ADVERTISEMENT
Tuesday, December 16, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಸಿಗಂದೂರಿನ ಧಾರ್ಮಿಕ ರಾಜಕಾರಣ ಸುಲಭವಾಗಿ ಅರ್ಥವಾಗುವಂತದಲ್ಲ, ಇದು ಸಾವಿರ ಕೋವೆಗಳ ಹುತ್ತ; ಹುಂಡಿ ಕಾಸು ಹಂಚಿಕೆಯ ಪುಡಿಗಲಾಟೆ ನೋಡಿ ನಸು ನಕ್ಕಳು ಚೌಡಮ್ಮ:

Sanath Rai by Sanath Rai
October 18, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಸಿಗಂದೂರಿನ ಧಾರ್ಮಿಕ ರಾಜಕಾರಣ ಸುಲಭವಾಗಿ ಅರ್ಥವಾಗುವಂತದಲ್ಲ, ಇದು ಸಾವಿರ ಕೋವೆಗಳ ಹುತ್ತ; ಹುಂಡಿ ಕಾಸು ಹಂಚಿಕೆಯ ಪುಡಿಗಲಾಟೆ ನೋಡಿ ನಸು ನಕ್ಕಳು ಚೌಡಮ್ಮ

sigandhuru saakshatvಸಿಗಂದೂರು ಚೌಡಿಗುಡಿ ಈ ರಾಜ್ಯದ ಅಸಂಖ್ಯ ಭಕ್ತರ ಶ್ರದ್ಧಾ ಕೇಂದ್ರ. ಕೋರ್ಟು ಕಚೇರಿಗಳಲ್ಲಿ ಇತ್ಯರ್ಥವಾಗದಿದ್ದ ನೂರಾರು ವ್ಯಾಜ್ಯಗಳನ್ನು ಬಗೆಹರಿಸಿದ ನ್ಯಾಯಸ್ಥಾನ. ಮಾನಸಿಕವಾಗಿ ಕುಗ್ಗಿ ಬದುಕಿನಲ್ಲಿ ಭರವಸೆಯೇ ಕಳೆದುಕೊಂಡ ಅದೆಷ್ಟೋ ಜನರಿಗೆ ದಿವ್ಯ ಸಮಾಧಾನ ನೆಮ್ಮದಿ ನೀಡುವ ತಾಣ.

Related posts

December 16, 2025
ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

December 16, 2025

ಆಧ್ಯಾತ್ಮ ಪ್ರಿಯರಿಗೆ ಇಲ್ಲಿನ ಪ್ರಶಾಂತ ಪರಿಸರ ಚೇತೋಹಾರಿ ಅನುಭೂತಿ ನೀಡುತ್ತದೆ. ಪ್ರಕೃತಿ ಪ್ರಿಯರಿಗೆ ಚೌಡಿನೆಲೆಯ ಕಾಡು, ಹಿನ್ನೀರಿನ ಲಾಂಚ್ ಪ್ರಯಾಣ ಅದ್ಭುತ ಅನುಭವ ನೀಡುತ್ತದೆ.

ದೇಶದಲ್ಲೇ ಹೆಸರಾದ ಈ ಸಿಗಂದೂರು ಮೊನ್ನೆ ಮೊನ್ನೆ ಇದೆಲ್ಲಾ ಕಾರಣ ಹೊರತುಪಡಿಸಿ ಸುದ್ದಿಯಾಯಿತು. ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಸದ್ದು ಮಾಡಿತು. ಸಿಗಂದೂರಿನ ಆಡಳಿತದಲ್ಲಿ ಕೆಲಕಾಲದಿಂದ ತೆರೆಮರೆಯಲ್ಲೇ ನಡೆಯುತ್ತಿದ್ದ ಜಂಗೀಕುಸ್ತಿ ಮೊನ್ನೆ ಸ್ಫೋಟವಾಯಿತು.

ನಾಬಿಯೊಳಗೆ ಹುಟ್ಟಿದ ಬೆಂಕಿನ ಗಂಟಲಿನ ತನಕ ಬಂದಾಗಲೂ ಅದುಮಿಟ್ಟುಕೊಳ್ಳಲಾಗುತ್ತದೆ. ಬಾಯಿತುಂಬಿದಾಗ ಕಾರಲೇಬೇಕು. ಮೊನ್ನೆ ಸಿಗಂದೂರು ದೇವಾಲಯದ ಪ್ರಧಾನ ಅರ್ಚಕರಾದ ಶೇಷಗಿರಿ ಭಟ್ಟರು ಮತ್ತು ಅವರ ತಮ್ಮ ಸುಬ್ರಾಯನಿಂದ ಜರುಗಿದ ವರ್ತನೆಯೂ ಇದೇ.

sigandhuru temple saakhatv ಇಷ್ಟಕ್ಕೂ ಆಗಿದ್ದಿಷ್ಟೆ. ಮೊದಲನೆಯ ನವರಾತ್ರಿಗೂ ಮುನ್ನ ಅಮವಾಯಸ್ಯೆಯಂದು ಸಿಗಂದೂರು ಚೌಡಮ್ಮನ ಆಲಯದಲ್ಲಿ ಚಂಡಿಕಾ ಹೋಮ ನಡೆಸುವುದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದ ಪರಂಪರೆ. ಆದರೆ ಈ ಬಾರಿ ಶೇಷಗಿರಿ ಭಟ್ಟರಿಗೆ ಚಂಡಿಕಾ ಹೋಮಕ್ಕೆ ಅವಕಾಶವಿರಲಿಲ್ಲ. ಅದಕ್ಕಾಗಿ ಮುನಿಸಿಕೊಂಡ ಭಟ್ಟರು ತಮ್ಮ ಪರಿವಾರ ಸಮೇತ ಚೌಡಮ್ಮನ ಮುಂದೆ ಧರಣಿ ಕೂತಿದ್ದರು.  ಮೌನವ್ರತ ಆಚರಿಸುತ್ತಿದ್ದರು.

ಶೇಷಗಿರಿ ಭಟ್ಟರು ಕಾಂಪೌಂಡಿನಲ್ಲಿ ಗೂಡಂಗಡಿ ಇಟ್ಟುಕೊಂಡಿದ್ದ ಜೈನಧರ್ಮದ ದ್ಯಾವಪ್ಪ ಗೌಡರಿಗೂ ಶೇಷಗಿರಿ ಭಟ್ಟರಿಗೂ ನಡುವೆ ಇದ್ದ ವೈಮನಸ್ಯದಿಂದಾಗಿ ಶೇಷಗಿರಿ ಭಟ್ಟರ ಮೌನವ್ರತ ಮತ್ತು ಧರಣಿ ಕಥೆ ಮುಕ್ತಾಯ ಕಂಡಿತು. ಏಕಾಏಕಿ ದಾಂದಲೆ ಎಬ್ಬಿಸಿದ ಭಟ್ಟರ ತಮ್ಮ ಸುಬ್ರಾಯ ಮೈಮೇಲೆ ಸ್ವತಃ ಚೌಡಮ್ಮನೇ ಬಂದವನಂತೆ ಎಗರೆಗರಿ ಬಿದ್ದ.

ಕೋಪೋದ್ರಿಕ್ತನಾಗಿ ದೇವಾಲಯದ ಉದ್ದಕ್ಕೂ ಓಡಾಡಿದ ಧರಿಸಿದ್ದ ಉತ್ತರೀಯವನ್ನೇ ಪಾಶುಪತಾಸ್ತ್ರದಂತೆ ಹಿಡಿದು ಸಿಕ್ಕ ಸಿಕ್ಕವರಿಗೆಲ್ಲಾ ಬಡಿದ. ಕೈಗೆ ಸಿಕ್ಕ ತಾಮ್ರದ ಬಿಂದಿಗೆಯನ್ನು ಗದೆಯಂತ ಹಿಡಿದು ಆಡಳಿತ ಕಚೇರಿಯ ಮೇಲೆ ದಾಳಿ ಮಾಡಿದ. ಈ ವೇಳೆ ಮೌನವ್ರತದಲ್ಲೇ ಇದ್ದ ಶೇಷಗಿರಿ ಭಟ್ಟರ ಮುಖ ಧುಮುಧುಮು ಎನ್ನುತ್ತಿತ್ತು.

sigandhuru temple shivamogga saakshatvತಮ್ಮನ ರೋಷಾವೇಷವನ್ನು ಕನಿಷ್ಟ ಕಂಟ್ರೋಲ್ ಮಾಡುವ ಪ್ರಯತ್ನವನ್ನೂ ಭಟ್ಟರು ಮಾಡಲಿಲ್ಲ. ಯಾಕಂದರೆ ಇದು ಇಂದು ನಿನ್ನೆಯ ಕೋಪಾಗ್ನಿಯಲ್ಲ. ಸಣ್ಣಕರುಳೋ ದೊಡ್ಡಕರುಳೋ ಮತ್ತೊಂದನ್ನೋ ದಾಟಿ ಇದು ಗಂಟಲು ತುಂಬಿಕೊಂಡಿತ್ತು. ಇದು ಇವತ್ತಲ್ಲ ನಾಳೆ ಹೀಗೆಯೇ ಆಗಬೇಕಿತ್ತು. ಮೊನ್ನೆ ಆಯಿತಷ್ಟೆ.

ಸಿಗಂದೂರೆಂಬ ಒಂದು ಸಣ್ಣ ದ್ವೀಪಕ್ಕ ಜಾಗತಿಕವಾಗಿ ಹೆಸರು ತಂದುಕೊಟ್ಟವರು ಪ್ರಧಾನ ಅರ್ಚಕರಾದ ಶೇಷಗಿರಿ ಭಟ್ಟರು ಮತ್ತು ಧರ್ಮಾಧಿಕಾರಿ ಹೊಳೆಕೊಪ್ಪದ ರಾಮಪ್ಪ ಎನ್ನುವುದು ನಿರ್ವಿವಾಧಿತ ಸತ್ಯ; ಅದರಲ್ಲಿ ಎರಡನೇ ಮಾತೇ ಇಲ್ಲ. ನೀರಿನಲ್ಲಿ ಮುಳುಗಿದ್ದ ಚೌಡಿಕಲ್ಲು ಹೊಳೆಕೊಪ್ಪ ರಾಮಪ್ಪನವರ ಕುಟುಂಬದ ಅಧಿದೇವತೆ.

ಇದನ್ನು ತಂದು ಇಲ್ಲಿ ಪ್ರತಿಷ್ಟಾಪಿಸಿದ್ದು ಹೊಳೆಕೊಪ್ಪದ ರಾಮಪ್ಪನವರೇ, ಅರ್ಚಕರಾಗಿ ದೇವಿಯ ಪೂಜೆ, ಪುನಸ್ಕಾರ, ಆರಾಧನೆ, ಪಾರಾಯಣ, ಉಪಾಸನೆ ಮಾಡಿಕೊಂಡು ದಶಕಗಳಿಂದ ಚೌಡಮ್ಮನಷ್ಟೇ ಪ್ರಸಿದ್ಧರಾದವರು ಶೇಷಗಿರಿ ಭಟ್ಟರು. ತಮ್ಮ ರಾಮಚಂದ್ರಾಪುರ ಮಠದ ಸಂಸ್ಥಾನಕ್ಕೆ ಕಾಲಕಾಲಕ್ಕೆ ಕಪ್ಪ ಕೊಡುತ್ತಾ ಬಂದರು, ಚೌಡಮ್ಮನೇ ಮಂಕಾಗುವಷ್ಟು ಫಳಫಳಿಸುವ ರಾಘವೇಶ್ವರ ಶ್ರೀಗಳ ದೊಡ್ಡದೊಂದು ಫೋಟೋವನ್ನು ದೇಗುಲದಲ್ಲಿ ನೇತು ಹಾಕಿದರು.

sigandhuru temple shivamogga saakshatvಆಗಿನಿಂದಲೇ ಈಡಿಗರ ಸಮುದಾಯದ ಕೆಲವರಿಗೆ ಇದು ಇರಿಸುಮುರಿಸು ಉಂಟುಮಾಡಿತ್ತು. ಸಿಗಂದೂರು ಎಷ್ಟೇ ಆದರೂ ಈಡಿಗರ ಕುಲದೇವಿ. ತಮ್ಮ ದೇವಸ್ಥಾನದ ಆದಾಯದ ಒಂದಂಶ ಬ್ರಾಹ್ಮಣ ಮಠಕ್ಕೆ ಹೋಗುತ್ತದೆ ಅನ್ನುವುದನ್ನು ಅವರಾದರೂ ಹೇಗೆ ಸಹಿಸಿಕೊಂಡಾರು? ಆದರೆ ಹೊಳೆಕೊಪ್ಪದ ರಾಮಪ್ಪನವರು ಧರ್ಮದರ್ಶಿಗಳಾಗಿ ಕೂತಿದ್ದರಲ್ಲ; ತುಟಿ ಎರಡು ಮಾಡದೇ. ಹಾಗಾಗಿ ಕೆಲವರಲ್ಲಿ ಈ ಅಸಮಧಾನ ಒಳಗೊಳಗೇ ಸುಡುತ್ತಿತ್ತು.

ಒಂದೆರಡು ವರ್ಷಗಳ ಹಿಂದೆ ಅತ್ಯಾಚಾರದ ಆರೋಪವಿರುವ ರಾಘವೇಶ್ವರ ಭಾರತಿ ಫೋಟೋವನ್ನು ದೇವಾಲಯದಿಂದ ತೆಗೆದುಹಾಕಬೇಕು ಎಂದು ಪ್ರಗತಿಪರ ಈಡಿಗ ಹುಡುಗರು ಸಿಗಂದೂರು ಚಲೋ ಮೆರವಣಿಗೆ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

https://youtu.be/i4pqp_mXDT0?t=2

ಆಗಲೂ ರಾಮಪ್ಪನವರದ್ದು ಅದೇ ಜಾಣ ಮೌನ. ಕಾರಣ ಸರಳ, ಸಿಗಂದೂರು ಜನಾರ್ಷಣೆಯ, ಧಾರ್ಮಿಕ ಭಕ್ತರ ಪಾಲಿನ ಸೂಜಿಗಲ್ಲಿನ ಆಕರ್ಷಣೆಯಾಗಿದ್ದು ಈಗೊಂದು ಹತ್ತು ಹನ್ನೆರಡು ವರ್ಷಗಳ ಹಿಂದಿನಿಂದ. ಅದಕ್ಕೂ ಮೊದಲು ಸಿಗಂದೂರಿಗೆ ಒಂದೋ ಎರಡೋ ಬಸ್ ಗಳು ಮಾತ್ರ ಹೋಗುತ್ತಿದ್ದವು. ಅಲ್ಲಿ ತಲೆ ಲೆಕ್ಕ ಹಾಕಬಹುದಾದಷ್ಟು ಭಕ್ತರು ಕಾಣಿಸುತ್ತಿದ್ದರು. ಯಾವಾಗ ಚೌಡಿಮಂದಿರಕ್ಕೆ ಭಕ್ತ ಜನರ ಪ್ರವಾಹವೇ ಶುರುವಾಯಿತೋ ದೇವಿ ಮಂದಿರದ ಹುಂಡಿಯೂ ತುಂಬಿ ಉಕ್ಕತೊಡಗಿತು.

ಕಚೇರಿಯಲ್ಲೊ ಫೋಟೋ, ಪ್ರಸಾದ, ಸ್ಟಾಂಪ್, ದೃಷ್ಟಿದಾರ, ಮಂತ್ರಿಸಿದ ತಾಯತ, ನಿಂಬೆಹಣ್ಣು, ತೆಂಗಿನಕಾಯಿ, ಸ್ಥಳ ಮಹಾತ್ಮೆ ಪುಸ್ತಕ, ತೀರ್ಥದ ಬಾಟಲಿ, ಇತ್ಯಾದಿಗಳ ಮಾರಾಟವೇ ಕೋಟಿಗಳ ಮೊತ್ತವನ್ನು ಖಜಾನೆಗೆ ತುಂಬಿಸತೊಡಗಿತು. ಈ ಖಜಾನೆಯ ಕೀಲಿಕೈ ಇದ್ದಿದ್ದು ಇದೇ ರಾಮಪ್ಪನವರು ಮತ್ತು ಶೇಷಗಿರಿ ಭಟ್ಟರ ಬಳಿ. ಇಬ್ಬರೂ ಸೇರಿ ಚೆನ್ನಾಗಿ ಹಣ ಮಾಡಿಕೊಂಡರು. ಕಾಡಿನ ಜಾಗದಲ್ಲಿ ಶೇಷಗಿರಿ ಭಟ್ಟರೂ ಮನೆ ಕಟ್ಟಿಕೊಂಡು ಸುತ್ತಮುತ್ತ ಒಂದಷ್ಟು ಜಾಗಕ್ಕೆ ಬೇಲಿ ಸುತ್ತಿದರು.

kagodu thimmappa saakshatvಹೇಳುವವರು ಕೇಳುವವರಿಲ್ಲದೇ ಇವರಿಬ್ಬರ ದುಡಿಮೆ ಭರ್ಜರಿಯಾಗಿಯೇ ನಡೆಯಿತು. ಚೌಡಮ್ಮ ಸುಮ್ಮನೇ ನೋಡುತ್ತಾ ಕುಂತಿದ್ದಳು, ಇಬ್ಬರದ್ದೂ ಪಾಪದ ಅಕೌಂಟ್ ಭರ್ತಿಯಾಗಲಿ ಅಂತ ಕಾದಿದ್ದಳೇನೋ? ಕೊನೆಗೂ ದೇವಿಯ ಹೆಸರಲ್ಲಿ ಸಮೃದ್ಧ ಸಮಾರಾಧನೆ ನಡೆಸಿದ ಇಬ್ಬರ ಬಂಡವಾಳವೂ ಈಗ ಬಯಲಾಯಿತು. ಚೌಡಮ್ಮ ಮೂರ್ತಿಯೊಳಗಿಂದನೇ ನಸುನಕ್ಕಳು.

ಉಳಿದ ವಿಚಾರಗಳೇನೇ ಇರಲಿ ಕೊಂಚ ಮಟ್ಟಿಗೆ ಶೇಷಗಿರಿ ಭಟ್ಟರು ಸಮಾಜಮುಖಿ. ಪಾಪಪ್ರಜ್ಞೆ ಕಾಡುತ್ತಿತ್ತೇನೋ ಪಾಪ ಆಗೀಗ ಒಂದಷ್ಟು ದಾನಧರ್ಮಗಳನ್ನು ಮಾಡುತ್ತಿದ್ದರು. ಕಷ್ಟವೆಂದು ಬಂದವರಿಗೆ ತಮ್ಮಿಂದಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದರು. ಇದಕ್ಕೆ ಒಂದಷ್ಟು ಪ್ರಚಾರವನ್ನೂ ಪಡೆದುಕೊಳ್ಳುತ್ತಿದ್ದರು.

ತುಮರಿ, ಬ್ಯಾಕೋಡು ಭಾಗದಲ್ಲಿ ಭಟ್ಟರ ಪರವಾಗಿ ಯಾರೂ ಕೆಟ್ಟ ಮಾತಾಡುವುದಿಲ್ಲ. ಆದರೆ ಆಡಳಿತಾಧಿಕಾರಿಯಾದ ಸನ್ಮಾನ್ಯ ಹೊಳೆಕೊಪ್ಪದ ರಾಮಪ್ಪನವರು ತಮ್ಮ ಉಗುರಿನಲ್ಲಿ ತುಂಬಿಕೊಂಡ ಮಣ್ಣನ್ನೂ ಯಾರಿಗೂ ಕೊಡಲಾರದಷ್ಟು ಜುಗ್ಗ. ಇವರಿಂದ ಈಡಿಗ ಜಾತಿ ಬಾಂದವರಿಗೆ ನಯಾ ಪೈಸೆ ಪ್ರಯೋಜನವಾಗಿಲ್ಲ.

beluru gopalakrishna saakshatvಚೌಡಮ್ಮನ ಹುಂಡಿ ಹಣದ ಲೆಕ್ಕ ಕೇಳುವುದು ಬೇಡ. ಅದರಲ್ಲೀ ಒಂದೇ ಒಂದು ಪರ್ಸಂಟ್ ಹಣವನ್ನು ತುಮರಿ ಬ್ಯಾಕೋಡು ಭಾಗದ ಶರಾವತಿ ಸಂತ್ರಸ್ತರ ಕಲ್ಯಾಣಕ್ಕಾಗಿ, ಮೂಲಸೌಕರ್ಯ ಅಭಿವೃದ್ಧಿಗಾಗಿ, ಈಡಿಗ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟಿದ್ದರೂ ಸಾಕಿತ್ತು. ರಾಮಪ್ಪನವರು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಷ್ಟೇ ಜನಾನುರಾಗಿ ಮುಂದಾಳು ಆಗುತ್ತಿದ್ದರು.

ಕೋವಿಡ್ ಕಷ್ಟಕಾಲದಲ್ಲಿಯೂ ಒಂದೇ ಒಂದು ಕುಟುಂಬಕ್ಕೆ ಒಂದು ಸಣ್ಣ ಮೂಟೆ ಅಕ್ಕಿ ದಿನಸಿ ಕಳಿಸಲಿಲ್ಲ ರಾಮಪ್ಪನವರು. ಹಣದ ಹಂಚಿಕೆಯೇ ಭಟ್ಟರ ರಾಮಪ್ಪನವರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣ ಎನ್ನುವುದು ಜಗತ್ತಿಗೇ ಗೊತ್ತಿರುವ ಸತ್ಯ. ಇವರ ಶೀತಲ ಸಮರ ಹೀಗೆಯೇ ಮುಕ್ತಾಯಬೇಕು ಎನ್ನುವುದು ಖುದ್ದು ಚೌಡಮ್ಮನ ಯೋಜನೆಯಾಗಿತ್ತೇನೋ?

ಸಿಗಂದೂರಿನ ಚೌಡಮ್ಮನ ಸಮ್ಮುಖದಲ್ಲಿ ಮೊನ್ನೆ ನಡೆದ ಮಾರಾ ಮಾರಿ ಹಿಂದೆ ದೊಡ್ಡ ರಾಜಕಾರಣವೇ ಇದೆ. ಶಿವಮೊಗ್ಗ ಜಿಲ್ಲೆಯ ಪ್ರಭಾವಿ ಬಹುಸಂಖ್ಯಾತ ಈಡಿಗ ಸಮುದಾಯದ ಇಬ್ಬರು ಪ್ರಶ್ನಾತೀತ ನಾಯಕರಲ್ಲಿ ಒಬ್ಬರು ಬಂಗಾರಪ್ಪ ಇನ್ನೊಬ್ಬರು ಕಾಗೋಡು ತಿಮ್ಮಪ್ಪ. ಕಳೆದ ಚುನಾವಣೆಯಲ್ಲಿಯೇ ತಿಮ್ಮಪ್ಪ ಹೊಳೆಕೊಪ್ಪದ ರಾಮಪ್ಪನವರ ವಿಚಾರದಲ್ಲಿ ಮನಸು ಮುರಿದುಕೊಂಡರು. ಅದಕ್ಕಿಂತ ಮೊದಲೂ ತಿಮ್ಮಪ್ಪನವರ ಮತ್ತು ರಾಮಪ್ಪನವರ ಸಂಬಂಧ ಅಷ್ಟಕಷ್ಟೆಯೇ ಎಂಬಂತಿತ್ತು.

halappa saakshatvಸಾಗರದ ಹಾಲಿ ಶಾಸಕರಾದ ಹಾಲಪ್ಪನವರು ಹೊಳೆಕೊಪ್ಪದ ರಾಮಪ್ಪನವರ ಹತ್ತಿರದ ಸಂಬಂಧಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈಡಿಗರ ಮತಗಳು ಸ್ಪಷ್ಟವಾಗಿ ಎರಡು ಭಾಗವಾಯಿತು. ಈಡಿಗರ ಹಿರೀಕರು ಅವತ್ತೂ ಇವತ್ತೂ ಕಾಗೋಡರನ್ನೇ ಬೆಂಬಲಿಸಿಕೊಂಡು ಬಂದ ಒಂದಷ್ಟು ಮಂದಿ ಈಗಲೂ ಕಾಗೋಡು ಪರವಾಗಿದ್ದಾರೆ. ಸಿಗಂದೂರು ದೇವಿಯ ಮಂದಿರ ಮುಜರಾಯಿ ಇಲಾಖೆಗೆ ಸೇರಲಿ ಎನ್ನುವುದು ಕಾಗೋಡು ಅಭಿಪ್ರಾಯವಾದರೂ ಇದನ್ನು ಬೆಂಬಲಿಸುವ ಜನರಿದ್ದಾರೆ.

ಮತ್ತೊಂದು ಬಹುಸಂಖ್ಯಾತ ಭಾಗ ಶಾಸಕ ಹಾಲಪ್ಪನವರ ಪರವಿದೆ. ಈ ವರ್ಗದಲ್ಲಿ ಸಿಗಂದೂರು ಕೇಂದ್ರಿತ ಈಡಿಗ ಸಮುದಾಯ ಮತ್ತು ಹೊಳೆಕೊಪ್ಪದ ರಾಮಪ್ಪನವ ಬೆಂಬಲಿಗರಿದ್ದಾರೆ. ಈಗ ಮತ್ತೂ ಒಂದು ಪಂಗಡವಿದೆ. ಅದು ಮಾಜೀ ಶಾಸಕ ಬೇಳೂರು ಗೋಪಾಲಕೃಷ್ಣನವರ ಪರವಿರುವ ಗುಂಪು. ಸದ್ಯಕ್ಕೆ ಕೆಪಿಸಿಸಿ ನೂತನ ವಕ್ತಾರರಾಗಿರುವ ಬೇಳೂರು ಸಿಗಂದೂರು ಭಿನ್ನಾಭಿಪ್ರಾಯದ ವಿಚಾರದಲ್ಲಿತ ಮೌನ ಮುರಿದಿಲ್ಲ.

ಅತ್ತ ಒಂದು ವೇಳೆ ಶೇಷಗಿರಿ ಭಟ್ಟರ ಹುತ್ತ ಒಡೆಯುವ ಮತ್ತು ಭಟ್ಟರನ್ನು ಸಿಗಂದೂರಿನಿಂದ ಗಡಿಪಾರು ಮಾಡುವ ಯೋಜನೆ ತಯಾರುಗುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಇದರ ಅರಿವಿರುವುದರಿಂದಲೇ ಭಟ್ಟರೂ ಸಹ ಚೌಡಮ್ಮನ ದೇಗುಲ ಮುಜರಾಯಿ ಇಲಾಖೆಗೆ ಸೇರಿಬಿಡಲಿ ತಾವು ಪ್ರಧಾನ ಅರ್ಚಕರಾಗಿ ಮುಂದುವರೆಯಬಹುದು ಎನ್ನುವ ಡಿಫನ್ಸ್ ಗೇಮ್ ಆಡುತ್ತಿದ್ದಾರೆ.
sigandhuru saakshatvಈ ಮಧ್ಯೆ ಸಿಗಂದೂರು ತಮ್ಮ ಸ್ವತ್ತು, ತಾವದರ ವಾರಸ್ದಾರರು ಎಂದುಕೊಂಡು ಮತ್ತೊಬ್ಬರ ರಂಗಪ್ರವೇಶವಾಗಿದೆ. ಸಿಗಂದೂರಿನ ದೇವಾಲಯಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಕವಾಗಲಿ ಎನ್ನುವ ಆಗ್ರಹ ಕೇಳಿಬಂದಿದೆ. ಶಾಸಕರಾದ ಹಾಲಪ್ಪನವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಅರ್ಚಕ ಶೇಷಗಿರಿ ಭಟ್ಟರು ತಾವೇನೂ ಕಮ್ಮಿಯಿಲ್ಲ ಎಂದು ಸಾಬೀತುಮಾಡಲು ತಮ್ಮ ರಾಜಕೀಯ ಪ್ರಭಾವದ ಪ್ರತ್ಯಾಸ್ತ್ರದ ಶರ ಮಸೆಯುತ್ತಿದ್ದಾರೆ. ಪಿಚ್ಚರ್ ಅಬಿ ಬೀ ಬಾಕಿ ಹೈ. ಏನು ನಿನ್ನ ಲೀಲೇ ತಾಯಿ ಶ್ರೀ ಸಿಗಂದೂರೇಶ್ವರಿ ಚೌಡಮ್ಮ.

-ವಿಭಾ (ವಿಶ್ವಾಸ್ ಭಾರದ್ವಾಜ್)
ಮಾರ್ಜಾಲ ಮಂಥನ
***

Tags: #saakshatvbeluru gopalakrishnaHarathalu HalappaHinduismkagodu thimmapparamappashivamoggashri devi templesigandhuruSri Chowdeshwari DeviSri Sigandur Chowdeshwari
ShareTweetSendShare
Join us on:

Related Posts

by admin
December 16, 2025
0

ಅಮಾವಾಸ್ಯೆಯ ರಾತ್ರಿ ಈ ಸ್ಥಳದಲ್ಲಿ ನೀರನ್ನು ಇಡುವುದರಿಂದ ಪೂರ್ವಜರ ಮನಸ್ಸು ಶಾಂತವಾಗುತ್ತದೆ ಮತ್ತು ಪೂರ್ವಜರ ದುಷ್ಟಶಕ್ತಿಗಳು ದೂರವಾಗುತ್ತವೆ. ಪೂರ್ವಜರ ಹೃದಯಗಳು ಶಾಂತವಾಗಲಿ ಮತ್ತು ಪೂರ್ವಜರ ದೋಷವು ನಿವಾರಣೆಯಾಗಲಿ....

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

by Shwetha
December 16, 2025
0

ರಾಜ್ಯ ಸರ್ಕಾರವೂ ಇದೀಗ ಡಿಜಿಟಲ್ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಹಾಗೂ ಪಾರದರ್ಶಕ ಜಾಹೀರಾತು ನೀತಿಯನ್ನು ಜಾರಿಗೆ ತಂದಿದೆ. ಡಿಜಿಟಲ್ ಜಾಹೀರಾತು ಮಾರ್ಗಸೂಚಿ–2024 ಅನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ...

ಬಿಹಾರದ ಸೋಲಿನ ಕಹಿಯ ನಡುವೆಯೇ ಪ್ರಿಯಾಂಕಾ ಗಾಂಧಿ ಮನೆ ಬಾಗಿಲು ತಟ್ಟಿದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯ ಅಸಲಿ ರಹಸ್ಯವೇನು?

ಬಿಹಾರದ ಸೋಲಿನ ಕಹಿಯ ನಡುವೆಯೇ ಪ್ರಿಯಾಂಕಾ ಗಾಂಧಿ ಮನೆ ಬಾಗಿಲು ತಟ್ಟಿದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯ ಅಸಲಿ ರಹಸ್ಯವೇನು?

by Shwetha
December 16, 2025
0

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ದೇಶದ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತಮ್ಮ ತಂತ್ರಗಾರಿಕೆಗಳಿಂದಲೇ ಖ್ಯಾತಿ ಗಳಿಸಿದ್ದ ಪ್ರಶಾಂತ್ ಕಿಶೋರ್, ಬಿಹಾರದಲ್ಲಿ ತಮ್ಮ...

ಜಿಬಿಎ ಚುನಾವಣಾ ರಣಕಹಳೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ 50 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಿದ ಡಿಕೆಶಿ

ಜಿಬಿಎ ಚುನಾವಣಾ ರಣಕಹಳೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ 50 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಿದ ಡಿಕೆಶಿ

by Shwetha
December 16, 2025
0

ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯ ಬೆನ್ನಲ್ಲೇ ಇದೀಗ ಚುನಾವಣಾ ಸಿದ್ಧತೆಗೆ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಚಾಲನೆ ನೀಡಿದೆ. ಜಿಬಿಎ ವ್ಯಾಪ್ತಿಯ 369 ವಾರ್ಡ್‌ಗಳಲ್ಲಿ ಸ್ಪರ್ಧಿಸಲು...

ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಕೆ ಶಿವಕುಮಾರ್

ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಕೆ ಶಿವಕುಮಾರ್

by Shwetha
December 16, 2025
0

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೀಡಿರುವ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram