“ ಇದು ದೇವರು ಮಾಡಿರುವ ದೊಡ್ಡ ಅನ್ಯಾಯ ” : ಸೃಜನ್
ಚಂದನವನದ ಹೃದಯವಂತ ಪುನೀತ್ ರಾಜ್ ಕುಮಾರ್ ಅವರು ಇನ್ನೂ ನಮ್ಮೊಂದಿಗಿಲ್ಲ ಎನ್ನುವ ಕಹಿ ಸತ್ಯವನ್ನ ಅರಗಿಸಿಕೊಳ್ಳುವುದಕ್ಕೆ ಆಗ್ತಿಲ್ಲ. ಇಡೀ ಸಿನಿಮಾ ರಂಗವೇ ಅಪ್ಪು ನಿಧನಕ್ಕೆ ಕಂಬನಿ ಮಿಡಿಯುತ್ತಿದೆ. ನಟ ಸೃಜನ್ ಲೋಕೇಶ್ ಕೂಡ ಬೇಸರ ಹೊರಹಾಕಿದ್ದು, ಇದು ದೇವರು ಮಾಡಿರೋ ದೊಡ್ಡ ಅನ್ಯಾಯ, ಪುನೀತ್ ಸಾವು ದೊಡ್ಡ ಅನ್ಯಾಯ. ಇದು ಒಬ್ಬ ವ್ಯಕ್ತಿ ಅಥವಾ ನಟಿನಿಗೆ ಆಗಿರುವ ಅನ್ಯಾಯ ಅಲ್ಲ ಎಲ್ಲರಿಗೂ ಆಗಿರುವ ಅನ್ಯಾಯ. ದೇವರು ಮಾಡಿರುವಂತಹ ದುರಂತ ಇದು. ದೇವರಿಗೆ ಮನಸ್ಸಿಲ್ಲ ಎಂಬುವುದು ಇದರಿಂದ ನನಗೆ ಗೊತ್ತಾಗುತ್ತಿದೆ ಎಂದು ನಟ ಸೃಜನ್ ಲೋಕೇಶ್ ಪುನೀತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸೃಜನ್ ಎಂಥೆಂತಹ ಕೆಟ್ಟ ಮನಸ್ಸಿರುವ ಕಳ್ಳರು, ಕೊಲೆಗಾರರು ಎಲ್ಲರೂ ಬದುಕಿರುತ್ತಾರೆ. ಆದರೆ ಸಾವಿರಾರು ಜನರಿಗೆ ಸಹಾಯ ಮಾಡುತ್ತಿದ್ದಂತಹ ವ್ಯಕ್ತಿ, 46 ವರ್ಷ ದಷ್ಟಪುಷ್ಟವಾಗಿದ್ದಂತಹ ಉತ್ತಮ ಲೈಫ್ ಸ್ಟೈಲ್ ಇದ್ದಂತಹ ವ್ಯಕ್ತಿ ಹೋಗುತ್ತಾರೆ ಎಂದರೆ ಇದಕ್ಕೆ ಅರ್ಥನೇ ಇಲ್ಲ. ಇದು ಆಗಬಾರದಿತ್ತು. ಇದು ಅನ್ಯಾಯ. ದೇವರು ಮಾಡಿರುವ ಅನ್ಯಾಯ ಎಂದಿದ್ದಾರೆ.