ಬೆಂಗಳೂರು: ರೂಪಾಂತರ ಹೊಂದಿರುವ ಲಂಡನ್ ಕೊರೊನಾ ಭೀತಿಯ ನಡುವೆಯೂ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ತರಗತಿಗಳನ್ನು ನಿಗದಿಯಂತೆ ಜನವರಿ 1ರಿಂದ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬೆಂಗಳೂರಿನಲ್ಲಿಂದು ಶಿಕ್ಷಣ ಇಲಾಖೆ ಅಧಿಕಾರಿಗಳು, ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಬಿಗಿ ಕಟ್ಟೆಚ್ಚರದೊಂದಿಗೆ 10 ಹಾಗೂ 12ನೇ ತರಗತಿಗಳು ಆರಂಭವಾಗಲಿವೆ. ಈ ವಿಚಾರದಲ್ಲಿ ಪೋಷಕರಲ್ಲಿ ಗೊಂದಲ ಬೇಡ ಎಂದು ತಿಳಿಸಿದ್ದಾರೆ.

ಲಂಡನ್ ಕೊರೊನಾ ಭೀತಿಯ ಬಗ್ಗೆ ಹೆಚ್ಚು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ಈ ವೈರಸ್ ಬಗ್ಗೆ ತಜ್ಞರಿಂದ ಪ್ರತಿದಿನ ಅಭಿಪ್ರಾಯ ಪಡೆದು ಅದರ ಅನುಸಾರವಾಗಿ ಕ್ರಮಗಳನ್ನು ಕೈಗೊಳ್ಳಳಾಗುವುದು ಎಂದು ಸುರೇಶ್ಕುಮಾರ್ ಭರವಸೆ ನೀಡಿದ್ದಾರೆ.
ಇನ್ನೊಂದು ವಾರದಲ್ಲಿ ಎಸ್ಎಸ್ಎಲ್, ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟವಾಗಲಿದೆ. ಜತೆಗೆ ಸಿಲಬಸ್ ಕೂಡ ಇದೇ ವಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸಭೆಯ ಪ್ರಮುಖ ಅಂಶಗಳು..
* ಶಾಲೆ ಆರಂಭ ಕೇವಲ ಶಿಕ್ಷಣ ಇಲಾಖೆ ಕಾರ್ಯ ಮಾತ್ರವಲ್ಲ, ಎಲ್ಲಾ ಇಲಾಖೆಗಳು, ಜಿಲ್ಲಾಧಿಕಾರಿಗಳ ಜವಾಬ್ದಾರಿ
* ಎಸ್ಎಸ್ಎಲ್ಸಿ, ಪಿಯುಸಿಗೆ ಬೋರ್ಡ್ ಪರೀಕ್ಷೆ ಇರುವುದರಿಂದ ತರಗತಿ ಆರಂಭಿಸೋಣ
* ಇನ್ನೊಂದು ವಾರದಲ್ಲಿ ಪರೀಕ್ಷಾ ದಿನಾಂಕ, ಸಿಲಬಸ್ ಪ್ರಕಟ
* ಬಾಲ ಕಾರ್ಮಿಕ ಪದ್ದತಿ ಹೆಚ್ಚುತ್ತಿರುವ ಹಿನ್ನೆಲೆ ತರಗತಿ ಆರಂಭಿಸೋಣ
* ಶಾಲೆಗಳಲ್ಲಿ ಸಾಮಾಜಿಕ ಅಂತರ, ಕೋವಿಡ್ ನಿಯಮ ಪಾಲನೆ ಕಡ್ಡಾಯ
* ಒಂದು ತರಗತಿಯಲ್ಲಿ 15 ವಿದ್ಯಾರ್ಥಿಗಳು ಕುಳಿತುಕೊಳ್ಳಲು ವ್ಯವಸ್ಥೆ
* ಮಕ್ಕಳು ಶಾಲೆಗೆ ಬರಬೇಕೆಂದರೆ ಪೋಷಕರ ಅನುಮತಿ ಪತ್ರ ಕಡ್ಡಾಯ
* ಆರೋಗ್ಯ ಸಮಸ್ಯೆ ಇದ್ದರೆ ಮಕ್ಕಳು ಶಾಲೆಯಿಂದ ದೂರ ಇರಬೇಕು
* ಶೈಕ್ಷಣಿಕ ಸಂಚಲನ ಆಗಬೇಕೆಂದರೆ ಜಿಲ್ಲಾಧಿಕಾರಿಗಳ ಪಾತ್ರ ಮುಖ್ಯ
* ಪೋಷಕರಲ್ಲಿ ಧೈರ್ಯ ತುಂಬುವ ಕೆಲಸವನ್ನು ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಮಾಡಬೇಕು
* ವಿದ್ಯಾರ್ಥಿಗಳ ಬಸ್ ವ್ಯವಸ್ಥೆ ಮಾಡುವುದು ಡಿಸಿಗಳ ಜವಾಬ್ದಾರಿ
* ಮಧ್ಯಾಹ್ನದ ಬಿಸಿಯೂಟ ಇರುವುದಿಲ್ಲ, ಮನೆಯಿಂದಲೇ ಮಕ್ಕಳು ತರಬೇಕು
* ಶಾಲೆಗಳಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು
* ಎಲ್ಲಾ ಶಾಲೆಗಳಲ್ಲಿ ಐಸೋಲೇಶನ್ ಕೊಠಡಿ ಇರಬೇಕು
ಜನವರಿ 1ಕ್ಕೆ ಬದಲು ಜ.14ರಿಂದ ವಿದ್ಯಾಗಮ
ಜನವರಿ 1ರಿಂದಲೇ 6ರಿಂದ 9ನೇ ತರಗತಿಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾಗಮ ಆರಂಭಿಸಲು ಕಳೆದ ವಾರ ತೀರ್ಮಾನಿಸಲಾಗಿತ್ತು. ಆದರೆ, ಇಂದು ನಡೆದ ಸಭೆಯಲ್ಲಿ ಜನವರಿ 14ರಿಂದ ವಿದ್ಯಾಗಮ ತರಗತಿ ಆರಂಭಿಸಲಾಗುವುದು. ಕೊರೊನಾ ಮುನ್ನೆಚ್ಚರಿಕೆಗಳ ಬಗ್ಗೆ ತಜ್ಞರಿಂದ ಪ್ರತಿದಿನದ ಮಾಹಿತಿ ಆಧರಿಸಿ ವಿದ್ಯಾಗಮ ತರಗತಿಗಳು ಆರಂಭವಾಗಲಿವೆ. ಮೊದಲು ನಿರ್ಣಯ ಮಾಡಿದಂತೆ ಶಾಲಾ ಕೊಠಡಿ ಬದಲು ಕೊಠಡಿ ಹೊರಗೆ ವಿದ್ಯಾಗಮ ತರಗತಿ ನಡೆಸಲು ನಿರ್ಧರಿಸಲಾಗಿದೆ. ಜತೆಗೆ ಚಂದನ ವಾಹಿನಿಯಲ್ಲಿ ಸಂವೇದ ತರಗತಿಗಳು ಮುಂದುವರೆಯಲಿವೆ ಎಂದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








