ಬೆಂಗಳೂರಿಗರೇ ಗಮನಿಸಿ : ಕೆಂಗೇರಿಯಲ್ಲಿ ಇಂದಿನಿಂದ 90 ದಿನ ಸತ್ತರವರನ್ನು ಸುಡುವಂತಿಲ್ಲ
ಬೆಂಗಳೂರು : ದಿನಾಂಕ 15-07-2022 ರಿಂದ 14-10-2022 ಅಂದರೇ 90 ದಿನಗಳ ಕಾಲ ಕೆಂಗೇರಿ ವಿದ್ಯುತ್ ಚಿತಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ರಾಜರಾಜೇಶ್ವರಿ ನಗರದ ಕಾರ್ಯಪಾಲಕ ಅಭಿಯಂತರಾದ ರಮೇಶ್ ಅವರು ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಕೆಂಗೇರಿ ವಿದ್ಯುತ್ ಚಿತಾಗಾರಲ್ಲಿರುವ Horizontal Coil Mounting ವಿನ್ಯಾಸದಿಂದ Vertical Coil Mounting ವಿನ್ಯಾಸಕ್ಕೆ ಬದಲಿಸುವ ಕಾಮಗಾರಿಯನ್ನು ಕೈಗೊಳ್ಳಬೇಕಾಗಿದೆ.

ಹೀಗಾಗಿ ದಿನಾಂಕ: 15-07-2022 ರಿಂದ 14-10-2022(90 ದಿನಗಳು) ವರೆಗೂ ಚಿತಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ಈ ಚಿತಾಗಾರಕ್ಕೆ ಮೃತ ದೇಹಗಳನ್ನು ದಹನ ಕ್ರಿಯೆಗಾಗಿ ತರುವ ಸಾರ್ವಜನಿಕರು ಸಮೀಪದಲ್ಲಿರುವ ಪೀಣ್ಯ ಅಥವಾ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ ಎಂದು ರಾಜರಾಜೇಶ್ವರಿ ನಗರದ ಕಾರ್ಯಪಾಲಕ ಅಭಿಯಂತರರು(ವಿದ್ಯುತ್) ರವರು ತಿಳಿಸಿದ್ದಾರೆ.