ಬೆಂಗಳೂರು : ಆರ್.ಆರ್. ನಗರ ಚುನಾವಣಾ ಸಂದರ್ಭದಲ್ಲಿ ನಕಲಿ ಮತದಾರರ ಪಟ್ಟಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಮುನಿರತ್ನಗೆ ಸುಪ್ರೀಂ ಕೋರ್ಟ್ ( supreme court ) ಬಿಗ್ ರಿಲೀಫ್ ನೀಡಿದೆ.

ಚುನಾವಣೆ ಸಂದರ್ಭದಲ್ಲಿ ನಕಲಿ ಮತದಾರರ ಪಟ್ಟಿ ದೊರೆತ ಹಿನ್ನೆಲೆ ಮುನಿರತ್ನ ಅಕ್ರಮ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಸ್ಪರ್ಧಿ ತುಳಸಿ ಮುನಿರಾಜು ಗೌಡ ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ಸಂತೋಷದಿಂದ ಒಪ್ಪಿಕೊಂಡಿದ್ದೇನೆ:ಶ್ರೀರಾಮುಲು, ಡಿಪ್ರಮೋಟ್ ಅಲ್ಲ..ಪ್ರಮೋಷನ್;ಸುಧಾಕರ್..!
ಈ ಕುರಿತು ಇಂದು ಸುಪ್ರೀಂ ಕೋರ್ಟ್ (supreme court) ಮಹತ್ವದ ನಿರ್ಧಾರ ಕೈಗೊಂಡಿದೆ. ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.

ಇದರಿಂದ ಕೋರ್ಟ್ ತೀರ್ಪು ಏನು ಬರುತ್ತೋ ಎಂಬ ಟೆನ್ಶನ್ ನಲ್ಲಿದ್ದ ಮುನಿರತ್ನ ಈಗ ನಿರಾಳರಾಗಿದ್ದಾರೆ. ಇದರಿಂದ ಅವರು ಚುನಾವಣೆ ಸ್ಪರ್ಧಿಸುವ ಹಾದಿ ಸುಗಮವಾಗಿದೆ.
ಇದನ್ನೂ ಓದಿ : ಮುನಿರತ್ನಗೆ ಬಿಗ್ ರಿಲೀಫ್ ಕೊಟ್ಟ `ಸುಪ್ರೀಂ ತೀರ್ಪು’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








