ಹಿಜಾಬ್ ಗೆ ಅವಕಾಶ ಸಿಗದ ಕಾಲೇಜಿನಿಂದ ಟಿ ಸಿ ಪಡೆದ ವಿದ್ಯಾರ್ಥಿನಿಯರು…
ಕರಾವಾಳಿ ಸೇರಿದಂತೆ ದೇಶಾದ್ಯಂತ ಸದ್ದು ಮಾಡಿದ್ದ ಹಿಜಾಬ್ ವಿವಾದ ಈಗ ಮತ್ತೊಂದು ರೂಪವನ್ನ ಪಡೆದುಕೊಂಡಿದೆ. ಹಿಜಾಬ್ಗೆ ಅವಕಾಶ ನೀಡದ ಕಾಲೇಜಿನಿಂದ ವಿದ್ಯಾರ್ಥಿನಿಯರು ಟಿಸಿ ಪಡೆದುಕೊಳ್ಳುತ್ತಿದ್ದಾರೆ.
ಕೆಲವು ತಿಂಗಳ ಹಿಂದಷ್ಟೇ ಪರೀಕ್ಷೆಗಳಿಗೆ ಹಿಜಬ್ ಧರಿಸಲು ಅವಕಾಶವಿಲ್ಲ ಎಂದಿದ್ದಕ್ಕೆ ಅನೇಕ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗಿದ್ದರು. ಈ ಕಾರಣಕ್ಕೆ ಮಂಗಳೂರು ವಿವಿ ಉಪಕುಲಪತಿ ಟಿಸಿ ವಾಪಸ್ ಪಡೆಯಬಹುದು ಎಂದಿದ್ದರು. ಉಡುಪಿ ಜಿಲ್ಲೆಯಲ್ಲಿ ಶೇ.16ರಷ್ಟು ವಿದ್ಯಾರ್ಥಿನಿಯರು ಟಿಸಿ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 900 ಮಂದಿ ಪೈಕಿ 145 ಮಂದಿ ಟಿಸಿ ವಾಪಸ ಪಡೆದುಕೊಂಡಿದ್ದಾರೆ. ಸರ್ಕಾರಿ ಕಾಲೇಜಿನ ಶೇ. 34 ರಷ್ಟು, ಅನುದಾನಿತ ಕಾಲೇಜಿನ ಶೇ.13ರಷ್ಟು ಟಿಸಿ ಪಡೆದಿದ್ದಾರೆ.
ವಿದ್ಯಾರ್ಥಿನಿಯರು ಟಿಸಿ ಪಡೆಯಲು ಸಚಿವ ಬಿ.ಸಿ ನಾಗೇಶ್ ಅವರೇ ಮುಖ್ಯ ಕಾರಣ ಎಂದು ಟಿ ಸಿ ಪಡೆದುಕೊಂಡಿರುವ ಹಿಜಾಬ್ ಹೋರಾಟಗಾರ್ತಿ ಗೌಸಿಯ ಹೇಳುತ್ತಿದ್ದಾರೆ.