ADVERTISEMENT
Sunday, April 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೇರಳ ರಣಜಿ ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಕೊಚ್ಚಿ ಎಕ್ಸ್ ಪ್ರೆಸ್ ಶ್ರೀಶಾಂತ್

admin by admin
June 18, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಕೇರಳ ರಣಜಿ ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಕೊಚ್ಚಿ ಎಕ್ಸ್ ಪ್ರೆಸ್ ಶ್ರೀಶಾಂತ್

ಟೀಮ್ ಇಂಡಿಯಾದ ವೇಗಿ ಶ್ರೀಶಾಂತ್‍ಗೆ ಇದು ಶುಭ ಸುದ್ದಿ. ಏಳು ವರ್ಷಗಳ ನಂತರ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುವ ಅವಕಾಶವನ್ನು ಕೇರಳ ಕ್ರಿಕೆಟ್ ಮಂಡಳಿ ನೀಡಿದೆ. 2013ರ ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿ ಏಳು ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ಶ್ರೀಶಾಂತ್ ಮತ್ತೆ ದೇಶಿ ಕ್ರಿಕೆಟ್‍ಗೆ ಎಂಟ್ರಿಯಾಗಲಿದ್ದಾರೆ.

Related posts

ಸಚಿವ ಕೆ ಎಚ್ ಮುನಿಯಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕೆಂಗಣ್ಣು ಕೇಂದ್ರವನ್ನು ಓಲೈಸುವ ಬದಲು ಬಾಯಿ ಮುಚ್ಚಿಕೊಂಡಿರಿ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ

ಸಚಿವ ಕೆ ಎಚ್ ಮುನಿಯಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕೆಂಗಣ್ಣು ಕೇಂದ್ರವನ್ನು ಓಲೈಸುವ ಬದಲು ಬಾಯಿ ಮುಚ್ಚಿಕೊಂಡಿರಿ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ

April 5, 2026
ಪಾಕಿಸ್ತಾನದಲ್ಲಿ ನಿಲ್ಲದ ಹಿಂದೂ ವಿರೋಧಿ ಕೃತ್ಯ: ಕರಾಚಿಯಲ್ಲಿ ಪುರಾತನ ದೇವಾಲಯದ ಮೇಲೆ ದಾಳಿ, ದೇವತಾ ಮೂರ್ತಿಗಳ ಭಗ್ನ

ಪಾಕಿಸ್ತಾನದಲ್ಲಿ ನಿಲ್ಲದ ಹಿಂದೂ ವಿರೋಧಿ ಕೃತ್ಯ: ಕರಾಚಿಯಲ್ಲಿ ಪುರಾತನ ದೇವಾಲಯದ ಮೇಲೆ ದಾಳಿ, ದೇವತಾ ಮೂರ್ತಿಗಳ ಭಗ್ನ

April 5, 2026

ಏಳು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದ ಶ್ರೀಶಾಂತ್ ಅವರು ಚಡಪಡಿಸುತ್ತಿದ್ದರು. ಇದೀಗ ಅವರ ಶಿಕ್ಷೆಯ ಅವಧಿ 2020ರ ಸೆಪ್ಟಂಬರ್ ನಲ್ಲಿ ಮುಗಿಯಲಿದೆ. ಹೀಗಾಗಿ ಕೇರಳ ರಣಜಿ ತಂಡಕ್ಕೆ ಮತ್ತೆ ವಾಪಸ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಆದ್ರೆ ಅದಕ್ಕಿಂತ ಮೊದಲು ಶ್ರೀಶಾಂತ್ ಫಿಟ್‍ನೆಸ್ ಸಾಬೀತುಪಡಿಸಬೇಕಾಗಿದೆ. 2013ರ ಮೇ ತಿಂಗಳಿನಲ್ಲಿ ಶ್ರೀಶಾಂತ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಸ್ಪಾಟ್ ಫಿಕಿಂಗ್ಸ್ ಆರೋಪದಡಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರ ಆಡುತ್ತಿದ್ದ ಶ್ರೀಶಾಂತ್ ಸೇರಿ ಅಜಿತ್ ಚಾಂಡಿಲ್ಯ ಮತ್ತು ಅಂಕಿತ್ ಚಾವನ್‍ರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಅಲ್ಲದೆ ಬಿಸಿಸಿಐ ಈ ಮೂವರು ಆಟಗಾರರಿಗೆ ಅಜೀವ ನಿಷೇಧದ ಶಿಕ್ಷೆಯನ್ನು ವಿಧಿಸಿತ್ತು. ಆದ್ರೆ ಶ್ರೀಶಾಂತ್ ತನ್ನ ಮೇಲಿನ ಆರೋಪ ಸುಳ್ಳು ಅಂತ ಕಾನೂನು ಹೋರಾಟ ನಡೆಸಿದ್ದರು. 2015ರಲ್ಲಿ ದೆಹಲಿ ವಿಶೇಷ ಕೋರ್ಟ್ ಶ್ರೀಶಾಂತ್ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಆದ್ರೆ ಬಿಸಿಸಿಐನ ಅಜೀವ ನಿಷೇಧದ ಶಿಕ್ಷೆ ಹಾಗೇ ಉಳಿದಿತ್ತು. ಬಳಿಕ 2018ರಲ್ಲಿ ಕೇರಳ ಹೈಕೋರ್ಟ್ ಬಿಸಿಸಿಐ ನಿಷೇಧವನ್ನು ಪ್ರಶ್ನೆ ಮಾಡಿತ್ತು. ಹಾಗೇ 2019ರಲ್ಲಿ ಸುಪ್ರೀಮ್ ಕೋರ್ಟ್ ಬಿಸಿಸಿಐಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಆದೇಶ ನೀಡಿತ್ತು. ಹೀಗಾಗಿ ಶ್ರೀಶಾಂತ್‍ಗೆ ಏಳು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿತ್ತು.
ಕೇರಳ ಕ್ರಿಕೆಟ್ ಸಂಸ್ಥೆಗೆ ನಾನು ಅಭಾರಿಯಾಗಿದ್ದೇನೆ. ಕೇರಳ ಕ್ರಿಕೆಟ್ ಸಂಸ್ಥೆಯು ನನಗೆ ಮತ್ತೊಂದು ಅವಕಾಶ ನೀಡಿದೆ. ನಾನು ನನ್ನ ದೈಹಿಕ ಕ್ಷಮತೆಯನ್ನು ಸಾಬೀತುಪಡಿಸುತ್ತೇನೆ. ಅಲ್ಲದೆ ಮತ್ತೆ ಮೈದಾನಕ್ಕಿಳಿಯುತ್ತೇನೆ. ಎಲ್ಲಾ ಆರೋಪ, ವಿವಾದಗಳಿಗೆ ಈಗ ತೆರೆ ಎಳೆಯುವ ಸಮಯ ಅಂತ ಶ್ರೀಶಾಂತ್ ಹೇಳಿದ್ದಾರೆ.
ಕೇರಳ ಕ್ರಿಕೆಟ್ ಸಂಸ್ಥೆಯು ಶ್ರೀಶಾಂತ್ ಆಗಮನವನ್ನು ಸ್ವಾಗತಿಸುತ್ತದೆ. ಆದ್ರೆ ಅವರು ಫಿಟ್‍ನೆಸ್ ಪ್ರೂವ್ ಮಾಡಬೇಕಾಗುತ್ತದೆ. ಶ್ರೀಶಾಂತ್ ಒಬ್ಬ ಅನುಭವಿ ಬೌಲರ್. ಹಾಗಾಗಿ ಕೇರಳ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬಲಿದ್ದಾರೆ ಎಂದು ಕೇರಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸಾಜನ್ ಕೆ ವರ್ಗೀಸ್ ಹೇಳಿದ್ದಾರೆ. ಇತ್ತೀಚೆಗೆ ಕೇರಳ ರಣಜಿ ತಂಡಕ್ಕೆ ಟೀಮ್ ಇಂಡಿಯಾದ ಮಾಜಿ ಬೌಲರ್ ಟಿನೂ ಯೋಹಾನನ್ ಅವರು ಹೆಡ್ ಕೋಚ್ ಆಗಿ ನೇಮಕಗೊಳಿಸಲಾಗಿದೆ.
ಕೇರಳದ ಕೊಚ್ಚಿ ಮೂಲದ ಶ್ರೀಶಾಂತ್, 27 ಟೆಸ್ಟ್ ಪಂದ್ಯಗಳಲ್ಲಿ 87 ವಿಕೆಟ್‍ಗಳನ್ನು ಉರುಳಿಸಿದ್ದಾರೆ. ಹಾಗೇ 75 ಏಕದಿನ ಪಂದ್ಯಗಳಲ್ಲಿ ವಿಕೆಟ್ ಕಬಳಿಸಿದ್ದಾರೆ. 2007ರ ಟಿ-ಟ್ವೆಂಟಿ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲೂ ಶ್ರೀಶಾಂತ್ ಇದ್ರು. ಇನ್ನು ಶ್ರೀಶಾಂತ್ ಆಟದಷ್ಟೇ ವಿವಾದಕ್ಕೂ ಕಾರಣರಾಗಿದ್ದರು. ಮೈದಾನದಲ್ಲಿ ಅವರ ಆಕ್ರಮಣಕಾರಿ ಪ್ರವೃತ್ತಿಯನ್ನು ಹಿಡಿತದಲ್ಲಿಟ್ಟುಕೊಳ್ಳುವುದೇ ನಾಯಕನಿಗೆ ದೊಡ್ಡ ತಲೆನೋವಾಗಿತ್ತು. ಹಾಗೇ ಹರ್ಭಜನ್ ಸಿಂಗ್ ಜೊತೆ ಮಾತು ಬೆಳೆಸಿಕೊಂಡು ಕಪಾಳ ಮೋಕ್ಷ ಕೂಡ ಮಾಡಿಕೊಂಡಿದ್ದರು. ಆಸ್ಟ್ರೇಲಿಯಾ ಆಟಗಾರರ ವಿರುದ್ಧವಂತೂ ಜಗಳಕ್ಕೆ ಮುಗಿ ಬೀಳ್ತಾ ಇದ್ರು. ಈ ನಡುವೆ ರಾಜಕೀಯವಾಗಿಯೂ ಶ್ರೀಶಾಂತ್ ಗುರುತಿಸಿಕೊಂಡಿದ್ದರು. ತಿರುವನಂತಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶ್ರೀಶಾಂತ್, ಕಾಂಗ್ರೆಸ್‍ನ ವಿ.ಎಸ್. ಶಶಿ ತರೂರು ವಿರುದ್ಧ ಸೋಲು ಅನುಭವಿಸಿದ್ದರು.

Tags: bcciICCkerala ranaj teamspot fixingsreeshanthteam india
ShareTweetSendShare
Join us on:

Related Posts

ಸಚಿವ ಕೆ ಎಚ್ ಮುನಿಯಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕೆಂಗಣ್ಣು ಕೇಂದ್ರವನ್ನು ಓಲೈಸುವ ಬದಲು ಬಾಯಿ ಮುಚ್ಚಿಕೊಂಡಿರಿ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ

ಸಚಿವ ಕೆ ಎಚ್ ಮುನಿಯಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕೆಂಗಣ್ಣು ಕೇಂದ್ರವನ್ನು ಓಲೈಸುವ ಬದಲು ಬಾಯಿ ಮುಚ್ಚಿಕೊಂಡಿರಿ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ

by Shwetha
April 5, 2026
0

ಬೆಂಗಳೂರು: ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಹಾಗೂ ಆಟೋ ಗ್ಯಾಸ್ ಅಭಾವ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾಮಾನ್ಯ ಜನತೆ ಮತ್ತು ಆಟೋ ಚಾಲಕರು ಕಂಗಾಲಾಗಿದ್ದಾರೆ. ಈ ಗಂಭೀರ ವಿಚಾರ...

ಪಾಕಿಸ್ತಾನದಲ್ಲಿ ನಿಲ್ಲದ ಹಿಂದೂ ವಿರೋಧಿ ಕೃತ್ಯ: ಕರಾಚಿಯಲ್ಲಿ ಪುರಾತನ ದೇವಾಲಯದ ಮೇಲೆ ದಾಳಿ, ದೇವತಾ ಮೂರ್ತಿಗಳ ಭಗ್ನ

ಪಾಕಿಸ್ತಾನದಲ್ಲಿ ನಿಲ್ಲದ ಹಿಂದೂ ವಿರೋಧಿ ಕೃತ್ಯ: ಕರಾಚಿಯಲ್ಲಿ ಪುರಾತನ ದೇವಾಲಯದ ಮೇಲೆ ದಾಳಿ, ದೇವತಾ ಮೂರ್ತಿಗಳ ಭಗ್ನ

by Shwetha
April 5, 2026
0

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕೆಗಳ ಸರಣಿ ನಿರಂತರವಾಗಿ ಮುಂದುವರಿದಿದೆ. ನೆರೆರಾಷ್ಟ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಕಿಂಚಿತ್ತೂ ಬೆಲೆ ಇಲ್ಲದಂತಾಗಿದ್ದು, ಇದೀಗ ಸಿಂಧ್...

ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಭಿನ್ನಮತ ಸ್ಫೋಟ ರಾಹುಲ್ ಗಾಂಧಿ ನಿಲುವಿಗೆ ಹಿರಿಯ ನಾಯಕರ ವಿರೋಧ ಕೇಂದ್ರದ ಬೆನ್ನಿಗೆ ನಿಂತ ಕೈ ಪಡೆ

ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಭಿನ್ನಮತ ಸ್ಫೋಟ ರಾಹುಲ್ ಗಾಂಧಿ ನಿಲುವಿಗೆ ಹಿರಿಯ ನಾಯಕರ ವಿರೋಧ ಕೇಂದ್ರದ ಬೆನ್ನಿಗೆ ನಿಂತ ಕೈ ಪಡೆ

by Shwetha
April 5, 2026
0

ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಇದೀಗ ಮತ್ತೊಮ್ಮೆ ಜಗಜ್ಜಾಹೀರಾಗಿವೆ. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಹಾಗೂ ದೇಶಾವ್ಯಾಪಿ ಅಡುಗೆ ಅನಿಲ ಪೂರೈಕೆ ವಿಚಾರದಲ್ಲಿ...

ಭಾರತಕ್ಕೆ ಮತ್ತೊಂದು LPG ಟ್ಯಾಂಕರ್; ಒಟ್ಟು 8 ಹಡಗುಗಳಿಗೆ ಅನುಮತಿ

ಭಾರತಕ್ಕೆ ಮತ್ತೊಂದು LPG ಟ್ಯಾಂಕರ್; ಒಟ್ಟು 8 ಹಡಗುಗಳಿಗೆ ಅನುಮತಿ

by Shwetha
April 5, 2026
0

ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದರೂ, ಭಾರತಕ್ಕೆ ಕೆಲವು ಮಟ್ಟಿನ ರಿಲೀಫ್ ದೊರೆತಿದೆ. ‘ಗ್ರೀನ್ ಸಾನ್ವಿ’ ಎಂಬ ಮತ್ತೊಂದು LPG ಟ್ಯಾಂಕರ್ ಭಾರತದತ್ತ ಪ್ರಯಾಣ ಆರಂಭಿಸಿದ್ದು,...

ಗ್ಯಾಸ್‌ ಸಿಗದೆ ಆಟೋ ಚಾಲಕರ ಸಂಕಷ್ಟ; ಕೇಂದ್ರದ ವಿರುದ್ಧ ಡಿಕೆಶಿ ಕಿಡಿ

ಗ್ಯಾಸ್‌ ಸಿಗದೆ ಆಟೋ ಚಾಲಕರ ಸಂಕಷ್ಟ; ಕೇಂದ್ರದ ವಿರುದ್ಧ ಡಿಕೆಶಿ ಕಿಡಿ

by Shwetha
April 5, 2026
0

ಗ್ಯಾಸ್‌ ಕೊರತೆಯಿಂದಾಗಿ ಆಟೋ ಚಾಲಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram