ನಡೆದಾಡುವ ದೇವರು ಶತಮಾನದ ಸಂತ ಎಂದೇ ಕರೆಯಲ್ಪಡುವ ಸಿದ್ದೇಶ್ವರ ಸ್ವಾಮಿಗಳ ಚಿತಾಭಸ್ಮವನ್ನ ವಿಶ್ವಗುರು ಬಸವಣ್ಣನವರ ಐಕ್ಯ ಸ್ಥಳ ತ್ರೀವೇಣಿ ನದಿಗಳ ಸಂಗಮವಾದ ಕೂಡಲಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು.
ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಪಂಚಮಸಾಲಿ ಬಸವಜಯಮೃತ್ಯುಂಜಯ ಸ್ವಾಮೀಜಿಗಳ ತಂಡ ಬೋಟ್ ನಲ್ಲಿ ಶ್ರೀಗಳ ಭಾವಚಿತ್ರ, ಮಡಿಕೆಯಲ್ಲಿ ಚಿತಾಭಸ್ಮ ಇಟ್ಟುಕೊಂಡ ತೆರಳಿದ್ದರು. ಶ್ರೀಗಳ ಚಿತಾಭಸ್ಮ ವಿಸರ್ಜನೆ ನೋಡೋದಕ್ಕೆ ಸಹಸ್ರಾರು ಜನ ಭಕ್ತರು ಕಾದು ನಿಂತಿದ್ದರು.
ಕೂಡಲ ಸಂಗಮದಲ್ಲಿ ಚಿತಾಭಸ್ಮವಿದ್ದ ಮಡಿಕೆಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಬಾಳೆದಿಂಡು ಮತ್ತು ಹೂವಿನ ಹಾರದೊಂದಿಗೆ ಅಲಂಕರಿಸಿದ್ದ ಬೋಟ್ ನಲ್ಲಿ ಚಿತಾಭಸ್ಮವನ್ನ ತೆಗೆದುಕೊಂಡು ಘಟಪ್ರಭೆ ಮಲಪ್ರಭೆ ಹಾಗು ಕೃಷ್ಣ ನದಿಗಳ ತ್ರಿವೇಣಿ ಸಂಗಮದಲ್ಲಿ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ ಮಾಡಲಾಯಿತು.
ಇಂದು ಸಂಜೆ ಗೋಕರ್ಣದ ಸಾಗರದಲ್ಲಿ ಅಸ್ಥಿ ವಿಸರ್ಜನೆ ಮಾಡಲು ಜ್ಞಾನಯೋಗಾಶ್ರಮದ ಎಲ್ಲಾ ಪೂಜ್ಯರು ನಿರ್ಧರಿಸಿದ್ದಾರೆ.
Siddeshwar swamiji : Dispersal of ashes of Siddeshwar shri in Koodala Sangam…