದೇಕೆ? ಜಾರಿ ನಿರ್ದೇಶನಾಲಯದ ವರದಿ ಆಧರಿಸಿ ಎಸಿಬಿ ದಾಳಿ ನಡೆದಿದೆಯೇ ಹೊರತು ಇದರಲ್ಲಿ ಬೇರೆ ಯಾವುದೇ ಹಿಡನ್ ಅಜೆಂಡಾ ಇಲ್ಲ.ಸತ್ಯಕ್ಕೆ ಅಂಜುವುದೇಕೆ?
ನ್ಯಾಶನಲ್ ಟ್ರಾವೆಲ್ಸ್ ಬಸ್ ಓಡಿಸಿ ಜಮೀರ್ ಆಸ್ತಿ ಈ ಪರಿ ಏರಿಕೆಯಾಗಲು ಹೇಗೆ ಸಾಧ್ಯ? ಜಮೀರ್ ಪರವಾಗಿ ಸಿದ್ದರಾಮಯ್ಯ ಇಷ್ಟು ವಕಾಲತ್ತು ಹಾಕುವುದನ್ನು ನೋಡಿದರೆ ಇದು ಯಾರ ಕಪ್ಪು ಹಣ ಎಂಬ ಪ್ರಶ್ನೆ ಮೂಡುತ್ತಿದೆ! ಜಮೀರ್ ಅಕ್ರಮದಲ್ಲಿ ಸಿದ್ದರಾಮಯ್ಯ ಪಾಲೆಷ್ಟು ಎಂದು ಪ್ರಶ್ನೆಗಳ ಸುರಿಮಳೆಗೈದಿದೆ.