ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯವು, ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕು, ಮಾರಣಕಟ್ಟೆ ಗ್ರಾಮದಲ್ಲಿದ್ದು, ಜಿಲ್ಲಾಡಳಿತ ಕೇಂದ್ರವಾದ ಉಡುಪಿಯಿಂದ ಸುಮಾರು 64 ಕಿ.ಮೀ ದೂರವಿರುತ್ತದೆ.
ಪುರಾಣ ಕಥೆಯ ಪ್ರಕಾರ ಶ್ರೀ ಕ್ಷೇತ್ರವು ಮೂಕಾಸುರನು ಶ್ರೀ ದೇವಿಯಿಂದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಸ್ಥಳವೇ ಮಾರಣಕಟ್ಟೆ. ಶ್ರೀ ದೇವಿಯು ಮೂಕಾಸುರನ ಅಚಲವಾದ ಭಕ್ತಿಗೆ ಮೆಚ್ಚಿ “ ನೀನು ಇಲ್ಲಿಯೇ ಮರಣ ಪಟ್ಟವನಾದ್ದರಿಂದ ಭೂತ ಗಣಗಳಿಗೆಲ್ಲ ಮಾರಣಕಟ್ಟೆ ಬ್ರಹ್ಮನೆಂದು ಪ್ರಸಿದ್ಧಿ ಉಳ್ಳವನಾಗು ಮತ್ತು ನಿನ್ನ ಪರಿವಾರದವರು ಕೂಡ ಮಾರಣಕಟ್ಟೆ ಗಣಗಳು ಎಂದು ಪ್ರಸಿದ್ಧರಾಗಲಿ, ನಿನ್ನ ಮರಣವಾದ ಸ್ಥಳವು ಎತ್ತರವಾಗಿಯೂ ಕಟ್ಟೆಯಂತೆ ಇರುವುದರಿಂದ ಮಾರಣಕಟ್ಟೆ ಎಂದು ಈ ಕಲಿಯುಗದಲ್ಲಿ ಪ್ರಸಿದ್ದಿಯಾಗಲಿ, ಮುಂದೆ ಈ ಕ್ಷೇತ್ರಕ್ಕೆ ಯತಿಯರೊಬ್ಬರ ಪ್ರವೇಶದಿಂದ ಪ್ರಸಿದ್ಧವಾಗುತ್ತೆಂದು” ಶ್ರೀ ದೇವಿಯು ಮೂಕ ದೈತ್ಯನನ್ನು ಕುರಿತು ಈ ಪ್ರಕಾರ ಅಜ್ಞೆ ಮಾಡಿದವಳಾಗಿ ನಿಸರ್ಗವಾದ ಮೂಕಾಸುರ ಇತ್ಯಾದಿ ವರ್ಗದ ಮುಂಭಾಗದಲ್ಲಿಯೇ ಶಿವನಿಂದ ಕೂಡಿದವಳಾಗಿ ಕೋಲಾಪುರದ ಸರ್ವಾತ್ಮ ಸ್ವರೂಪವಾದ ದಿವ್ಯ ಲಿಂಗದಲ್ಲಿ ಐಕ್ಯಳಾದಳು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಈ ಕ್ಷೇತ್ರದಲ್ಲಿ ಯಕ್ಷೇ, ಚಿಕ್ಕಮ್ಮ ದೇವರ ಮೊದಲಾದ ದೇವತೆಗಳ ಬಳಗವು ಕಂಡು ಬರುತ್ತದೆ. ಶ್ರೀ ಕ್ಷೇತ್ರವು ಧರ್ಮಸ್ಥಳದಂತೆ ವಾಕ್ಯ ಪ್ರಮಾಣದ ತೀರ್ಪು ಸಿಗುತ್ತದೆ. ಅದ್ದರಿಂದ ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿ ತೆಂಕಿನ ದೇವರದಂತೆ ಈ ಕ್ಷೇತ್ರವು ಬಡಗಿನ ದೇವರೆಂದು ಕರೆಯಲ್ಪಡುತ್ತದೆ. ಮಕರ ಸಂಕ್ರಾಂತಿಯ ಉತ್ಸವವು ಈ ದೇವಾಲಯದ ವಿಶೇಷ ಉತ್ಸವವಾಗಿರುತ್ತದೆ. ಇಲ್ಲಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಶ್ರೀ ಚಕ್ರ ಕಲ್ಲಿನ ಶಿಲೆಯ ಮೇಲೆ ರುದ್ರಾಭಿಷೇಕ ನಡೆಯುವುದು ವಿಶೇಷ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಶಿರದ ಮೇಲೆ ಸಿಂಗಾರದ ಹೂವು ಏರಿಸಿ ಮಹಾ ಮಂಗಳಾರತಿ ಮಾಡುವಾಗ ಬೀಳುವ ಪ್ರಸಾದವೇ ಶ್ರೀ ಕ್ಷೇತ್ರದ ಪ್ರಮುಖ ವಿಶೇಷತೆ. ಏಕೆಂದರೆ ಭಕ್ತಾಧಿಗಳು ಯಾವುದೇ ಹರಕೆ ಹೊತ್ತು ಈ ಸೇವೆಯನ್ನು ಮಾಡಿದಾಗ ಪ್ರಸಾದ ಶಿರದಿಂದ ಕೆಳಗೆ ಬಿದ್ದಲ್ಲಿ ಅತ ಎಣಿಸಿದ ಕೆಲಸವಾಗುತ್ತೆಂದು ಭಾವಿಸುತ್ತಾರೆ. ಉದಾ: ಮನೆ ಕಟ್ಟುವುದು, ಮದುವೆ ಸಂಬಂಧ ಏರ್ಪಾಡಿಸುವುದು, ಮಕ್ಕಳ ಬಗ್ಗೆ ಹರಕೆ ಹೊರುವುದು ಮತ್ತು ಭೂ ವಿವಾದ ಇತ್ಯರ್ಥ ಅಲ್ಲದೇ ರಂಗ ಪೂಜೆಯನ್ನು ಮಾಡಲು ಸಹ ಹರಕೆಯನ್ನು ಹೊರುತ್ತಾರೆ.
ಮಕರ ಸಂಕ್ರಾಂತಿಯಿಂದ ಕುಂಬ ಸಂಕ್ರಮಣ (ಕಿರುಜಾತ್ರೆ) ಒಂದು ತಿಂಗಳ ಕಾಲ ಈ ಕ್ಷೇತ್ರದಲ್ಲಿ ಜಾತ್ರೆಗೆ ಬರದೇ ಇರುವವರು ಈ ಸಮಯದಲ್ಲಿ ಒಂದು ಹೂವು ಒಪ್ಪಿಸಿ ಪೂಜೆ ಮಾಡಿಸುವುದು ಮತ್ತು ಇಲ್ಲಿಯ ಪ್ರಸಾದ ತೆಗೆದುಕೊಂಡು ಹೋಗಿ ಮನೆಯಲ್ಲಿ ಕೊಡುವುದು ವಿಶೇಷತೆ. ಸೌರಮಾನ ಯುಗಾದಿ ಮೇಷ ಸಂಕ್ರಮಣದ ಮರುದಿನ ಜರುಗುತ್ತದೆ. ದೀಪೋತ್ಸವವು ಕಾರ್ತಿಕ ಮಾಸ ಕೃಷ್ಣ ಚರ್ತುದರ್ಶಿಯಂದು ಜರುಗುತ್ತದೆ.
ಈ ಕ್ಷೇತ್ರದ ಮುಖ್ಯ ವಿಶೇಷವೆಂದರೆ ಪ್ರತಿ ವರ್ಷ ದೇವರ ಮರದ ವಿಗ್ರಹಗಳನ್ನು ಮಕರ ಸಂಕ್ರಮಣ ಉತ್ಸವಕ್ಕೆ ಎರಡು ವಾರ ಇರುವಾಗ ಕಲೆ ವಿಸರ್ಜನೆ ಮಾಡಿ ಸ್ಥಳ ಪದ್ದತಿಯಂತೆ ಗುಡಿಗಾರ ಕುಟುಂಬದವರಿಂದ ವಿಗ್ರಹಗಳಿಗೆ ಬಣ್ಣ ಲೇಪಿಸಿ ಮಕರ ಸಂಕ್ರಮಣದ ದಿನ ಸೂರ್ಯೋದಯಕ್ಕೆ ಮುಂಚೆ ಪುನರ್ ಪ್ರತಿಷ್ಠಾಪನೆ ಮಾಡಲಾಗುವುದು. ಇದು ಈ ದೇವಾಲಯದ ವಿಶೇಷವಾಗಿರುತ್ತದೆ.
ಬಾಗಿಲು ತೆರೆಯುವ ಸಮಯ
07:00 AM IST – 01:30 PM IST
04:00 PM IST – 08:00 PM IST
ಬಾಗಿಲು ಮುಚ್ಚುವ ಸಮಯ
01:30 APM IST – 04:00 PM IST
08:00 PM TO 08:00 PM
![{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"401636471009211","type":"ugc"}]}}](https://saakshatv.com/wp-content/uploads/2025/04/Picsart_25-04-16_15-06-39-077-750x500.jpg)







