ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಅಕ್ಟೋಬರ್ 20ರಂದು ಶ್ರೀ ಲಲಿತಾ ಪಂಚಮಿ ಮಹೋತ್ಸವ ಮತ್ತು ಶ್ರೀ ಚಂಡಿಕಾ ಯಾಗ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ.. ದಕ್ಷಿಣದ ಗಾಣಪುರ ಎಂದೇ ಖ್ಯಾತಿ ಪಡೆದಿದೆ. ಸಾಮರಸ್ಯದ ಬೀಡಾಗಿರುವ ಒಡಿಯೂರು ಶ್ರೀ ಗುರದೇವದತ್ತ ಸಂಸ್ಥಾನ ಹಲವು ಸಾಮಾಜಿಕ ಕಾರ್ಯಗಳ ಮೂಲಕವೂ ಗಮನ ಸೆಳೆಯುತ್ತಿದೆ.
ಸಂಸ್ಥಾನದ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹಲವಾರು ಧಾರ್ಮಿಕ, ಸಾಂಸ್ಕøತಿಕ ಕಾರ್ಯಗಳ ಮೂಲಕ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಅಲ್ಲದೆ ಜಾತಿ ಧರ್ಮ ಮರೆತು ಎಲ್ಲರ ಧರ್ಮದವರ ಕಷ್ಟಗಳಿಗೂ ಸ್ಪಂದಿಸುತ್ತಾರೆ. ಜೊತೆಗೆ ಪರಿಹಾರವನ್ನು ನೀಡುತ್ತಾರೆ. ಹೀಗಾಗಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಕ್ಕೆ ದಿನ ನಿತ್ಯ ನೂರಾರು ಭಕ್ತಾಧಿಗಳು ಆಗಮಿಸುತ್ತಿದ್ದಾರೆ.
ಇದೀಗ ಅಕ್ಟೋಬರ್ 20ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಪರಮ ಪೂಜ್ಯ ಗುರುದೇವಾನಂದ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ
ಶ್ರೀ ಲಲಿತಾ ಪಂಚಮಿ ಮಹೋತ್ಸವ ಮತ್ತು ಶ್ರೀ ಚಂಡಿಕಾ ಯಾಗ ನಡೆಯಲಿದೆ. ಬೆಳಗ್ಗೆ ಮಂಗಳಾರತಿಯ ನಂತರ ನಾಗದೇವರಿಗೆ ತಂಬಿಲದ ಬಳಿಕ 9.30ಕ್ಕೆ ಶ್ರೀ ಚಂಡಿಕಾ ಯಾಗ ಆರಂಭವಾಗಲಿದೆ.
ಮಧ್ಯಾಹ್ನ 12ಗಂಟೆಗೆ ಯಾಗದ ಪೂರ್ಣಾಹುತಿ, ಮಹಾ ಮಂಗಳಾರತಿ ಮತ್ತು ಆರಾಧ್ಯ ದೇವರಿಗೆ ಮಹಾಪೂಜೆ ನಡೆಯಲಿದೆ.
ಮಧ್ಯಾಹ್ನ 2.30ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಂಗಳೂರಿನ ಮನೋಹರ್ ಕುಮಾರ್ ಯಕ್ಷ ಬಳಗದಿಂದ ಶಾಂಭವಿ ವಿಜಯ ತುಳು ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ ಅಷ್ಟಾವಧಾನ ಸೇವೆ ಮತ್ತು ಮಹಾಪೂಜೆ ನೆರೆವೆರೆಲಿದೆ.
ಇನ್ನು ಅಕ್ಟೋಬರ್ 24ರಂದು ಶ್ರೀ ಶಾರದಾ ಪೂಜೆ, ಮಧ್ಯಾಹ್ನ ಶ್ರೀ ಸರಸ್ವತಿ ಹವನ ಮತ್ತು ಆಯುಧ ಪೂಜೆ, ವಾಹನ ಪೂಜೆ ಜರಗಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿಯ ನಿಯಮಗಳನ್ನು ಪಾಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿದೆ.
ಶ್ರೀ ಸಂಸ್ಥಾನದ ಆರಾಧನ ಮೂರ್ತಿ ದತ್ತಾಂಜನೆಯ. ಗುರುದೇವದತ್ತನು ಇಲ್ಲಿನ ಆರಾಧ್ಯ ದೇವನಾದ್ರೆ, ಆಂಜನೇಯ ಸ್ವಾಮಿ ಮತ್ತು ಶ್ರೀ ವಜ್ರಮಾತಾ ದೇವಿಯು ಇಲ್ಲಿನ ಪ್ರಧಾನ ಆರಾಧ್ಯ ದೇವರಾಗಿದ್ದಾರೆ.
ಇದು ಕೇವಲ ದತ್ತಾಂಜನೇಯ ದೇವಾಲಯ ಮಾತ್ರವಲ್ಲ. ಸಾಂಸ್ಕøತಿಕ ಕೇಂದ್ರವಾಗಿ, ಜ್ಞಾನದ ದೇಗುಲವಾಗಿದೆ. ಗುರು ತತ್ವದ ಪ್ರಚಾರದ ದತ್ತ ಪೀಠವಾಗಿ, ನೊಂದು ಬೆಂದವರ ಶಾಂತಿಯ ಧಾಮವಾಗಿದೆ.
ಕಲೆ ಸಾಹಿತ್ಯ, ಸಂಸ್ಕøತಿಯ ಆರಾಧನೆಯ ಕೇಂದ್ರವಾಗಿ ಬೆಳೆಯುತ್ತಿದೆ.
ಇನ್ನು ಸಂಸ್ಥಾನದ ಗುರು ಶ್ರೀ ಗುರುದೇವಾನಂದ ಸ್ವಾಮಿಜಿಯವರು ಗುರುವಾರ ಶನಿವಾರ ಮತ್ತು ಭಾನುವಾರ ಭಕ್ತರನ್ನು ಭೇಟಿ ಮಾಡುತ್ತಾರೆ. ಬದುಕಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ.








