ADVERTISEMENT
Wednesday, June 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆರು ಎಸೆತ.. ಆರು ಸಿಕ್ಸರ್… ಈ ಸಾಧನೆ ಮಾಡಿದ 9 ಬ್ಯಾಟ್ಸ್ ಮೆನ್ ಗಳು ಇವ್ರೇ..!

admin by admin
March 29, 2021
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

Related posts

ಒಳ್ಳೆಯ ಆಡಳಿತ ಕೊಡದಿದ್ದರೆ ಜನರೇ ಪಾಠ ಕಲಿಸುತ್ತಾರೆ: ಸಿಎಂಗೆ ಸಚಿವ ರಾಜಣ್ಣ ನೇರ ಎಚ್ಚರಿಕೆ.

ಒಳ್ಳೆಯ ಆಡಳಿತ ಕೊಡದಿದ್ದರೆ ಜನರೇ ಪಾಠ ಕಲಿಸುತ್ತಾರೆ: ಸಿಎಂಗೆ ಸಚಿವ ರಾಜಣ್ಣ ನೇರ ಎಚ್ಚರಿಕೆ.

June 10, 2026
ರಿಜಿಸ್ಟ್ರೇಷನ್ ದಾಖಲೆ ರೆಡಿ ಇಟ್ಟುಕೊಳ್ಳಿ :ನಿಮ್ಮ ಭಯ ಮತ್ತು ಆತಂಕ ನನಗೆ ಅರ್ಥವಾಗುತ್ತಿದೆ; RSS ದಾಖಲೆ ಕೇಳಿ ಬಿಜೆಪಿಯನ್ನು ಕೆಣಕಿದ ಖರ್ಗೆ

ರಿಜಿಸ್ಟ್ರೇಷನ್ ದಾಖಲೆ ರೆಡಿ ಇಟ್ಟುಕೊಳ್ಳಿ :ನಿಮ್ಮ ಭಯ ಮತ್ತು ಆತಂಕ ನನಗೆ ಅರ್ಥವಾಗುತ್ತಿದೆ; RSS ದಾಖಲೆ ಕೇಳಿ ಬಿಜೆಪಿಯನ್ನು ಕೆಣಕಿದ ಖರ್ಗೆ

June 10, 2026

ಆರು ಎಸೆತ.. ಆರು ಸಿಕ್ಸರ್… ಈ ಸಾಧನೆ ಮಾಡಿದ 9 ಬ್ಯಾಟ್ಸ್ ಮೆನ್ ಗಳು ಇವ್ರೇ..!

six sixes in an over in top level domestic or international cricket.

gary sobers  saakshatvವಿಶ್ವ ಕ್ರಿಕೆಟ್ ನಲ್ಲಿ ಯಾವುದು ಅಸಾಧ್ಯವಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಆಮೆಗತಿಯಲ್ಲಿ ಸಾಗುತ್ತಿದ್ದ ಕ್ರಿಕೆಟ್ ಆಟ ಈಗ ಕ್ಷಣ ಕ್ಷಣಕ್ಕೂ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ.
ಬ್ಯಾಟ್ ಮತ್ತು ಚೆಂಡಿನ ಸಮರದಲ್ಲಿ ಬ್ಯಾಟ್ಸ್ ಮೆನ್ ಮತ್ತು ಬೌಲರ್ ಗಳ ಕಾದಾಟವನ್ನು ನೋಡುವುದೇ ಚೆಂದ.
ಬೌಲರ್ ನ ಬೆಂಕಿಯ ಎಸೆತಗಳೇ ಇರಲಿ, ಗೂಗ್ಲಿ ಎಸೆತಗಳೇ ಇರಲಿ, ಬುಗರಿ ಎಸೆತಗಳೇ ಇರಲಿ, ಬ್ಯಾಟ್ಸ್ ಮೆನ್ ತನ್ನ ಬುದ್ಧಿವಂತಿಕೆ, ಶಕ್ತಿಯಿಂದ ರನ್ ದಾಖಲಿಸುತ್ತಾನೆ. ಬ್ಯಾಟ್ಸ್ ಮೆನ್ ಗುರಿ ರನ್ ಗಳಿಸುವುದಾದ್ರೆ, ಬೌಲರ್ ನದ್ದು ವಿಕೆಟ್ ಉರುಳಿಸುವುದು. ಆದ್ರೂ ಕ್ರಿಕೆಟ್ ಆಟ ಈಗ ಬ್ಯಾಟ್ಸ್ ಮೆನ್ ಗಳ ಆಟವಾಗಿದೆ.
ಇನ್ನು ಇಲ್ಲಿ ಬೌಂಡರಿ ಮತ್ತು ಸಿಕ್ಸರ್ ದಾಖಲಿಸುವುದು ಅಷ್ಟೊಂದು ಕಷ್ಟವೇನು ಇಲ್ಲ. ಆದ್ರೆ ಆರು ಎಸೆತಗಳನ್ನು ಸತತವಾಗಿ ಆರು ಸಿಕ್ಸರ್ ಗಳು ಸಿಡಿಸುವುದು ಸುಲಭದ ಸಂಗತಿಯಲ್ಲ.
ಈ ಹಿಂದೆ ಅಪರೂಪಕ್ಕೆ ಈ ರೀತಿಯ ದಾಖಲೆಗಳು ಬರುತ್ತಿದ್ದವು. ಇದೀಗ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸುವುದು ಮಾಮೂಲಿಯಾಗುತ್ತಿದೆ.
ಮೊನ್ನೆ ಮೊನ್ನೆ ಕಿರಾನ್ ಪೊಲಾರ್ಡ್ ಶ್ರೀಲಂಕಾ ವಿರುದ್ಧ ಆರು ಸಿಕ್ಸರ್ ಗಳನ್ನು ದಾಖಲಿಸಿದ್ದರು. ಇದೀಗ ಲಂಕಾದ ತಿಸರಾ ಪೆರೆರಾ ಅವರು ದೇಸಿ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದಾರೆ.
ಅಂದ ಹಾಗೇ ಈ ಹಿಂದೆ ಗ್ಯಾರಿ ಸೋಬರ್ಸ್ ಮತ್ತು ರವಿಶಾಸ್ತ್ರಿ ದೇಶಿ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದರು.
ಬಳಿಕ ಏಕದಿನ ಕ್ರಿಕೆಟ್ ನಲ್ಲಿ ಹರ್ಷೆಲ್ ಗಿಬ್ಸ್ ಮತ್ತು ಟಿ-ಟ್ವೆಂಟಿಯಲ್ಲಿ ಯುವರಾಜ್ ಸಿಂಗ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಕಿರಾನ್ ಪೊಲಾರ್ಡ್ ಈ ಸಾಧನೆ ಮಾಡಿದ್ದರು.
ಒಟ್ಟು 9 ಮಂದಿ ಆಟಗಾರರು ಆರು ಎಸೆತಗಳನ್ನು ಸಿಕ್ಸರ್ ಆಗಿ ಮಾರ್ಪಡು ಮಾಡಿದ್ದರು. ಇನ್ನುಳಿದ ಆರು ಮಂದಿ ದೇಸಿ ಕ್ರಿಕೆಟ್ ನಲ್ಲಿ ಮಾಡಿದ್ದಾರೆ.

yuvaraj singh saakshatvಆಗಸ್ಟ್ 31, 1968
ಗ್ಯಾರಿಫೀಲ್ಡ್ ಸೋಬರ್ಸ್ – ನಾಟಿಂಗ್ ಹ್ಯಾಮ್ ಶೈರ್ ಪರ ಆಡಿದ್ದ ಸೋಬರ್ಸ್ ಗ್ಲಾಮೊರ್ಗಾನ್ ತಂಡದ ಮಾಲ್ಕಮ್ ನಾಶ್ ಅವರ ಆರು ಎಸೆತಗಳಿಗೆ ಸತತ ಆರು ಸಿಕ್ಸರ್. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್ ಮೆನ್
————————-

ಜನವರಿ 19-1985
ರವಿಶಾಸ್ತ್ರಿ – ಬರೋಡಾ ವಿರುದ್ಧ ತಿಲಕ್ ರಾಜ್ ಅವರ ಆರು ಎಸೆತಗಳಿಗೆ ಸತತ ಆರು ಸಿಕ್ಸರ್ – ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್ ಮೆನ್
——————–

ಮಾರ್ಚ್ 16, 2007 ಏಕದಿನ ವಿಶ್ವಕಪ್

ಹರ್ಷೆಲ್ ಗಿಬ್ಸ್ – ನೆದರ್ಲೆಂಡ್ ವಿರುದ್ಧ – ಏಕದಿನ ಪಂದ್ಯದಲ್ಲಿ ಗಿಬ್ಸ್ ಡಾನ್ ವಾನ್ ಬುಂಗೆ ಅವರ ಆರು ಎಸೆತಗಳನ್ನು ಸತತವಾಗಿ ಸಿಕ್ಸರ್ ಬಾರಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದ ಮೊದಲ ಬ್ಯಾಟ್ಸ್ ಮೆನ್ .ಒಟ್ಟಾರೆಯಾಗಿ ಮೂರನೇ ಆಟಗಾರ.
——————-

ಸೆಪ್ಟಂಬರ್ 19, 2007ರ ಟಿ-ಟ್ವೆಂಟಿ ವಿಶ್ವಕಪ್-
ಯುವರಾಜ್ ಸಿಂಗ್ – 2007ರ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಸ್ಟುವರ್ಟ್ ಬ್ರಾಡ್ ಅವರ ಆರು ಎಸೆತಗಳನ್ನು ಸಿಕ್ಸರ್ ಗೆ ಅಟ್ಟಿದ್ದರು. ಟಿ-ಟ್ವೆಂಟಿ ಕ್ರಿಕೆಟ್‍ನಲ್ಲಿ ಈ ಸಾಧನೆ ಮಾಡಿದ್ದ ಮೊದಲ ಆಟಗಾರ ಹಾಗೂ ವಿಶ್ವದ ನಾಲ್ಕನೇ ಬ್ಯಾಟ್ಸ್ ಮೆನ್

———————-

polard saakshatvಜುಲೈ 2017- ದೇಸಿ ಟಿ-ಟ್ವೆಂಟಿ ಕ್ರಿಕೆಟ್

ವಾರ್ಕ್‍ಸ್ಟೈರ್ ಶೈರ್ ತಂಡದ ರಾಸ್ ವೈಟ್ಲಿ ಅವರು ಯಾರ್ಕ್ ಶೈರ್ ನ ಸ್ಪಿನ್ನರ್ ಕಾರ್ಲ್ ಕಾರ್ವೆರ್ ಅವರ ಆರು ಎಸೆತಗಳನ್ನು ಸಿಕ್ಸರ್ ಆಗಿ ಪರಿವರ್ತಿಸಿದ್ದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಐದನೇ ಬ್ಯಾಟ್ಸ್ ಮೆನ್ ಆಗಿ ಹೊರಹೊಮ್ಮಿದ್ದರು.
——————–
ಅಕ್ಟೋಬರ್ 14, 2018 –
ಅಫಘಾನಿಸ್ತಾನ ಪ್ರೀಮಿಯರ್ ಲೀಗ್ -ಟಿ-20 ಕ್ರಿಕೆಟ್
ಹಝ್ರುತುಲ್ಲಾಹ್ ಝಾಝೈ ಅವರು ಅಫಘಾನಿಸ್ತಾನ ಪ್ರೀಮಿಯರ್ ಲೀಗ್ ನಲ್ಲಿ ಅಬ್ದುಲ್ಲಾ ಮಝಾರಿ ಅವರ ಆರು ಎಸೆತಗಳನ್ನು ಸಿಕ್ಸರ್ ಬಾರಿಸಿದ್ದರು. ಈ ಸಾಧನೆ ಮಾಡಿದ ವಿಶ್ವದ ಆರನೇ ಆಟಗಾರ.

———————

ಜನವರಿ 5, 2020 – ನ್ಯೂಜಿಲೆಂಡ್ ದೇಸಿ ಟಿ-20 ಕ್ರಿಕೆಟ್ ಟೂರ್ನಿ
ಲಿಯೋ ಕಾರ್ಟೆರ್ -ನ್ಯೂಜಿಲೆಂಡ್ ನ ಸೂಪರ್ ಸ್ಮಾಶ್ ಕ್ರಿಕೆಟ್ ಟೂರ್ನಿಯಲ್ಲಿ ಕ್ಯಾಂಟರ್ ಬರ್ರಿ ಕಿಂಗ್ಸ್ ತಂಡದ ಪರ ಲಿಯೋ ಕಾರ್ಟೆರ್ ಅವರು ನಾರ್ಥನ್ ಡಿಸ್ಟ್ರೀಕ್ಟ್ಸ್ ತಂಡದ ಆಂಟನ್ ಡೆವಿಸಿಚ್ ಅವರ ಆರು ಎಸೆತಗಳನ್ನು ಸಿಕ್ಸರ್ ಗಟ್ಟಿದ್ದರು. ಈ ಮೂಲಕ ಟಿ-ಟ್ವೆಂಟಿಯಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಹಾಗೂ ಒಟ್ಟಾರೆಯಾಗಿ ವಿಶ್ವದ ಏಳನೇ ಆಟಗಾರನಾಗಿದ್ದಾರೆ.
======================

perera saakshatvಮಾರ್ಚ್ 17, 2021 -ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್
ಕಿರಾನ್ ಪೊಲಾರ್ಡ್ – ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನ ಕಿರಾನ್ ಪೊಲಾರ್ಡ್ ಅವರು ಧನಂಜಯ ಅವರ ಆರು ಎಸೆತಗಳನ್ನು ಸಿಕ್ಸರ್ ಆಗಿ ಪರಿವರ್ತಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ. ವಿಶ್ವದ ಎಂಟನೇ ಆಟಗಾರನಾಗಿದ್ದಾರೆ.
————————-

ಮಾರ್ಚ್ 29, 2021 – ಶ್ರೀಲಂಕಾದ ದೇಸಿ ಕ್ರಿಕೆಟ್ ಟೂರ್ನಿ
ಲಂಕಾ ಆರ್ಮಿ ತಂಡದ ತಿಸೆರಾ ಪಿರೇರಾ ಅವರು ಬ್ಲೂಮ್ ಫೀಲ್ಡ್ ಕ್ರಿಕೆಟ್ ಮತ್ತು ಅಥ್ಲೆಟಿಕ್ಸ್ ಕ್ಲಬ್ ತಂಡದ ದಿಲ್ಷಾನ್ ಕುರೇಯ್ ಅವರ ಆರು ಎಸೆತಗಳನ್ನು ಸಿಕ್ಸರ್ ಆಗಿ ದಾಖಲಿಸಿದ್ದರು. ಈ ಮೂಲಕ ಈ ಸಾಧನೆ ಮಾಡಿದ್ದ ಪಿರೇರಾ ಅವರು ವಿಶ್ವದ 9ನೇ ಆಟಗಾರನಾಗಿದ್ದಾರೆ. –

Tags: #Kieron PollardHazratullah ZazaiHerschelle Gibbsinternational cricket.Leo CarterRavi ShastriRoss WhitelySir Garfield SobersThisara Pererayuvraj singh
ShareTweetSendShare
Join us on:

Related Posts

ಒಳ್ಳೆಯ ಆಡಳಿತ ಕೊಡದಿದ್ದರೆ ಜನರೇ ಪಾಠ ಕಲಿಸುತ್ತಾರೆ: ಸಿಎಂಗೆ ಸಚಿವ ರಾಜಣ್ಣ ನೇರ ಎಚ್ಚರಿಕೆ.

ಒಳ್ಳೆಯ ಆಡಳಿತ ಕೊಡದಿದ್ದರೆ ಜನರೇ ಪಾಠ ಕಲಿಸುತ್ತಾರೆ: ಸಿಎಂಗೆ ಸಚಿವ ರಾಜಣ್ಣ ನೇರ ಎಚ್ಚರಿಕೆ.

by Shwetha
June 10, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗಿನಿಂದಲೇ ಮುಂದಿನ ವಿಧಾನಸಭಾ ಚುನಾವಣೆಯ ತಯಾರಿ ಹಾಗೂ ಆಡಳಿತ ವೈಖರಿಯ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಸಚಿವ ಕೆ.ಎನ್. ರಾಜಣ್ಣ ಅವರು ಮುಖ್ಯಮಂತ್ರಿ ಡಿ.ಕೆ....

ರಿಜಿಸ್ಟ್ರೇಷನ್ ದಾಖಲೆ ರೆಡಿ ಇಟ್ಟುಕೊಳ್ಳಿ :ನಿಮ್ಮ ಭಯ ಮತ್ತು ಆತಂಕ ನನಗೆ ಅರ್ಥವಾಗುತ್ತಿದೆ; RSS ದಾಖಲೆ ಕೇಳಿ ಬಿಜೆಪಿಯನ್ನು ಕೆಣಕಿದ ಖರ್ಗೆ

ರಿಜಿಸ್ಟ್ರೇಷನ್ ದಾಖಲೆ ರೆಡಿ ಇಟ್ಟುಕೊಳ್ಳಿ :ನಿಮ್ಮ ಭಯ ಮತ್ತು ಆತಂಕ ನನಗೆ ಅರ್ಥವಾಗುತ್ತಿದೆ; RSS ದಾಖಲೆ ಕೇಳಿ ಬಿಜೆಪಿಯನ್ನು ಕೆಣಕಿದ ಖರ್ಗೆ

by Shwetha
June 10, 2026
0

ರಾಜ್ಯ ಸಚಿವ ಸಂಪುಟ ರಚನೆಯಾಗಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ಕರ್ನಾಟಕ ರಾಜಕಾರಣದಲ್ಲಿ ವಾಕ್ಸಮರ ತಾರಕಕ್ಕೇರಿದೆ. ಪ್ರಮುಖವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ನಡುವಿನ ಜಟಾಪಟಿ...

ಆರ್‌ಎಸ್‌ಎಸ್ ದೇಶಪ್ರೇಮಿಗಳ ಸಂಘಟನೆ, ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ: ಪ್ರಿಯಾಂಕ್ ಖರ್ಗೆಗೆ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು

ಆರ್‌ಎಸ್‌ಎಸ್ ದೇಶಪ್ರೇಮಿಗಳ ಸಂಘಟನೆ, ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ: ಪ್ರಿಯಾಂಕ್ ಖರ್ಗೆಗೆ ಕೋಟಾ ಶ್ರೀನಿವಾಸ್ ಪೂಜಾರಿ ತಿರುಗೇಟು

by Shwetha
June 10, 2026
0

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರು ಜವಾಬ್ದಾರಿಯನ್ನು ಮರೆತು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

ನೆಹರು ದಾಖಲೆಯನ್ನು ಹಿಂದಿಕ್ಕಲಿರುವ ಪ್ರಧಾನಿ ಮೋದಿ

ನೆಹರು ದಾಖಲೆಯನ್ನು ಹಿಂದಿಕ್ಕಲಿರುವ ಪ್ರಧಾನಿ ಮೋದಿ

by Shwetha
June 10, 2026
0

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮತ್ತೊಂದು ಮಹತ್ವದ ದಾಖಲೆಯನ್ನು ಸರಿಗಟ್ಟಿದ್ದು, ನಾಳೆಯಿಂದ ಅದನ್ನು ಹಿಂದಿಕ್ಕಲಿದ್ದಾರೆ. ಚುನಾವಣೆಯಲ್ಲಿ ಜನರಿಂದ ಆಯ್ಕೆಯಾಗಿ...

ಅತಿ ವಿನಯಂ ಧೂರ್ತ ಲಕ್ಷಣಂ: ನಾನೇನು ಹರಿದಿಲ್ಲ ಎಂದ ಮೇಲೆ ಸಲಹೆ ಯಾಕೆ? ಡಿಕೆಶಿ ಭೇಟಿಗೆ ಹಳೆಯ ಇತಿಹಾಸ ನೆನಪಿಸಿದ ಹೆಚ್‌ಡಿಕೆ

ಅತಿ ವಿನಯಂ ಧೂರ್ತ ಲಕ್ಷಣಂ: ನಾನೇನು ಹರಿದಿಲ್ಲ ಎಂದ ಮೇಲೆ ಸಲಹೆ ಯಾಕೆ? ಡಿಕೆಶಿ ಭೇಟಿಗೆ ಹಳೆಯ ಇತಿಹಾಸ ನೆನಪಿಸಿದ ಹೆಚ್‌ಡಿಕೆ

by Shwetha
June 10, 2026
0

ರಾಜ್ಯ ರಾಜಕಾರಣದ ದಿಗ್ಗಜರಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಡುವಿನ ರಾಜಕೀಯ ವಾಕ್ಸಮರ ಈಗ ಮತ್ತೊಂದು ರೋಚಕ ಘಟ್ಟವನ್ನು ತಲುಪಿದೆ. ಇತ್ತೀಚೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram