ಚೇತನ್ ಪ್ರತಾಪ್ ಸಿಂಗ್ ಚೌಹಾಣ್ (21 ಜುಲೈ 1947 – 16 ಆಗಸ್ಟ್ 2020)
ಇತ್ತೀಚಿಗಷ್ಟೇ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮತ್ತು COVID-19 ಕಾರಣದಿಂದ ನಿಧನರಾದ ಕ್ರಿಕೆಟಿಗ ಮತ್ತು ರಾಜಕಾರಣಿ ಚೇತನ್ ಪ್ರತಾಪ್ ಸಿಂಗ್ ಚೌಹಾಣ್ ಬಗ್ಗೆ ಒಂದಿಷ್ಟು ಸ್ವಾರಸ್ಯಕರ ಮಾಹಿತಿ ಇಲ್ಲಿ ಇದೆ.
ಉತ್ತರಪ್ರದೇಶದಲ್ಲಿ ಜನಿಸಿದ ಚೌಹಾನ್ ಆರ್ಮಿ ಆಫೀಸ್ ಆಗಿದ್ದ ತಂದೆಯ ಜೊತೆ 1960 ರಲ್ಲಿ ಮಹಾರಾಷ್ಟ್ರದ ಪುಣೆಗೆ ತೆರಳಿದರು.
ಪುಣೆಯ ವಾಡಿಯಾ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಮಹಾರಾಷ್ಟ್ರದ ಮಾಜಿ ಆಟಗಾರ ಕಮಲ್ ಭಂಡಾರ್ಕರ್ ಅವರಿಂದ ಕ್ರಿಕೆಟ್ ತರಬೇತಿ.
1966-67ರಲ್ಲಿ ರೋಹಿಂಟನ್ ಬರಿಯಾ ಟ್ರೋಫಿಯಲ್ಲಿ ಪುಣೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದರು.
ಮುಂದೆ ಇಂಟರ್ ಝೋನಲ್ ವಿಜ್ಜಿ ಟ್ರೋಫಿಗೆ ಪಶ್ಚಿಮ ವಲಯವನ್ನು ಪ್ರತಿನಿಧಿಸಿದರು
ಫೈನಲ್ನಲ್ಲಿ ಸುನಿಲ್ ಗವಾಸ್ಕರ್ ಜೊತೆ ಆರಂಭಿಕ ಆಟಗಾರನಾಗಿ ಬಡ್ತಿ.

1967 ರಲ್ಲಿ ಮಹಾರಾಷ್ಟ್ರ ರಣಜಿ ತಂಡದಲ್ಲಿ ಸ್ಥಾನ ಪಡೆದ ಚೌಹಾಣ್
1968 ರಲ್ಲಿ ಬಾಂಬೆ ವಿರುದ್ಧ ಚೊಚ್ಚಲ ಶತಕ ಸಿಡಿಸಿದರು.
1969-70ರಲ್ಲಿ ದುಲೀಪ್ ಟ್ರೋಫಿ ಫೈನಲ್ನಲ್ಲಿ ದಕ್ಷಿಣ ವಲಯದ ವಿರುದ್ಧ 103 ರನ್ ಗಳಿಸಿದರು.ವಿಶೇಷವೆಂದರೆ ಭಾರತ ತಂಡದ ಐದು ಟೆಸ್ಟ್ ಬೌಲರ್ಗಳ ವಿರುದ್ಧ ಆಡಿದರು.
ಚೌಹಾನ್ ಬಾಂಬೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.
ಅವರು ತನ್ನ ಚೊಚ್ಚಲ ರನ್ ಗಳಿಸಲು 25 ನಿಮಿಷಗಳನ್ನು ತೆಗೆದುಕೊಂಡರು.
ಎರಡು ಟೆಸ್ಟ್ ಪಂದ್ಯಗಳ ನಂತರ ಚೌಹಾನ್ ಅವರನ್ನು ಕೈಬಿಡಲಾಯಿತು.
ನಂತರದ ಋತುವಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಾಣಿಸಿಕೊಂಡರು, ವಿಫಲರಾದ ಕಾರಣ ಮೂರು ವರ್ಷಗಳ ಕಾಲ ಅವರನ್ನು ಕೈಬಿಡಲಾಯಿತು.
1972–73 ರಲ್ಲಿ ಮಹಾರಾಷ್ಟ್ರದ ಪರ ಚೌಹಾಣ್ 873 ರನ್ ಗಳಿಸಿದರು,
ಗುಜರಾತ್ ಮತ್ತು ವಿದರ್ಭ ವಿರುದ್ಧದ ಪಂದ್ಯಗಳಲ್ಲಿ ಸತತ ದ್ವಿಶತಕ ಗಳಿಸಿದರು.
ಅವರ ದ್ವಿಶತಕವನ್ನು ಪರಿಗಣಿಸಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಆಡಿದರು. ಆದರೆ ನಿರೀಕ್ಷೆ ಹುಸಿಮಾಡಿದರು. ಮತ್ತೆ ಐದು ವರ್ಷಗಳ ಕಾಲ ಟೆಸ್ಟ್ ಆಡಲಿಲ್ಲ.
ಅವರು 1975 ರಲ್ಲಿ ದೆಹಲಿ ಮತ್ತು ಉತ್ತರ ವಲಯಕ್ಕೆ ತೆರಳಿದರು.
ಶ್ರೀಲಂಕಾ ವಿರುದ್ಧದ ಅನಧಿಕೃತ ಟೆಸ್ಟ್ನಲ್ಲಿ ಮತ್ತೆ ವಿಫಲರಾದರು
1976-77 ರ ರಣಜಿ ಋತುವಿನಲ್ಲಿ ಶತಕದ ಮೇಲೆ ಶತಕ ಬಾರಿಸಿದರು.
1977 ರ ದುಲೀಪ್ ಟ್ರೋಫಿ ಯಲ್ಲಿ ಶತಕ ಬಾರಿಸಿ ಆಸ್ಟ್ರೇಲಿಯಾಕ್ಕೆ ತಂಡದಲ್ಲಿ ಸ್ಥಾನ ಪಡೆದರು.

ಚೌಹಾನ್ ತಮ್ಮ ಪ್ರವಾಸದ ಮೊದಲ ಪಂದ್ಯದಲ್ಲಿ ವಿಕ್ಟೋರಿಯಾ ವಿರುದ್ಧ 157 ರನ್ ಗಳಿಸಿದರು.
ಅವರಿಗೆ ಇದು 516 ನಿಮಿಷಗಳನ್ನು ತೆಗೆದುಕೊಂಡಿತು ಮತ್ತು ಕೇವಲ ಎರಡು ಬೌಂಡರಿಗಳನ್ನು ಒಳಗೊಂಡಿತ್ತು.
ವಿಕ್ಟೋರಿಯಾದ ಪಾಲ್ ಹಿಬ್ಬರ್ಟ್ ಪಂದ್ಯದಲ್ಲಿ ಒಂದೇ ಬೌಂಡರಿ ಇಲ್ಲದೆ ನೂರು ಗಳಿಸಿದ್ದರು.
ಪರ್ತ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡಕ್ಕೆ ಮರಳಿದ ಚೌಹಾನ್ ತಮ್ಮ ಮೊದಲ ಇನ್ನಿಂಗ್ಸ್ನಲ್ಲಿ 88 ರನ್ ಗಳಿಸಿದರು.
ಅಲ್ಲಿಂದ ಅವರು ತಮ್ಮ ವೃತ್ತಿಜೀವನದ ಕೊನೆಯವರೆಗೂ ಕೇವಲ ಒಂದು ಟೆಸ್ಟ್ ನ್ನು ಮಾತ್ರ ತಪ್ಪಿಸಿಕೊಂಡರು.
ಒಂದು ಸಂದರ್ಭವನ್ನು ಹೊರತುಪಡಿಸಿ ಆರಂಭಿಕ ಬ್ಯಾಟ್ಸ್ ಮ್ಯಾನ್ ಆಗಿ ಸುನಿಲ್ ಗವಾಸ್ಕರ್ ಅವರೊಂದಿಗೆ ಆಡಿದರು.
1980–81ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್ನಲ್ಲಿ ಮೂರು ರನ್ಗಳಿಂದ ಅವರು ಶತಕವಂಚಿತರಾದರು
. ಮುಂದಿನ ಟೆಸ್ಟ್ನಲ್ಲಿ ಮೆಲ್ಬೋರ್ನ್ನಲ್ಲಿ, ಅವರು 85 ರನ್ ಗಳಿಸಿ ಡೆನ್ನಿಸ್ ಲಿಲ್ಲಿಗೆ ಎಲ್ಬಿಡಬ್ಲ್ಯೂ ನೀಡಿದರು. ನಾಯಕ ಗವಾಸ್ಕರ್, ಹೊರಹೋಗುವ ನಿರ್ಧಾರವನ್ನು ವಿವಾದಿಸಿದರು ಮತ್ತು ಚೌಹಾಣ್ ಅವರೊಂದಿಗೆ ಮೈದಾನದಿಂದ ಹೊರಹೋಗುವಂತೆ ಆದೇಶಿಸಿದರು.

ಅವರು ಆರಂಭಿಕ ಬ್ಯಾಟ್ಸಮನ್ ಆಗಿ, ಗವಾಸ್ಕರ್ ಅವರೊಂದಿಗೆ 59 ಪಂದ್ಯಗಳಲ್ಲಿ3022 ರನ್ಗಳ ಜೊತೆಯಾಟ ಆಡಿದರು , ಅದರಲ್ಲಿ ಹತ್ತು ಶತಕದ ಜೊತೆಯಾಟವು ಸೇರಿದೆ.
ಟೆಸ್ಟ್ ವೃತ್ತಿಜೀವನದಲ್ಲಿ ಒಂದು ಶತಕವೂ ಇಲ್ಲದೆ 2000 ರನ್ ಗಳಿಸಿದ ಮೊದಲ ಟೆಸ್ಟ್ ಕ್ರಿಕೆಟಿಗ, ಒಟ್ಟು16 ಅರ್ಧಶತಕ ಗಳೊಂದಿಗೆ 2084 ರನ್ ಗಳಿಸಿದರು.
ಚೌಹಾನ್ 1981 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು.
ಮಹಾರಾಷ್ಟ್ರ ಮತ್ತು ದೆಹಲಿ ಪರ ರಣಜಿ ಟ್ರೋಫಿ ಆಡಿದರು.
ಚೇತನ್ ಚೌಹಾನ್ ಅವರನ್ನು ಜೂನ್ 2016 ರಿಂದ ಜೂನ್ 2017 ರವರೆಗೆ ಎನ್ಐಎಫ್ಟಿ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ) ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
1991 ಮತ್ತು 1998 ರಲ್ಲಿ ಉತ್ತರ ಪ್ರದೇಶದ ಅಮ್ರೋಹಾದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾದರು.
ನೌಗವಾನ್ ಸದಾತ್ (ವಿಧಾನಸಭಾ ಕ್ಷೇತ್ರ) ದಿಂದ ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾದರು ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರದಲ್ಲಿ ಸಚಿವರಾದರು.








