ADVERTISEMENT
Sunday, March 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಣ್ಣಿನ ಪರಿಸರ ವ್ಯವಸ್ಥೆ ಎಂಜಿನಿಯರ್‌ಗಳು, ಪರಿಸರ ಮತ್ತ ರೈತ ಮಿತ್ರ ಜೀವಿಗಳು ಇರುವೆಗಳು – ಎರೆಹುಳುಗಳು – ಸಗಣಿ ಜೀರುಂಡೆಗಳು:

Shwetha by Shwetha
January 28, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಮಣ್ಣಿನ ಪರಿಸರ ವ್ಯವಸ್ಥೆ ಎಂಜಿನಿಯರ್‌ಗಳು, ಪರಿಸರ ಮತ್ತ ರೈತ ಮಿತ್ರ ಜೀವಿಗಳು ಇರುವೆಗಳು – ಎರೆಹುಳುಗಳು – ಸಗಣಿ ಜೀರುಂಡೆಗಳು:

ನಮ್ಮ ಪರಿಸರ ವ್ಯವಸ್ಥೆ ಅದೆಷ್ಟು ವ್ಯವಸ್ಥಿತವೆಂದರೆ, ಇಲ್ಲಿ ಪ್ರತೀ ಜೀವಿಗಳಿಗೂ ಪರಿಸರ ಸಮತೋಲನ ಮತ್ತು ಪರಿಸರದ ಕಟ್ಟುವಕೆಯಲ್ಲಿ ತಮ್ಮದೇ ಆದ ಕರ್ತವ್ಯಗಳಿವೆ. ಈ ಜೀವಿಗಳು ತಮ್ಮ ಪಾಲಿನ ಜಾಯಕವನ್ನು ನಿಸ್ವಾರ್ಥವಾಗಿ ಮಾಡುತ್ತಲೇ ಇವೆ. ಪರಿಸರವನ್ನು ನಾಶ ಮಾಡುವ ಏಕೈಕ ಜೀವಿ ಮಾನವ ಮಾತ್ರ.
Environment friendly

Related posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

March 22, 2026
ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

March 22, 2026

ಪರಿಸರ ವ್ಯವಸ್ಥೆಯ ಎಂಜಿನಿಯರ್‌ಗಳು ಎಂದೇ ಕರೆಸಿಕೊಂಡ ಕೆಲವು ಜೀವಿಗಳು ಈ ಸೃಷ್ಟಿಯಲ್ಲಿವೆ. ತಮ್ಮ ಭೌತಿಕ ಪರಿಸರದಲ್ಲಿ ಪ್ರಮುಖ ಬದಲಾವಣೆಗಳನ್ನು ಇವು ಮಾಡುತ್ತವೆ. ಇವುಗಳ ದಿನನಿತ್ಯದ ಕಾರ್ಯಚಟುವಟಿಕೆಗಳು ನಮ್ಮ ಪರಿಸರ ವ್ಯವಸ್ಥೆಯಲ್ಲಿನ ಇತರ ಅನೇಕ ಜೀವಿಗಳ ಆವಾಸಸ್ಥಾನಗಳ ಮೇಲೆ ಪ್ರಭಾವ ಬೀರುತ್ತದೆ. ಈ ಜೀವಿಗಳನ್ನೇ ಪರಿಸರ ವ್ಯವಸ್ಥೆಯ ಎಂಜಿನಿಯರ್‌ಗಳು ಎಂದು ಕರೆಯುವುದಕ್ಕೆ ಕಾರಣಗಳಿವೆ. ಈ ಜೀವ ಪ್ರಭೇದಗಳು ಕಟ್ಟುವಿಕೆಯನ್ನೇ ಕಸುಬಾಗಿಸಿಕೊಂಡ ಸೂಕ್ಷ್ಮ ಜೀವಿಗಳು. ಇವುಗಳಲ್ಲಿ ಕೆಲವು ಜೀವಿಗಳು ಮರುಭೂಮಿಯ ಮರಳು ಮಿಶ್ರಿತ ಮಣ್ಣಿನಲ್ಲಿಯೂ ಸಹ ವಿರಳವಾದ ನೀರಿನ ಸರಬರಾಜನ್ನು ಪ್ರಾದೇಶಿಕವಾಗಿ ಕೇಂದ್ರೀಕರಿಸುವ ಒಂದು ಅಗ್ರಾಹ್ಯ ಮೇಲ್ಮೈ ಹೊರಪದರವನ್ನು ಸೃಷ್ಟಿಸುತ್ತವೆ.
Environment friendly

ಪರಿಸರವೆಂಬ ಅನೂಹ್ಯ ಲೋಕದ ಸೃಜನಶೀಲ ಕಾರ್ಯಶೀಲ ಎಂಜಿನಿಯರ್ ಗಳಲ್ಲಿ ಬಿಲ ಪ್ರಾಣಿಗಳೂ ಸೇರಿವೆ. ಇವು ಮಣ್ಣಿನಲ್ಲಿ ಗಾಳಿ ಮತ್ತು ನೀರಿನ ಚಲನೆಯನ್ನು ಸರಾಗಗೊಳಿಸುವ ಮೂಲಕ ಇತರ ಜೀವಿಗಳಿಗೆ ಬದುಕುವ ಅವಕಾಶಗಳನ್ನು ಒದಗಿಸಿಕೊಡುತ್ತವೆ. ಮಣ್ಣಿನಾಳದಲ್ಲಿ ಬಿಲ ತೋಡಿ ಬದುಕುವ ಕೆಲವು ಸರಿಸೃಪಗಳು ಮತ್ತು ಉರಗಜಾತಿಯ ಜೀವಿಗಳಿಂದ ಪರಿಸರದ ಸಮತೋಲನಕ್ಕೆ ಸಾಕಷ್ಟು ಕೊಡುಗೆಗಳಿವೆ. ಸಮುದ್ರ ತಟದಲ್ಲಿ ಆಮೆ, ಮೊಸಳೆಗಳಂತ ಜಲಚರಗಳು, ಮರಳುಗಾಡಿನಲ್ಲಿ ಮರುಭೂಮಿಯ ಇಲಿ ಹಾಗೂ ಮೃದ್ವಂಗಿಗಳಿ ಬಿಲವಾಸಿ ಜೀವಿಗಳಾಗಿ ತಮ್ಮ ಪಾಲಿನ ಪರಿಸರ ನಿರ್ಮಾಣದ ಕಾಯಕ ಮಾಡುತ್ತವೆ. ಗೋಫರ್ಸ್ ಮತ್ತು ಮೋಲ್ ಎಂಬ ಪ್ರಭೇದದ ಇಲಿಗಳ ಅತ್ಯದ್ಭುತ ಕಾರ್ಯಾಚರಣೆಯಿಂದ ಮಣ್ಣಿನ ಹದ ಹೆಚ್ಚಾಗುತ್ತದೆ. ಇವು ಬಿಲ ತೋಡುವ ಜೊತೆಗೆ ಮಣ್ಣಿನ ಕುಂಬಾರಿಕೆಯನ್ನೂ ಮಾಡುತ್ತವೆ. ಇದೇ ತರಹ ದೊಡ್ಡ ಜೀವಿಗಳಾದ ಬಿಲವಾಸಿಗಳೂ ಆದ ಚಿಪ್ಪು ಹಂದಿ ಅಥವಾ ಪ್ಯಾಂಗೋಲಿನ್, ಮುಳ್ಳು ಹಂದಿಗಳಿಂದ ಮಣ್ಣನ ಸಾರವರ್ಧನೆಗೆ ಆಗುವ ಉಪಕಾರ ಅಷ್ಟಿಷ್ಟಲ್ಲ.

ಗೆದ್ದಲುಗಳು, ಎರೆಹುಳುಗಳು ಮತ್ತು ಇರುವೆಗಳು ಪ್ರಕೃತಿ ಸೃಷ್ಟಿಸಿಕೊಂಡಿರುವ ಅತ್ಯುತ್ತಮ ಎಂಜಿನಿಯರ್ ಗಳು. ಇವು ಮಣ್ಣಿನ ಸಾಂದ್ರತೆಯನ್ನು ಸಾರವನ್ನು ಮತ್ತು ಸಾವಯವತೆಯನ್ನು ಹೆಚ್ಚಿಸುತ್ತವೆ. ಗೆದ್ದಲು ಕಟ್ಟುವ ಹುತ್ತ ಅದ್ಭುತವಾದ ಸಾರಯುಕ್ತ ಮಣ್ಣು. ಹಾಗೆಯೇ ಇರುವೆಗಳೂ ಸಹ ತಮ್ಮ ಗೂಡು ನಿರ್ಮಿಸುವೆಡೆಯಲ್ಲಿ ಮಣ್ಣಿನ ಕಣಗಳನ್ನು ನವಿರಾಗಿಸುತ್ತವೆ. ಎರೆಹುಳುಗಳಂತೂ ಅಕ್ಷರಶಃ ಮಣ್ಣಿನ್ನು ತಿನ್ನುತ್ತವೆ ಮತ್ತು ಇವು ವಿಸರ್ಜಿಸುವ ಮಣ್ಣು ಅದ್ಭುತವಾದ ಸಾರ ಹೊಂದಿರುವ ಪ್ರಾಕೃತಿಕ ಗೊಬ್ಬರ. ಹಾಗಾಗೇ ಎರಹುಳುವನ್ನು ರೈತನ ಮಿತ್ರ ಎಂದು ಕರೆಯಲಾಗುತ್ತದೆ. ಇವು ಸಸ್ಯದ ಅವಶೇಷಗಳನ್ನು ಮಣ್ಣಿನೊಳಕ್ಕೆ ಹಾಯಿಸುತ್ತವೆ. ತಮ್ಮ ದೇಹದಿಂದ ಖನಿಜ ಮಣ್ಣಿನ ಕಣಗಳೊಂದಿಗೆ ಹಾದುಹೋಗುವ ಮೂಲಕ ಫಲವತ್ತಾದ ಮಣ್ಣನ್ನು ಸಂಯೋಜಿಸುತ್ತವೆ.

ಪರಿಸರ ವ್ಯವಸ್ಥೆಯ ಇನ್ನೊಂದು ವರ್ಗದ ಎಂಜಿನಿಯರ್ ಜೀವಿಗಳೆಂದರೇ ಸಗಣಿ ಜೀರುಂಡೆಗಳು. ಈ ಸಗಣಿ ಜೀರುಂಡೆಗಳು ಪ್ರಾಣಿಗಳ ಸಗಣಿಗಳನ್ನು ಸಣ್ಣ ಸುರಂಗಗಳಲ್ಲಿ ಹೂತುಹಾಕುವ ಮೂಲಕ ಪೋಷಕಾಂಶಗಳ ವೃದ್ಧಿಗೊಳಿಸುತ್ತವೆ. ಇವು ಅನೇಕ ದೊಡ್ಡ ಸಸ್ತನಿಗಳ ವಿಸರ್ಜಿತ ಮಲದ ತುಂಡುಗಳನ್ನು ಕತ್ತರಿಸಿ, ಆ ಸಗಣಿ ಚೆಂಡುಗಳನ್ನು ಹೊಸ ಸ್ಥಳಕ್ಕೆ ಸುತ್ತಲು ಅನುವು ಮಾಡಿಕೊಡುತ್ತದೆ. ಹೆಣ್ಣು ಸಗಣಿ ಜೀರುಂಡೆಯು ತನ್ನ ಮೊಟ್ಟೆಗಳನ್ನು ಸಗಣಿ ಚೆಂಡಿನಲ್ಲಿ ಇರಿಸಿ ಮಣ್ಣಿನಲ್ಲಿ ಹೂತುಹಾಕುತ್ತದೆ. ಸಗಣಿ ಹರಡುವುದು ಮತ್ತು ಹೂಳುವುದು ಜೀರುಂಡೆ ಲಾರ್ವಾಗಳಿಗೆ ಆಹಾರ ಮೂಲವನ್ನು ಒದಗಿಸುವುದಲ್ಲದೆ, ಗೊಬ್ಬರದಲ್ಲಿರುವ ಪೋಷಕಾಂಶಗಳ ಹರಿವನ್ನು ಸುಲಭವಾಗಿ ರಕ್ಷಿಸುತ್ತದೆ. ಈ ಜೀರುಂಡೆಗಳು ಸಗಣಿ ತುಏಉಗಳನ್ನು ತ್ವರಿತವಾಗಿ ಹೂತುಹಾಕುವುದರಿಂದ ಮಾಂಸಾಹಾರಿ ನೊಣಗಳು ಮತ್ತು ಹಾನಿಕಾರಕ ಕ್ರಿಮಿ ಕೀಟಗಳ ಸಂತಾನೋತ್ಪತ್ತಿಯನ್ನು ತಡೆಯುತ್ತದೆ. ಪರಿಸರ ವ್ಯವಸ್ಥೆಯಲ್ಲಿ ಫಲವತ್ತಾದ ಮಣ್ಣಿನ ಕೊರತೆಯಿದ್ದರೆ, ಈ ಸೂಕ್ತ ಜಾತಿಯ ಸಗಣಿ ಜೀರುಂಡೆಗಳನ್ನು ಅಥವಾ ಎರೆಹುಳುಗಳನ್ನು ಪರಿಚಯಿಸುವುದು ಅತ್ಯಂತ ಲಾಭಕರ.
Environment friendly

ಮೊದಲಿಗೆ, ಮಣ್ಣಲ್ಲಿ ನೀರು ಇಂಗುವಂತಹ ಸಣ್ಣ ಸುರಂಗಗಳ ನಿರ್ಮಾಣವಾಗಬೇಕು. ಇದು ಸಾಧ್ಯವಾಗುವುದು ಮಣ್ಣೊಳಗೆಯೇ ಸಂಚರಿಸುವ ಜೀವಾಣುಗಳಿಂದ. ಈ ಮಣ್ಣುಜೀವಿಗಳಿಗೆ ಸಾವಯವ ವಸ್ತುಗಳೇ ಮೂಲಾಹಾರ. ಮಣ್ಣಿಗೆ ಸಾವಯವ ಅಂಶ ಬೆರೆಸಿದಾಗ, ಅದನ್ನು ಆಹಾರವಾಗಿ ಸೇವಿಸುವ ಜೀವಿಗಳು ಓಡಾಡಿದಾಗ, ಸುರಂಗಗಳು ಸೃಷ್ಟಿಯಾಗುತ್ತವೆ. ಇವುಗಳಲ್ಲಿ ಗಾಳಿಯಾಡುತ್ತದೆ – ನೀರು ಹರಿಯುತ್ತದೆ. ಹೀಗಾದಾಗ ಸಹಜವಾಗಿ ಸರಳವಾಗಿ ಮತ್ತು ಸುಲಭವಾಗಿ ಆ ಪ್ರದೇಶದ ಮಣ್ಣು ಸಾವಯವಯುಕ್ತವಾಗುತ್ತದೆ ಮತ್ತು ಸಾರಯುಕ್ತವಾಗುತ್ತದೆ.

ಫಲವತ್ತಾದ /ಆರೋಗ್ಯಯುತ ಮತ್ತು ಉತ್ಪಾದನಾ ತಾಕತ್ತು ಹೊಂದಿರುವ ಮಣ್ಣುಗಳ ಬಣ್ಣ ದಟ್ಟವಾಗಿರುತ್ತದೆ. ಈ ಮಣ್ಣನ್ನ ಮೇಲಿಂದ ಕೆಳಗೆ ನೆಲಕ್ಕೆ ಹಾಕಿದಾಗ, ಧೂಳಾಗಿ ಬೀಳದೆ ಉದುರು ಉದುರಾಗಿ ಗುಪ್ಪೆ ಗುಪ್ಪೆಯಾಗಿ ಬೀಳುತ್ತದೆ. ಇದನ್ನು ಕೈಯಲ್ಲಿರಿಸಿದಾಗ ತಂಪಾಗಿರುತ್ತದೆ. ಈ ಮಣ್ಣಲ್ಲಿ, ಸಾವಯವ ವಸ್ತುಗಳಾದ ಕಸ – ಕಡ್ಡಿಗಳು ಸಣ್ಣಪ್ರಮಾಣದಲ್ಲಿ ಕಾಣಿಸುತ್ತವೆ. ಇವು ಒಂದು ತರಹದ ಕರ್ಪೂರದ ವಾಸನೆ ಹೊಂದಿರುತ್ತದೆ. ಈ ಮಣ್ಣನ್ನು ಆಳವಾಗಿ ಅಥವಾ ಸೂಕ್ಷ್ಮವಾಗಿ ಗಮನಿಸಿದಾಗ, ಒಂದೆರಡು ಬಗೆಯ ಜೀವಾಣುಗಳು ಸಹ ಕಾಣಿಸುತ್ತವೆ. ಇಂತಹ ಮಣ್ಣುಗಳಲ್ಲಿ ಮಳೆನೀರು ಹಿಡಿದಿಡುವ ಸಾಮರ್ಥ್ಯ ಇರುತ್ತದೆ. ಈ ತರಹದ ಫಲವತ್ತಾದ ಮಣ್ಣು ಕೇವಲ ನೈಸರ್ಗಿಕ ಕಾರ್ಖಾನೆಯ ಪರಿಸರ ಎಂಜಿನಿಯರ್ ಗಳಿಂದ ಮಾತ್ರ ಸಾಧ್ಯ.

–ದೇವಿಕಾ
ಕೃಷಿಕರು, ಮೈಸೂರು

***

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

https://t.co/ZaEt7XcIUi

— Saaksha TV (@SaakshaTv) January 27, 2021

ರಾಜ್ಯ ಸರ್ಕಾರದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾದ ಬಾಲ ಪ್ರತಿಭೆ ಆಶ್ರಯ ಪಿhttps://t.co/COtsY4G6S3

— Saaksha TV (@SaakshaTv) January 27, 2021

 

Tags: EcosystemsFarmersSoil Ecosystem Engineers
ShareTweetSendShare
Join us on:

Related Posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

by Shwetha
March 22, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

by Shwetha
March 22, 2026
0

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಿದ್ದ ಮಠಾಧೀಶರ ವಿರುದ್ಧ ಸಿಎಂ ಸಿದ್ದರಾಮಯ್ಯ ನೇರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇತ್ತೀಚೆಗೆ...

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

by Shwetha
March 22, 2026
0

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ, ವಿಶೇಷವಾಗಿ...

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

by Shwetha
March 22, 2026
0

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲವಾದ ಪೆಟ್ಟು ನೀಡಲು ಹಾಗೂ ಕಳೆದುಕೊಂಡಿರುವ ತನ್ನ ಗ್ರಾಹಕರನ್ನು ಮರಳಿ ಸೆಳೆಯಲು ಸರ್ಕಾರಿ...

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

by Shwetha
March 22, 2026
0

ದೇಶದ ಕೋಟ್ಯಂತರ ಪಡಿತರ ಚೀಟಿ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರವು ಅತಿದೊಡ್ಡ ಸಿಹಿಸುದ್ದಿಯೊಂದನ್ನು ನೀಡಿದೆ. ಮುಂಬರುವ ಏಪ್ರಿಲ್ ತಿಂಗಳಿನಲ್ಲಿಯೇ ಮುಂದಿನ ಮೂರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram