Siddeshwar swamiji : ದೇಹವನ್ನ ಅಗ್ನಿಗೆ ಅರ್ಪಿಸಿ ಸ್ಮಾರಕ ಮಾಡಬೇಡಿ… ಅಂತಿಮ ವಿಧಿ ವಿಧಾನದ ಕುರಿತು ಶ್ರೀಗಳ ವಿಲ್…
ಇಹಲೋಕ ಯಾತ್ರೆ ಮುಗಿಸಿದ ಸಿದ್ದೇಶ್ವರ ಶ್ರೀಗಳ ದರ್ಶಕ್ಕಾಗಿ ಸೈನಿಕ ಶಾಲೆಯ ಆವರಣದಲ್ಲಿ ಅಂತಿಮ ಜನಸಾಗರವೇ ಹರಿದು ಬರುತ್ತಿದೆ. ಬೆಳಗ್ಗೆ 6 ರಿಂದ ಸಂಜೆ 3 ಗಂಟೆವರೆಗೂ ಸೈನಿಕ ಶಾಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಆ ಬಳಿಕ ಮಧ್ಯಾಹ್ನ 3 ಗಂಟೆಯಿಂದ 4 ಗಂಟೆವರೆಗೂ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ. ಸಂಜೆ 5 ಗಂಟೆಗೆ ಅಂತಿಮ ಕಾರ್ಯಗಳು ಆಶ್ರಮದಲ್ಲೇ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಶ್ರೀಗಳು ತಮ್ಮ ಅಂತಿಮ ವಿಧಿ ವಿಧಾನಗಳು ನಡೆಯುವ ಕುರಿತು 2014 ರಲ್ಲಿಯೇ ಆಪ್ತರೊಂದಿಗೆ ಚರ್ಚೆ ನಡೆಸಿ ವಿಲ್ ಬರೆದಿಟ್ಟಿದ್ದಾರೆ. ಕಾಯವನ್ನು ಮಣ್ಣು ಮಾಡುವಂತಿಲ್ಲ, ಅಗ್ನಿ ಸ್ಪರ್ಷ ಮಾಡಬೇಕು. ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಿ ಬೇಕು. ಶ್ರಾದ್ಧ ಕರ್ಮ ಕರ್ಮಗಳನ್ನು ಮಾಡುವಂತಿಲ್ಲ. ಯಾವುದೇ ರೀತಿಯ ಸ್ಮಾರಕಗಳನ್ನು ನಿರ್ಮಿಸಬೇಡಿ ಅಂತ ವಿಲ್ ನಲ್ಲಿ ತಿಳಿಸಿದ್ದಾರೆ.
ಅಂತಿಮ ಸಂದೇಶ: ಸತ್ಯವೂ ಇಲ್ಲ ಅಸತ್ಯವೂ ಇಲ್ಲ. ಸಹಜವೂ ಇಲ್ಲ ಅಸಹಜವೂ ಇಲ್ಲ. ನಾನೂ ಇಲ್ಲ, ನೀನೂ ಇಲ್ಲ. ಇಲ್ಲ ಇಲ್ಲ ಎಂಬುವುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು ಅಂತ್ಯಃ ಪ್ರಣಾಮಾಂಜಲಿಃ -ಸ್ವಾಮಿ ಸಿದ್ದೇಶ್ವರ.
8 ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಸಿದ್ದೇಶ್ವರ ಸ್ವಾಮೀಜಿಗಳು, ಕಳೆದ 3 ದಿನಗಳಿಂದ ಹಾಸಿಗೆ ಹಿಡಿದಿದ್ದರು. ಅನ್ನ ನೀರು ಸೇವಿಸಿರಲಿಲ್ಲ. ವೈದ್ಯರ ಚಿಕಿತ್ಸೆಯೂ ಬೇಡ ಅಂತ ಹೇಳಿದ್ದರು. ಸಿದ್ದೇಶ್ವರ ಸ್ವಾಮೀಜಿಯ ಅನಾರೋಗ್ಯ ಅಂತ ಕಳೆದ ಮೂರ್ನಾಲ್ಕು ದಿನಗಳಿಂದ ಶ್ರೀಗಳ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ರು. ಬಂದವ್ರನ್ನ ಹಸಿದ ಹೊಟ್ಟೆಯಲ್ಲಿ ಕಳಿಸುವ ಮನಸ್ಸಿಲ್ಲದೇ, ಎಲ್ಲಾ ಭಕ್ತರಿಗೂ ಜ್ಞಾನಾನಂದಶ್ರಮದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಖುದ್ದು ಸುತ್ತೂರು ಸ್ವಾಮೀಜಿಗಳೇ ಮುಂದೆ ನಿಂತು ಅನ್ನದಾಸೋಹದ ಮುತುವರ್ಜಿವಹಿಸಿದ್ದರು.
Siddeshwar swamiji: Don’t offer the body to the fire and do not memorialize it… Sree’s will about the last rites…