ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ದಶಲಕ್ಷಣ ಪರ್ವದ ಸಮಾರೋಪದಲ್ಲಿ ವರೂರ ಜೈನಮಠದ ಶ್ರೀಧರ್ಮಸೇನ ಭಟ್ಟಾರಕರ ನುಡಿ

‘ಕ್ಷಮಾವಳಿಯಿಂದ ಜೀವನ ವಿಧಾನದಲ್ಲಿ ಸಾಮರಸ್ಯ’

Author2 by Author2
September 20, 2024
in Astrology, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಧಾರವಾಡ : ಜೈನ ಧರ್ಮ ಸಿದ್ಧಾಂತದ ಆಚರಣೆಗಳಲ್ಲಿ ಒಂದಾದ ದಶಲಕ್ಷಣ ಪರ್ವದ 10 ದಿನಗಳ ಅನುಷ್ಠಾನ ಮತ್ತು ಧರ್ಮ ಚಿಂತನೆಯ ಕೊನೆಯ ಘಟ್ಟವಾಗಿ ಆಚರಿಸುವ ಕ್ಷಮಾವಳಿಯಿಂದ ಮನುಕುಲದ ಬಿರುಕುಗೊಂಡ ಸಂಬಂಧಗಳು ಬೆಸೆದು ಜೀವನ ವಿಧಾನದಲ್ಲಿ ಸಾಮರಸ್ಯ ಅಂಕುರಿಸುತ್ತದೆ ಎಂದು ಅಮ್ಮಿನಬಾವಿ-ವರೂರು ಜೈನಮಠಗಳ ಯತಿಗಳಾದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ನುಡಿದರು.

ಅವರು ಬುಧವಾರ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀನೇಮಿನಾಥ ಜಿನಾಲಯದಲ್ಲಿ ಹಮ್ಮಿಕೊಂಡಿದ್ದ 10 ದಿನಗಳ ದಶಲಕ್ಷಣ ಮಹಾಪರ್ವದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮನಾತನಾಡುತ್ತಿದ್ದರು. ಕ್ಷಮಾವಳಿಯಿಂದಾಗಿ ಆತ್ಮದ ಸ್ಥಿತಿಯು ದ್ವೇಷ, ವೈರುಧ್ಯ, ಸಂಘರ್ಷದಂತಹ ಜನವಿರೋಧಿ ಮನೋಭಾವಗಳಿಂದ ಮುಕ್ತವಾಗಿ ಅದು ಜಿನಸನ್ನಿಧಾನವನ್ನು ಬಯಸುತ್ತದೆ ಎಂದರು.

Related posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

August 7, 2026
ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (07-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

August 7, 2026

ಜೈನ ಧರ್ಮದ ತತ್ವಾದರ್ಶಗಳ ಚಿಂತನೆಯು ಮೋಕ್ಷ ಮಾರ್ಗ ಕೇಂದ್ರೀಕೃತವಾಗಿದೆ. ದಶಲಕ್ಷಣ ಪರ್ವದ ಸಂದರ್ಭದಲ್ಲಿ ನಡೆಸುವ ವಿಶೇಷ ಪೂಜಾದಿಗಳ ಮೂಲಕ ಶ್ರಾವಕ-ಶ್ರಾವಕಿಯರು ಕ್ರಿಯೆ, ಮಾತು ಮತ್ತು ಮನಸ್ಸುಗಳಲ್ಲಿ ಮಾಡಿರುವ ತಪ್ಪುಗಳಿಗೆ ಪ್ರಾಯಶ್ಚಿತ್ತ ಭಾವತನ್ಮಯತೆಯಲ್ಲಿ ಕ್ಷಮಾವಳಿಗೆ ಒಳಗಾಗಬೇಕಾಗುತ್ತದೆ ಎಂದೂ ಶ್ರೀಧರ್ಮಸೇನ ಭಟ್ಟಾರಕರು ಹೇಳಿದರು.

‘ಕ್ಷಮಾವಳಿ’ಕುರಿತು ಉಪನ್ಯಾಸ ನೀಡಿದ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ, ಅಹಂಕಾರ ಮರೆತ ಮುಕ್ತ ಮನಸ್ಥಿತಿಯ ಕ್ಷಮಾವಳಿ ಫಲ ನೀಡುತ್ತದೆ. ಕ್ಷಮಾವಳಿ ಮತ್ತು ಅಹಿಂಸೆ ಒಟ್ಟೊಟ್ಟಿಗೇ ಇರುವುದರಿಂದ ಮಾಡಿರುವ ಪ್ರಮಾದಗಳು ಹಿಂಸೆಗೆ ಕಾರಣವಾಗದಂತೆ ತಪ್ಪೊಪ್ಪಿಕೊಂಡು ಮುಕ್ತವಾಗಿ ಕ್ಷಮೆಯಾಚನೆ ಮಾಡುವುದೇ ಕ್ಷಮಾವಳಿಯ ಬಹುಮುಖ್ಯ ಆಶಯವಾಗಿದೆ ಎಂದರು.

ತಾ.ಪಂ. ಮಾಜಿ ಸದಸ್ಯ ಸುರೇಂದ್ರ ದೇಸಾಯಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಸ್.ಪತ್ರಾವಳಿ, ದೀಪಕ ದೇಸಾಯಿ ಮಾತನಾಡಿದರು. ಜೈನ್ ಸಮಾಜದ ಮುಖಂಡ ಭುಜಬಲಿ ದೇಸಾಯಿ, ಶಂಕರ ರಾಘೂನವರ, ಈಶ್ವರ ಗಡೇಕಾರ, ನೇಮಣ್ಣ ಧಾರವಾಡ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸನ್ಮಾನ : ಪಮ್ಮಣ್ಣ ಧಾರವಾಡ, ಮಹಾವೀರ ಅಣ್ಣಿಗೇರಿ, ವಿದ್ಯಾರ್ಥಿಗಳಾದ ಅನುಷಾ ಕಿತ್ತೂರ ಹಾಗೂ ಸಮ್ಯಕ್ತಾ ಅಣ್ಣಿಗೇರಿ, ನಿತ್ಯವೂ ಪ್ರಸಾದ ಸಿದ್ಧಪಡಿಸಿದ ಸದಾನಂದ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ, ತ್ರಿಶಲಾಮಾತಾ ಮಹಿಳಾ ಮಂಡಳದ ಅಧ್ಯಕ್ಷೆ ಶಶಿಕಲಾ ದೇಸಾಯಿ, ಭೀಮಶಿ ಜಗಾಪೂರ, ಸಮ್ಮೇದ್ ಲೋಕೂರ, ಮಂಜುನಾಥ ಗುಡ್ಡದಮನಿ, ಬಾಳು ಧಾರವಾಡ, ಪ್ರಸನ್ನ ದೇಸಾಯಿ, ಭರತೇಶ ದೇಸಾಯಿ, ತವನಪ್ಪ ಲೋಕೂರ ನೇಮಿಚಂದ್ರ ನವಲೂರ ಇದ್ದರು.

ಅರ್ಚನಾ ಮೋರೆ ಸ್ವಾತಿಸಿದರು. ಅರುಣ ನವಲೂರ ನಿರೂಪಿಸಿದರು. ಬೀನಾ ದೇಸಾಯಿ ಹಾಗೂ ಲಲಿತಾ ದೇಸಾಯಿ ಭಕ್ತಿಗೀತೆ ಪ್ರಸ್ತುತಪಡಿಸಿದರು. ಶ್ರಾವಕಿಯರು ನೋಂಪಿ ಆಚರಿಸಿದರು. ಜಿನಾಲಯದಲ್ಲಿ ನಿತ್ಯವೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

—————————————-

ಫೋಟೋ ವಿವರ :

ಧಾರವಾಡ ತಾಲೂಕು ಅಮ್ಮಿನಬಾವಿ ಜಿನಾಲಯದಲ್ಲಿ ಜರುಗಿದ ದಶಲಕ್ಷಣ ಮಹಾಪರ್ವದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ವರೂರು ಜೈನಮಠದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಪಿ.ಎಸ್.ಪತ್ರಾವಳಿ, ಗುರುಮೂರ್ತಿ ಯರಗಂಬಳಿಮಠ, ಸುರೇಂದ್ರ ದೇಸಾಯಿ, ಭುಜಬಲಿ ದೇಸಾಯಿ, ಶಂಕರ ರಾಘೂನವರ ಹಾಗೂ ಶಶಿಕಲಾ ದೇಸಾಯಿ ಇದ್ದರು.

Tags: #astrology
ShareTweetSendShare
Join us on:

Related Posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

by admin
August 7, 2026
0

    ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು...

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (07-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 7, 2026
0

ದಿನ ಭವಿಷ್ಯ: 07-08-2026 1. ಮೇಷ ರಾಶಿ ಉದ್ಯೋಗ ಮತ್ತು ಆರ್ಥಿಕತೆ: ಕೆಲಸದ ಸ್ಥಳದಲ್ಲಿ ನಿಮ್ಮ ನಾಯಕತ್ವ ಗುಣಗಳಿಗೆ ಪ್ರಶಂಸೆ ಸಿಗಲಿದೆ. ವ್ಯಾಪಾರದಲ್ಲಿ ಹೊಸ ಹೂಡಿಕೆಗಳಿಗೆ ಇದು...

devara-maneyalli-deeparadhane-yene-yene-phala

ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?

by admin
August 6, 2026
0

1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ.. ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ .....

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (06-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 6, 2026
0

ದಿನ ಭವಿಷ್ಯ: 06-08-2026 ಮೇಷ ರಾಶಿ ಇಂದು ನಿಮ್ಮಲ್ಲಿ ಹೊಸ ಉತ್ಸಾಹ ಮತ್ತು ಚೈತನ್ಯ ತುಂಬಿರುತ್ತದೆ. ಉದ್ಯೋಗದಲ್ಲಿರುವವರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ನೀವು ಕೈಗೊಳ್ಳುವ ಯಾವುದೇ ಹೊಸ...

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (05-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 5, 2026
0

ದಿನ ಭವಿಷ್ಯ: 05-08-2026 1. ಮೇಷ ರಾಶಿ ವೃತ್ತಿ ಮತ್ತು ಹಣಕಾಸು: ಕಾರ್ಯಕ್ಷೇತ್ರದಲ್ಲಿ ನಿಮ್ಮ ಉತ್ಸಾಹ ಹೆಚ್ಚಾಗಿರುತ್ತದೆ. ನಿಮ್ಮ ತಾರ್ಕಿಕ ಆಲೋಚನೆಗಳಿಂದ ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ. ವ್ಯಾಪಾರಸ್ಥರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram