ಗಾಯಕಿ ಸಂಗೀತಾ ಕಟ್ಟಿ
ಎಸ್ಪಿಬಿ ಅವರ ಗರಡಿಯಲ್ಲಿ ಪಳಗಿದ ಗಾಯಕಿ ಸಂಗೀತಾ ಕಟ್ಟಿ, ಸ್ವರ ಮಾಂತ್ರಿತ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
“ನಮ್ಮ ಕನ್ನಡ ನಾಡಿಗೆ ಎಸ್ ಬಿಬಿ ಅವರು ಒಂದು ವರ. ನಮ್ಮ ನಾಡಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಾಡನ್ನು ಹಾಡಿರುವುದು ಭುವನೇಶ್ವರಿಯ ವರ.
ನನ್ನ ಪಾಲಿಗೆ ಅವರು ಗುರು ಶಕ್ತಿ. ಅವರನ್ನು ಮಿಸ್ ಮಾಡಿಕೊಳ್ಳುವ ಬಗ್ಗೆ ಆದಿ-ಅಂತ್ಯ ಇಲ್ಲ” ಎಂದು ಭಾವುಕರಾಗಿದ್ದಾರೆ.
ಅಲ್ಲದೇ ನನಗೆ ಹಾಡಿನ ವಿವಿಧ ಆಯಾಮ ಗೊತ್ತೇ ಇರಲಿಲ್ಲ. ಅಂತಹ ಸಮಯದಲ್ಲಿ ಅವರು ಪರಿಚಯ ಆಗಿದ್ದು ನನ್ನ ಜೀವನದ ದೊಡ್ಡ ತಿರುವು.
ಅವರೊಳಗಿನ ಒಂದು ಶಕ್ತಿಗೆ ಅವರೇ ಶಕ್ತಿ. ಅವರನ್ನು ಅಳೆಯೋದು ಯಾವುದಕ್ಕೂ ನಿಲುಕುವುದಿಲ್ಲ” ಎಂದಿದ್ದಾರೆ.