ADVERTISEMENT
Wednesday, April 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ರೇವಣ ಸಿದ್ದೇಶ್ವರಸ್ವಾಮಿ ದೇವಸ್ಥಾನ, ಕೈಲಾಂಚ, ರಾಮನಗರ ಇತಿಹಾಸ ಮತ್ತು ಮಹಿಮೆ

Sri Revana Siddeshwaraswamy Temple, Kailancha, Ramanagar History and Glory

Shwetha by Shwetha
April 16, 2025
in ಮಾರ್ಜಲ ಮಂಥನ, Marjala Manthana, Newsbeat
{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"401636471009211","type":"ugc"}]}}

{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"401636471009211","type":"ugc"}]}}

Share on FacebookShare on TwitterShare on WhatsappShare on Telegram

ರಾಮನಗರ ಜಿಲ್ಲೆಯ ಕೈಲಾಂಚ ಹೋಬಳಿಯ ಅವೇರಹಳ್ಳಿಯಲ್ಲಿ ನೆಲೆಸಿರುವ ಶ್ರೀ ರೇವಣ ಸಿದ್ದೇಶ್ವರಸ್ವಾಮಿ ದೇವಾಲಯವು ಒಂದು ಪ್ರಮುಖ ಶೈವ ಕ್ಷೇತ್ರವಾಗಿದೆ. ಈ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 3066 ಅಡಿ ಎತ್ತರದಲ್ಲಿರುವ ಏಕಶಿಲಾ ಬೆಟ್ಟದ ಮೇಲೆ ನೆಲೆಗೊಂಡಿದೆ. ಈ ಬೆಟ್ಟವನ್ನು ಸಾಮಾನ್ಯವಾಗಿ ಎಸ್.ಆರ್.ಎಸ್ ಬೆಟ್ಟ ಎಂದೂ ಕರೆಯುತ್ತಾರೆ.

ಕಲಿಯುಗದ ಆದಿಭಾಗದಲ್ಲಿ ತೆಲಂಗಾಣ ಪ್ರದೇಶದ ಕೊಲನುವಾಕ ಎಂಬ ಊರಿನಲ್ಲಿ ಶ್ರೀ ಸೋಮೇಶ್ವರ ಲಿಂಗದಿಂದ ಉದ್ಭವಿಸುವ ಶ್ರೀ ರೇವಣಸಿದ್ದರು 700 ವರ್ಷಗಳ ಕಾಲ ಲೋಕ ಸಂಚಾರ ಮುಗಿದ ಮೇಲೆ ಮತ್ತೆ 700 ವರ್ಷಗಳ ಕಾಲ ತಪ್ಪಸ್ಸು ಮಾಡಿದ ಕ್ಷೇತ್ರವೇ ಶ್ರೀ ರೇವಣಸಿದ್ದೇಶ್ವರಸ್ವಾಮಿ ಬೆಟ್ಟ ಈ ಸಂಬಂಧವಾಗಿ ಯಾವುದೇ ಶಾಸನಗಳು ಇರುವುದಿಲ್ಲ ಇದು ಹಿಂದಿನಿಂದಲೂ ಅರ್ಚಕರು ಮತ್ತು ಭಕ್ತರಿಂದ ಒಬ್ಬರಿಂದ ಒಬ್ಬರಿಗೆ ಹೇಳಿಕೊಂಡು ಬರುತ್ತಿರುವ ಪ್ರತೀತಿಯಾಗಿದೆ. ಈ ಸಂಬಂಧವಾಗಿ ಕೆಲವು ವಿಚಾರಗಳು ಶ್ರೀ ರೇಣುಕ ವಿಜಯ ಪುಸ್ತಕದಲ್ಲಿ ಕಂಡುಬರುತ್ತದೆ.

Related posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

April 15, 2026
ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

April 15, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಮುಂದುವರೆದು ಒಬ್ಬ ಬೇಟೆಗಾರ ಬೇಟೆಯನ್ನು ಅರಸುತ್ತಾ, ಶ್ರೀ ರೇವಣಸಿದ್ದೇಶ್ವರ ಬೆಟ್ಟದ ಬಳಿ ಬಂದಿರಲು ಒಂದು ಉಡವನ್ನು ಕಂಡನು (ಬೆಟ್ಟ ಹತ್ತುವ ಒಂದು ಪ್ರಾಣಿ) ಅದು ಬೆಟ್ಟದ ಶಿಖರವನ್ನೇರಲು ತೊಡಗಿತು ಆಗ ಬೇಟೆಗಾರನ್ನು ಬೆಟ್ಟದಿಂದ ಕೆಳಗೆ ಇಳಿದಿದ್ದ ಬಳ್ಳಿಯ ನೆರವಿನಿಂದ ಬೆಟ್ಟದ ತುದಿಯನ್ನೇರಿದನು, ಅಷ್ಟರಲ್ಲಿ ಶ್ರೀ ರೇವಣಸಿದ್ದರು ತಪಸ್ಸು ಮಾಡುತ್ತಿರುವ ಗವಿಯೊಳಗೆ ಹೊಕ್ಕು ಕತ್ತಲಿನಲ್ಲಿ ಮರೆಯಾಯಿತು. ಅದನ್ನು ಕಂಡ ಬೇಟೆಗಾರ ಕತ್ತಲಲ್ಲೇ ಉಡವನ್ನು ಹುಡುಕ ತೊಡಗಿದನು, ಆಗ ಆತನ ಕೈಗೆ ಒಂದು ಮೃದುವಾದ ಕಲ್ಲಿನ ಪೀಠವು ಸೋಕಿತು, ಆ ಮಹಾತ್ಮರ ಪಾದವನ್ನು ಬಿಗಿಯಾಗಿ ಹಿಡಿದುಕೊಂಡಿದ್ದ ಉಡವನ್ನು ಪಾದದಿಂದ ಕೀಳಲು ಪ್ರಯತ್ನಿಸಿದಾಗ ಶ್ರೀ ರೇವಣಸಿದ್ದರ ಶರೀರವು ಅಲುಗಾಡಿತು, ಆಗ ಹಲವಾರು ವರ್ಷಗಳ ಕಾಲ ಮುಚ್ಚಿದ ತಮ್ಮ ದಿವ್ಯ ನೇತ್ರಗಳನ್ನು ತೆರೆದರು ಆಗ ಬೇಟೆಗಾರ ಭಯಭೀತನಾಗಿ ಕರ ಜೋಡಿಸಿ ನಿಂತನು. ಆತನನ್ನು ಹತ್ತಿರಕ್ಕೆ ಕರೆದು ಆತನಿಗೆ ಮರ್ಮ ಉಪದೇಶವನ್ನು ಮಾಡಿ ಬಡವನಾದ ಅವನಿಗೆ ಅಪಾರ ಸಿರಿ ಸಂಪತ್ತುಗಳನ್ನು ಲಭಿಸುವಂತೆ ಆಶೀರ್ವದಿಸಿ ತಾವು ತಪಸ್ಸು ಮಾಡುವ ವಿಚಾರವನ್ನು ಯಾರಿಗೂ ತಿಳಿಸಬಾರದೆಂತಲೂ ಅದರಿಂದ ಏಕಾಂತಕ್ಕೆ ಭಂಗಬರುವುದೆಂತಲೂ ಒಂದು ವೇಳೆ ಯಾರಿಗಾದರು ತಿಳಿಸಿದಲ್ಲಿ ಕೆಡುಕಾವುದೆಂದು ಎಚ್ಚರಿಸಿ ಕಳುಹಿಸಿದರು ನಂತರದಲ್ಲಿ ಈ ಬೇಟೆಗಾರ ಅತ್ಯಂತ ಸಿರಿವಂತನಾಗಿ ಮೆರೆಯುತ್ತಿರುವ ರಹಸ್ಯವನ್ನು ತಿಳಿಯುವ ಸಲುವಾಗಿ ತೆಂಗಿನಕಲ್ಲು ಈ ಪ್ರಾಂತ್ಯವನ್ನು ಅಳುತ್ತಿದ್ದ ತೆಂಗಿನ ಕಲ್ಲು ಬೆಟ್ಟದ ಪಾಳೇಗಾರನಾದ ಚಾಮರಸನು ಬೇಟೆಗಾರನ ಪತ್ನಿಯನ್ನು ಅರಮನೆಗೆ ಕರೆಯಿಸಿ ನಿಮಗೆ ಬಂದ ಸಿರಿಯ ರಹಸ್ಯವನ್ನು ತಿಳಿಸಲು ಅಜ್ಞೆ ಮಾಡಿದನು ಇಲ್ಲದಿದ್ದಲ್ಲಿ ದಂಪತಿಗಳಿಬ್ಬರನ್ನು ಶಿರಶ್ಚೇದನ ಮಾಡುವುದಾಗಿ ಎಚ್ಚರಿಸಿ ಕಳುಹಿಸಿದನು. ಆಗ ವಿಧಿ ಇಲ್ಲದೇ ಆ ರಾಜನಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದ ಕ್ಷಣದಲ್ಲೇ ಆ ಬೇಟೆಗಾರನು ಅಪಾರವಾದ ಶಿರೋವೇದನೆಯಿಂದ ಮರಣ ಹೊಂದಿದನು ಆಗ ರಾಜನು ಶ್ರೀ ರೇವಣರನ್ನು ಕಾಣಲು ಫಲ ಪುಷ್ಪಗಳೊಂದಿಗೆ ಬೆಟ್ಟವನ್ನೇರಿ ಗುಹೆಯೊಳಗೆ ಹೋಗಿ ನಾನಾ ವಿಧವಾಗಿ ಪೂಜಿಸ ತೊಡಗಿದನು. ಇದರಿಂದ ತೃಪ್ತರಾದ ರೇವಣಸಿದ್ದರು ಕಣ್ಣು ತರೆದು ಆ ರಾಜನಿಗೆ ಧರ್ಮದಿಂದ ಕೀರ್ತಿವಂತನಾಗಿ ರಾಜ್ಯ ಅಳುವಂತೆ ಹರಸಿ ಪ್ರತಿ ವರ್ಷವು ವ್ಯಾಸ ಪೌರ್ಣಮಿಯ ದಿವಸದಂದು ನೀನು ನಿನ್ನ ವಂಶದವರು ಈ ಕ್ಷೇತ್ರದಲ್ಲಿ ಪೂಜೆಯನ್ನು ಉತ್ಸವಾದಿಗಳನ್ನು ನಡೆಸುವಂತೆ ಹಾಗೂ ಯಾವುದೇ ಉತ್ಸವವನ್ನು ಆರಂಭಿಸುವ ಮುನ್ನ ಬೆಟ್ಟದ ತಪ್ಪಲಿನಲ್ಲಿ ನೆಲೆಗೊಂಡಿರುವ ತನ್ನ ತಂಗಿ ರೇಣುಕಮ್ಮನವರಿಗೆ ಮೊದಲು ಪೂಜೆ ಸಲ್ಲಿಸಿ ನಂತರ ಉತ್ಸವವನ್ನು ನಡೆಸಲು ಅಜ್ಞಾಪಿಸಿದರು. ಅಂದಿನಿಂದ ಶ್ರೀ ರೇವಣಸಿದ್ದೇಶ್ವರಸ್ವಾಮಿ ದೇವಾಲಯವಾಗಿ ಪ್ರಸಿದ್ಧಿ ಹೊಂದಿರುತ್ತದೆ.

ಶ್ರೀ ದೇವಾಲಯವು ಬೆಟ್ಟದ ಒಂದು ಎತ್ತರವಾದ ಕಲ್ಲುಗಳ ಬಂಡೆಯ ಮೇಲೆ ಸುಮಾರು 328 ಅಡಿಗಳಷ್ಟು ಎತ್ತರದಲ್ಲಿದ್ದು, 1100 ಮೆಟ್ಟಿಲುಗಳಿಂದ ಕೂಡಿರುತ್ತದೆ. ಬೆಟ್ಟದ ಮಧ್ಯಭಾಗದಲ್ಲಿ ಶ್ರೀ ಭೀಮೇಶ್ವರಸ್ವಾಮಿ ಮತ್ತ ಶ್ರೀ ಮರುಳು ಸಿದ್ದೇಶ್ವರಸ್ವಾಮಿ ಸನ್ನಿಧಿಗಳು ಇರುತ್ತವೆ.

ದ್ವಾಪರಯುಗದ ಪಾಂಡವರ ಅಜ್ಞಾತವಾಸ ಕಾಲದಲ್ಲಿ ಒಂದು ದಿವಸ ಬೆಟ್ಟದ ಮಧ್ಯಭಾಗದ ಗುಹೆಯಲ್ಲಿ ವಾಸವಿರಲು ಪ್ರಕೃತಿ ಗುಹೆಯನ್ನು ನೋಡಿ ಗುಹೆಯಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಲು ಪಾಂಡವರು ಮನಸ್ಸು ಮಾಡಿ ಭೀಮಸೇನನನ್ನು ಕಾಶಿಗೆ ಕಳುಹಿಸಲು ಮುರ್ಹೂತ ಹತ್ತಿರ ಬರಲು ಭೀಮನು ಲಿಂಗವನ್ನು ತಂದಿರುವುದಿಲ್ಲ.

ಹಿರಿಯರಾದ ಧರ್ಮರಾಯರು ಮರಳಿನಲ್ಲಿ ಒಂದು ಲಿಂಗವನ್ನು ಮಾಡಿ ಪೂಜೆ ಮಾಡುತ್ತಿರಲು, ಭೀಮನು ಕಾಶಿಯಿಂದ ಶಿವಲಿಂಗವನ್ನು ತಂದು ನಾನು ತಂದ ಲಿಂಗಕ್ಕೆ ಮೊದಲ ಪೂಜೆ ಆಗಲಿಲ್ಲವೆಂದು ಕೋಪಿಸಿಕೊಳ್ಳಲು, ಪಾಂಡವರೆಲ್ಲರೂ ಭೀಮನನ್ನು ಸಮಾಧಾನ ಮಾಡಿ ಇನ್ನೂ ಮುಂದೆ ಏನೇ ನೈವೇದ್ಯ ಹಾಗೂ ಮೊದಲ ಪೂಜೆಗಳು ನೀನು ತಂದ ಲಿಂಗಕ್ಕೆ ಆಗಲಿ ಎಂದು ಭೀಮ ತಂದ ಲಿಂಗವನ್ನು ಪ್ರತಿಷ್ಠಾಪಿಸಲು, ಆಗ ಭೀಮಸೇನನ್ನು ಸಮಾಧಾನವಾಗಿ, ಅಲ್ಲಿಂದ ಇಲ್ಲಿಯವರೆಗೆ ಮೊದಲ ಪೂಜೆ ಶ್ರೀ ಭೀಮೇಶ್ವರ ಸ್ವಾಮಿ ಸಲ್ಲುತ್ತಿರುತ್ತದೆ. ಇದು ಶ್ರೀ ಭೀಮೇಶ್ವರಸ್ವಾಮಿ ದೇವಾಲಯವೆಂದು ಪ್ರಸಿದ್ಧಿಯಾಗಿರುತ್ತದೆ.

ಈ ಬೆಟ್ಟದ ಕೆಳಭಾಗದಲ್ಲಿ ಶ್ರೀ ರೇಣುಕಾಂಭೆಯ ಸನ್ನಿಧಿ ಇರುತ್ತದೆ. ಈ ಅಮ್ಮನವರು ಶ್ರೀ ರೇವಣಸಿದ್ದರ ವರಪುತ್ರಿ ಎಂಬುದು ಇಲ್ಲಿನ ಪ್ರತೀತಿ ಶ್ರೀ ರೇವಣಸಿದ್ದೇಶ್ವರರು ಲೋಕ ಸಂಚಾರ ಮಾಡುವಾಗ ಮಾಯದೇವಿ ಎಂಬ ಶಿವಭಕ್ತೆಗೆ ಮಕ್ಕಳು ಇರುವುದಿಲ್ಲ. ಶ್ರೀ ರೇವಣಸಿದ್ದರ ವರದಿಂದ ಶ್ರೀ ರೇಣುಕಾಂಭ ಹುಟ್ಟಿರುತ್ತಾಳೆ. ಅದಕ್ಕೆ ಶ್ರೀ ರೇಣುಕಾಂಭ ಎಂಬ ಹೆಸರು ಇಟ್ಟಿರುತ್ತಾರೆ. ಶ್ರೀ ರೇವಣಸಿದ್ದರು ತಪಸ್ಸಿಗೆ ಅನುಕೂಲವಾದ ಜಾಗವನ್ನು ಹುಡುಕಿಕೊಂಡು ಬಂದಾಗ ರೇಣುಕಾಂಭೆಯು ಅವರನ್ನು ಹಿತಬಾರಿಸಲು, ಆಗ ಸ್ವಾಮಿಯು ಬೆಟ್ಟದ ತಪ್ಪಲಿನಲ್ಲಿ ಕುಳಿತುಕೊಳ್ಳಲು ಹೇಳಿ ತಾನು ತಪಸ್ಸಿಗೆ ಅನುಕೂಲವಾದ ಜಾಗವನ್ನು ಹುಡುಕಿಕೊಂಡು ಬರುವೆನೆಂದು ಹೇಳಲು ಶ್ರೀ ರೇಣುಕಾಂಭ ತಾಯಿಯು ಅಲ್ಲೇ ಶಿಲೆಯಾಗಿ ಬೆಟ್ಟದ ಎದುರು ನೋಡುತ್ತಾ ಈಗಲು ಸಹ ರೇವಣಸಿದ್ದರು ಬರುವುದನ್ನು ಎದುರು ನೋಡುತ್ತಾ ಇರಲು ಶ್ರೀ ರೇಣುಕಾಂಭ ತಾಯಿಯು ಪ್ರಸಿದ್ಧಿ ಹೊಂದಿರುತ್ತಾರೆ.

ಈ ದೇವಾಲಯದಲ್ಲಿ ಭಕ್ತಾಧಿಗಳ ಹರಕೆಯಂತೆ ಅವರ ಇಷ್ಟಾರ್ಥಗಳು ಮತ್ತು ದೋಷಗಳು ಪರಿಹಾರವಾಗಿರುತ್ತದೆ. ದೇವಾಲಯದಲ್ಲಿ ವಿಶೇಷತೆಯ ಬಗ್ಗೆ ಸಾಂಪ್ರದಾಯವಾದ ಪದ್ಧತಿ (ಮೊರೆಸೇವೆ) ಕಲ್ಯಾಣಿಯಿಂದ ನೀರನ್ನು ತಂದು ಪ್ರೋಕ್ಷಿಸುವುದರಿಂದ ಪರಿಹಾರವಾಗುತ್ತದೆ. ಮೊರೆಸೇವೆ ಸ್ನಾನದಿಂದ ಸಂತಾನ ಪ್ರಾಪ್ತಿಗಿರುವ ದೋಷ ಪರಿಹಾರವಾಗುತ್ತದೆ. ತೆಂಗಿನಕಾಯಿಂದ ಮತ್ತು ಯಂತ್ರ, ತಾಯಿತಗಳಿಂದ ದೊಷಗಳು ಪರಿಹಾರವಾಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿರುತ್ತದೆ. ಇದರಿಂದಲೇ ಪ್ರಸಿದ್ದಿ ಹೊಂದಿರುತ್ತದೆ.

ಬಾಗಿಲು ತೆರೆಯುವ ಸಮಯ
10:00 AM IST – 12:00 PM IST
02:00 AM IST – 02:30 AM IST

ಬಾಗಿಲು ಮುಚ್ಚುವ ಸಮಯ
04:00 AM IST – 04:30 AM IST

ಇತರೆ ಮಾಹಿತಿ:
* ರಾಮನಗರದಿಂದ ಕನಕಪುರಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 15 ಕಿ.ಮೀ ದೂರದಲ್ಲಿ ಈ ಬೆಟ್ಟವಿದೆ.
* ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ.
* ಬೆಟ್ಟದ ಪಕ್ಕದಲ್ಲಿ ದೊಡ್ಡದಾದ ದೇವರಕೆರೆ ಎಂಬ ಸುಂದರವಾದ ಕೆರೆಯಿದೆ.
* ಈ ಬೆಟ್ಟವು ಚಾರಣಿಗರು ಮತ್ತು ಬಂಡೆ ಹತ್ತುವವರಿಗೆ ಒಂದು ಜನಪ್ರಿಯ ತಾಣವಾಗಿದೆ.

ಹೀಗೆ ಶ್ರೀ ರೇವಣ ಸಿದ್ದೇಶ್ವರಸ್ವಾಮಿ ದೇವಾಲಯವು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದ್ದು, ಅನೇಕ ಭಕ್ತರನ್ನು ಆಕರ್ಷಿಸುತ್ತಿದೆ.

ShareTweetSendShare
Join us on:

Related Posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

by Shwetha
April 15, 2026
0

ಹಾರ್ಮುಜ್ ಜಲಸಂಧಿಯನ್ನು ಹಿಡಿತದಲ್ಲಿಡುವ ವಿಚಾರದಲ್ಲಿ ಅಮೆರಿಕ & ಇರಾನ್ ನಡುವಿನ ಉದ್ವಿಗ್ನತೆ ತಾರಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಪ್ರದೇಶದ ಪ್ರಮುಖ ಬಂದರುಗಳಿಗೆ ದಿಗ್ಬಂಧನ (Blockade)...

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

by Shwetha
April 15, 2026
0

ಸಂವಿಧಾನ ಶಿಲ್ಪಿ B. R. ಅಂಬೇಡ್ಕರ್ ಅವರ ಆದರ್ಶಗಳು ಯಾವ ಕಾಲಕ್ಕೂ ಪ್ರಸ್ತುತವಾಗಿಯೇ ಇರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ...

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

by Shwetha
April 15, 2026
0

ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಪ್ರಕ್ರಿಯೆಯ ವೇಳೆ ನಡೆದಿದ್ದ ಆಂತರಿಕ ಬೆಳವಣಿಗೆಗಳ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ....

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

by Shwetha
April 15, 2026
0

ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಈಗ ಭಾರಿ ಸಂಚಲನ ಮೂಡಿದೆ. ಇಷ್ಟು ದಿನ ಭಕ್ತರ ಪಾಲಿಗೆ ಮಾರ್ಗದರ್ಶಕರಾಗಿದ್ದ ವಚನಾನಂದ ಶ್ರೀಗಳ ಅಸಲಿ ಮುಖವಾಡ ಕಳಚಿದೆ ಎಂದು...

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

by Shwetha
April 15, 2026
0

ದೆಹಲಿ ಅಬಕಾರಿ ನೀತಿ ಹಗರಣದ ವಿಚಾರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್ ನ್ಯಾಯಾಧೀಶರ ಎದುರೇ ನೇರ ಸವಾಲು ಹಾಕುವ ಮೂಲಕ ಸಂಚಲನ ಮೂಡಿಸಿದ್ದಾರೆ. ಹೈಕೋರ್ಟ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram