ಹೈದ್ರಾಬಾದ್ ನಿಂದ ಬೆಂಗಳೂರಿಗೆ ಶಿಫ್ಟ್..! ಲಕ್ಷ್ಮಣ್ ಆದಾಯಕ್ಕೆ ಬ್ರೇಕ್ ಹಾಕಿದ ಸೌರವ್ ಗಂಗೂಲಿ..!
ವಿವಿಎಸ್ ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಹೀಗಾಗಿ ಇನ್ನು ಮುಂದೆ ವಿವಿಎಸ್ ಲಕ್ಷ್ಮಣ್ ಬೆಂಗಳೂರಿನಲ್ಲೇ ಇರಲಿದ್ದಾರೆ.
ಹೈದ್ರಾಬಾದ್ ನಿಂದ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಶಿಫ್ಟ್ ಆಗಲಿರುವ ಲಕ್ಷ್ಮಣ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಮುಂದಿನ ಮೂರು ವರ್ಷಗಳ ಕಾಲ ವಿವಿಎಸ್ ಲಕ್ಷ್ಮಣ್ ಬೆಂಗಳೂರಿನಲ್ಲಿರುತ್ತಾರೆ. ಆದ್ರೆ ಅವರ ಆದಾಯಕ್ಕೆ ಬ್ರೇಕ್ ಬಿದ್ದಿದೆ.
ಲಕ್ಷ್ಮಣ್ ಅವರ ಮಕ್ಕಳು ಬೆಂಗಳೂರಿನಲ್ಲಿ ವಿದ್ಯಭ್ಯಾಸ ಮಾಡಲಿದ್ದಾರೆ. ಒಂದು ಊರಿನಿಂದ ಒಂದು ಊರಿಗೆ ಕುಟುಂಬವನ್ನು ಬದಲಾವಣೆ ಮಾಡೋದು ಸುಲಭದ ಕೆಲಸವಲ್ಲ.
ಯಾಕಂದ್ರೆ ಇದೆಲ್ಲಾ ಆಗೋದು ಭಾರತೀಯ ಕ್ರಿಕೆಟ್ ಮೇಲಿನ ನಿಷ್ಠೆ ಮತ್ತು ಬದ್ಧತೆಯಿಂದ ಮಾತ್ರ ಎಂದು ಗಂಗೂಲಿ ಲಕ್ಷ್ಮಣ್ ಅವರ ನಿರ್ಧಾರಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಅಂದ ಹಾಗೇ ಗಂಗೂಲಿ ಅವರು ಲಕ್ಷ್ಮಣ್ ಅವರ ಆದಾಯಕ್ಕೆ ಸಂಬಂದಿಸಿದ್ದಂತೆ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿಗೆ ಶಿಫ್ಟ್ ಆಗಲಿರುವ ಲಕ್ಷ್ಮಣ್ ಅವರ ಆದಾಯ ಕಡಿಮೆಯಾಗಲಿದೆ. ಯಾಕಂದ್ರೆ ಲಕ್ಷ್ಮಣ್ ಅವರು ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡದ ಮೆಂಟರ್ ಆಗಿದ್ದರು.
ಜೊತೆಗೆ ವೀಕ್ಷಕ ವಿವರಣೆ ಕೂಡ ಮಾಡುತ್ತಿದ್ದರು. ಆದ್ರೆ ಈಗ ಎನ್ ಸಿಎನಲ್ಲಿ ಬಿಸಿಸಿಐನ ಸಂಭಾವಣೆ ಮಾತ್ರ ಸಿಗಲಿದೆ.
ಇನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಲಕ್ಷ್ಮಣ್ ಅವರಿಗೆ ಕೆಲಸ ಮಾಡೋದು ಕಷ್ಟವೇನೂ ಆಗಲ್ಲ.
ಯಾಕಂದ್ರೆ ಈ ಹಿಂದೆ ರಾಹುಲ್ ದ್ರಾವಿಡ್ ಅಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುವುದು ಲಕ್ಷ್ಮಣ್ ಅವರ ಜವಾಬ್ದಾರಿಯಾಗಿದೆ.
ಲಕ್ಷ್ಮಣ್ ಅವರ ಕ್ರಿಕೆಟ್ ಮೇಲಿನ ಬದ್ಧತೆ ಮತ್ತು ಪ್ರೀತಿಯನ್ನು ಆಧಾರವಾಗಿಟ್ಟುಕೊಂಡು ಅವರನ್ನು ಎನ್ ಸಿಎ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದೇವೆ.
ಇಲ್ಲಿ ಭಾವನಾತ್ಮಕ ಸಂಬಂಧಕ್ಕಿಂತ ಹೆಚ್ಚಾಗಿ ಭಾರತೀಯ ಕ್ರಿಕೆಟ್ ಮೇಲಿನ ನಿಷ್ಢೆ ಮತ್ತು ಪ್ರೀತಿ ಹಾಗೂ ಕಾಳಜಿ ಹೆಚ್ಚಿನ ಪಾತ್ರ ವಹಿಸಿದೆ.
ಭಾರತೀಯ ಕ್ರಿಕೆಟ್ ಸುರಕ್ಷಿತರ ಕೈಯಲ್ಲಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಸೇವೆ ಸಲ್ಲಿಸುತ್ತಿದ್ದಾರೆ.
ಎನ್ ಸಿ ಎ ಮುಖ್ಯಸ್ಥರಾಗಿ ವಿವಿಎಸ್ ಲಕ್ಷ್ಮಣ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಇನ್ನು ಉಳಿದಿರುವುದು ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ, ಅನಿಲ್ ಕುಂಬ್ಳೆ ಮತ್ತು ವೀರೇಂದ್ರ ಸೆಹ್ವಾಗ್, ಮುಂದಿನ ದಿನಗಳಲ್ಲಿ ಇವರು ಯಾವ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.