ಮೈಸೂರು | ಮನೆಯ ದೇವರ ಕೋಣೆಯಲ್ಲಿ `ನಾಗ’ರಾಜ
ಮೈಸೂರು : ಮನೆಯೊಂದರ ದೇವರ ಕೋಣೆಯಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು ರಕ್ಷಣೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಬೋಗಾದಿಯ ಯಶೋಧರ ನಗರದ ಬೋಗಾದಿಯ ತೋಂಟದಾರ್ಯ ಎಂಬುವರ ಮನೆಯ ದೇವರ ಕೋಣೆಯಲ್ಲಿ ನಾಗರಹಾವು ಸೇರಿಕೊಂಡಿತ್ತು.
ದಿನಂಪ್ರತಿ ತೋಂಟದಾರ್ಯ ದಂಪತಿ ಊಟ ಮುಗಿಸಿ ನಿದ್ರೆಗೆ ಜಾರುವ ಮುನ್ನ ದೇವರಿಗೆ ನಮಸ್ಕರಿಸುತ್ತಾರೆ. ಬಲಿಜ ಸಮುದಾಯಕ್ಕೆ `2ಎ’ ಪೂರ್ಣಪ್ರಮಾಣದ ಮೀಸಲಾತಿ ನೀಡಿ
ಅದರಂತೆ ನಿನ್ನೆ ರಾತ್ರಿ ಊಟ ಮುಗಿದ ಬಳಿಕ ದೇವರಿಗೆ ನಮಸ್ಕರಿಸಲು ದೇವರ ಕೋಣೆ ಬಾಗಿಲು ತೆರೆದಾಗ ನಾಗರಹಾವು ಕಾಣಿಸಿಕೊಂಡಿದೆ.
ಇದನ್ನು ಕಂಡ ತೋಂಟದಾರ್ಯ ಅವರು ತಕ್ಷಣ ಸ್ನೇಕ್ ಶ್ಯಾಮ್ ಅವರಿಗೆ ಕರೆಮಾಡಿದ್ದಾರೆ. ಆ ಕೂಡಲೇ ಸ್ಥಳಕ್ಕಾಗಮಿಸಿದ ಉರಗತಜ್ಞ ಸ್ನೇಕ್ ಶ್ಯಾಮ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









