ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದು, ಕೆಲ ದೇವಾಲಯಗಳಲ್ಲಿ ನಡೆಯುವ ಆರತಿಯನ್ನು ಜನರು ಮನೆಯಲ್ಲಿ ಕುಳಿತು ನೋಡಬಹುದಾಗಿದೆ. ಇದಕ್ಕಾಗಿ ಜಿಯೋ ಶೀಘ್ರದಲ್ಲೇ ಡಿಜಿಟಲ್ ಪ್ಲಾಟ್ಫಾರ್ಮ್ ಸಿದ್ಧಪಡಿಸಲಿದೆ. ಬದ್ರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಸೇರಿದಂತೆ ಧಾರ್ಮಿಕ ಸ್ಥಳಗಳ ದರ್ಶನ ಭಕ್ತರಿಗೆ ಮನೆಯಲ್ಲೇ ಸಿಗಲಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಉತ್ತರಾಖಂಡಕ್ಕೆ ಬರುತ್ತಾರೆ. ಆದರೆ ಚಾರ್ ಧಾಮ್ ಯಾತ್ರೆ ಅನೇಕರಿಗೆ ಸಾಧ್ಯವಿಲ್ಲ. ಅಂತಹ ಭಕ್ತರಿಗಾಗಿ ರಾಜ್ಯ ಸರ್ಕಾರ ಜಿಯೋ ಸಹಾಯದಿಂದ ಆನ್ಲೈನ್ ವ್ಯವಸ್ಥೆಗಳನ್ನು ಮಾಡ್ತಿದೆ. ಜಿಯೋ ನೇರ ಪ್ರಸಾರದಿಂದಾಗಿ ಪ್ರಪಂಚದಾದ್ಯಂತ ಇರುವ ಭಕ್ತರಿಗೆ ದೇವರ ದರ್ಶನ ಸಿಗಲಿದೆ ಎಂದು ಉತ್ತರಾಖಂಡ ಸರ್ಕಾರ ಖುಷಿ ವ್ಯಕ್ತಪಡಿಸಿದೆ.
ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ
ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಪೋಷಕರಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಇತ್ತೀಚಿನ ತೈಲ ಬೆಲೆ ಏರಿಕೆಯು ನೇರವಾಗಿ ಶಾಲಾ ಮಕ್ಕಳ ಸಾರಿಗೆಯ ಮೇಲೆ...








