ಮಡಿಕೇರಿ: ಕೊಟ್ಟಿದ್ದ ಹಣವನ್ನು ಮರಳಿ ಕೇಳಿದ್ದಕ್ಕೆ ಪಾಪಿಯೊಬ್ಬ ಮಹಿಳೆಯ ತೇಜೋವಧೆ ಮಾಡಿರುವ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊನ್ನಂಪೇಟೆ ಪೊಲೀಸರು (Police) ನೌಷದ್ (30) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ಕೊಟ್ಟಿದ್ದ ಹಣ ಕೇಳಿದ್ದಕ್ಕೆ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ಆರೋಪಿಯು ಮಹಿಳೆಯೊಂದಿಗೆ ಪರಿಚಯವಾಗಿ ನಂಬರ್ ಪಡೆದಿದ್ದಾನೆ. ನಂತರ ಮೆಸೆಜ್ ಮಾಡಲು ಆರಂಭಿಸಿ, ಮಹಿಳೆಯ ಬಳಿ ಹಣ ಪಡೆದಿದ್ದಾನೆ. ಹಣ ಕೊಟ್ಟ ಮಹಿಳೆ ಮರಳಿ ಕೇಳಿದ್ದಕ್ಕೆ ಅವರ ಬಗ್ಗೆಯೇ ತೇಜೋವಧೆ ಮಾಡಿ ಬರೆದಿದ್ದಾನೆ. ಹೀಗಾಗಿ ಮಹಿಳೆ ದೂರು ನೀಡಿದ್ದಾರೆ. ಸದ್ಯ ಆರೋಪಿ ಕೂಡ ತನ್ನ ತಪ್ಪು ಒಪ್ಪಿಕೊಂಡಿದ್ದು, ಪೊಲೀಸರು ಮೊಬೈಲ್ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.