ADVERTISEMENT
Thursday, May 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಅಡುಗೆಗೆ ರುಚಿ ಮಾತ್ರವಲ್ಲ ಇದು ಮನೇಮದ್ದೂ ಹೌದು; ಉತ್ತಮ ಆರೋಗ್ಯಕ್ಕೂ ಅತ್ಯುತ್ತಮ ತರಕಾರಿ ಈರುಳ್ಳಿ

admin by admin
August 31, 2020
in Health, Newsbeat, ಆರೋಗ್ಯ
Share on FacebookShare on TwitterShare on WhatsappShare on Telegram

ಈರುಳ್ಳಿ ಭಾರತದಲ್ಲಿ ಅನೇಕರಿಗೆ ನಿತ್ಯದ ಆಹಾರ ವಸ್ತುವಾಗಿದೆ. ಭಾರತೀಯರು ಕೆಲವು ರೋಗಗಳಿಗೆ ಈರುಳ್ಳಿಯನ್ನು ಮನೆ ಮದ್ದಾಗಿಯೂ ಬಳಸುತ್ತಾರೆ. ಈ ಕ್ರಮ ಇಂದು ನಿನ್ನೆಯದಲ್ಲ. ಪುರಾತನ ಕಾಲದಿಂದಲೂ ಈರುಳ್ಳಿ ಆಹಾರವಾಗಿ ಮಾತ್ರವಲ್ಲ ಔಷಧಿಯಾಗಿ ಬಳಕೆಯಲ್ಲಿದೆ.

ಈರುಳ್ಳಿಯನ್ನು ಭಾರತದಲ್ಲಿ ಮಾತ್ರವಲ್ಲ, ಈಜಿಪ್ಟಿನಲ್ಲೂ ಪುರಾತನಕಾಲದಿಂದ ಮಹತ್ವ ಪಡೆದಿದೆ. ಕೆಮ್ಮು, ಮಲಬದ್ಧತೆ ನಿವಾರಿಸುವ ಈರುಳ್ಳಿ ಕ್ರಿಮಿನಾಶಕ ಗುಣಗಳನ್ನು ಹೊಂದಿದೆ. ಈರುಳ್ಳಿ ಸೇವಿಸಿದರೆ ಅದ್ಭುತವಾದ ನಿದ್ರೆ ಬರುತ್ತದೆ ಎಂದೂ ಹೇಳುತ್ತಾರೆ ಅಷ್ಟಿಷ್ಟು ಆಯುರ್ವೇದ ಗೊತ್ತಿರುವ ಪಂಡಿತರು. ಈರುಳ್ಳಿ ಬಳಕೆಯಿಂದ ಶ್ವಾಸಕೋಶ, ಜೀರ್ಣಶಕ್ತಿ, ಜ್ವರದಂತಹ ಮಹಾರೋಗಗಳನ್ನು ಗುಣಪಡಿಸಿಕೊಳ್ಳಬಹುದು. ಬೆಲ್ಲದೊಂದಿಗೆ ಹಸಿ ಈರುಳ್ಳಿ ತಿಂದರೆ ಮಕ್ಕಳ ಬೆಳವಣಿಗೆಗೆ ಒಳ್ಳೆಯದು ಎಂಬ ಮಾತು ಈಗಲೂ ಹಳಬರು ಹೇಳುತ್ತಲೇ ಇರುತ್ತಾರೆ.

Related posts

ಮೋದಿ ಹಾವಾಡಿಗನಲ್ಲ ಭಾರತದ ಗತ್ತಿನ ಸಂಕೇತ: ನಾರ್ವೆ ಪತ್ರಿಕೆಯ ಜನಾಂಗೀಯ ಕುಚೇಷ್ಟೆಗೆ ಭಾರೀ ಆಕ್ರೋಶ

ಮೋದಿ ಹಾವಾಡಿಗನಲ್ಲ ಭಾರತದ ಗತ್ತಿನ ಸಂಕೇತ: ನಾರ್ವೆ ಪತ್ರಿಕೆಯ ಜನಾಂಗೀಯ ಕುಚೇಷ್ಟೆಗೆ ಭಾರೀ ಆಕ್ರೋಶ

May 21, 2026
‘ಮೆಲೋಡಿ ಗಿಫ್ಟ್’ ವಿವಾದ: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

‘ಮೆಲೋಡಿ ಗಿಫ್ಟ್’ ವಿವಾದ: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

May 21, 2026

ಈರುಳ್ಳಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಲೋಹ, ವಿಟಮಿನ್ ಎ,ಬಿ,ಸಿ ಇರುತ್ತವೆ. ಈರುಳ್ಳಿಯನ್ನು ಪಿತ್ತ ಪ್ರಕೃತಿ ಇರುವವರು, ಮೆದುಳಿನ ವಿಕಾರ ಇರುವವರು ಸೇವಿಸುವುದು ಒಳ್ಳೆಯದಲ್ಲ. ಇದರ ದುಷ್ಪರಿಣಾಮ ತಡೆಯಬೇಕೆಂದರೆ ದಾಳಿಂಬೆ ರಸ ಕುಡಿಯಬೇಕು.

ಈರುಳ್ಳಿಯನ್ನು ಸಂಸ್ಕೃತದಲ್ಲಿ ಪಲಾಂಡು, ಹಿಂದಿಯಲ್ಲಿ ಪ್ಯಾಜ್, ಇಂಗ್ಲೀಷ್ ನಲ್ಲಿ ಆನಿಯನ್ ಎಂದು ಕರೆಯುತ್ತಾರೆ. ಇದಕ್ಕಿರುವ ಇನ್ನಿತರ ಹೆಸರುಗಳೆಂದರೆ ಮುಖದೂಷಕ, ಯುವನೇಷ್ಟ, ದೀಪನ, ಕ್ರಿಮಿಘ್ನ, ಮುಖಗಂಧಕ, ವಿಶ್ವಗಂಧಕ, ರೋಚನ ಇತ್ಯಾದಿಗಳು. ಈರುಳ್ಳಿ ಒಂದು ಕುರುಚಲ ಗಿಡ. ಇದು ಸುಮಾರು 60 ರಿಂದ 90 ಸೆಂಟಿಮೀಟರ್‍ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಎಲೆಯು ದಪ್ಪವಾಗಿ, ಮೃದುವಾಗಿ ವೃತ್ತವಾಗಿ ಹಸಿರುಬಣ್ಣದಿಂದ ಕೂಡಿದೆ. ಈ ದ್ರವ್ಯವು ಬಿಳಿ ಬಣ್ಣದ ಹೂಗಳನ್ನು ಬಿಡುತ್ತದೆ. ಈ ದ್ರವ್ಯವು ಹೂವು ಹಣ್ಣನ್ನು ಚಳಿಗಾಲದಲ್ಲಿ ಬಿಡುತ್ತದೆ. ಈರುಳ್ಳಿ ಗಡ್ಡೆಯನ್ನು ಔಷಧ ತಯಾರಿಕೆಗೆ ಉಪಯೋಗಿಸುತ್ತಾರೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುವ ಈರುಳ್ಳಿಯನ್ನು ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

ಈರುಳ್ಳಿಯಲ್ಲಿ ಬಿಳಿ ಈರುಳ್ಳಿ ಮತ್ತು ಕೆಂಪು ಈರುಳ್ಳಿ ಎಂಬ ಎರಡು ವಿಧಗಳಿವೆ. ಬಿಳಿ ಈರುಳ್ಳಿಯನ್ನು ಔಷಧಗಳಿಗೆ ಹೆಚ್ಚಾಗಿ ಬಳಸುತ್ತಾರೆ. ಈರುಳ್ಳಿ ಗಡ್ಡೆ ಮತ್ತು ಬೀಜಗಳು ಉಪಯುಕ್ತ ಅಂಶಗಳಾಗಿವೆ. ಈರುಳ್ಳಿಯ ರಸವನ್ನು ಮೂಗಿಗೆ ಬಿಡುವುದರಿಂದ ಮೂಗಿನಿಂದ ಬರುವ ರಕ್ತಸ್ರಾವವು ನಿವಾರಣೆಯಾಗುತ್ತದೆ. ಈರುಳ್ಳಿ ಸೇವನೆಯಿಂದ ರಕ್ತದ ಮೂಲವ್ಯಾಧಿಗೆ ಒಳ್ಳೆಯದು. ಈರುಳ್ಳಿಯ ರಸವನ್ನು ತಾಯಿಯ ಎದೆಹಾಲಿನಲ್ಲಿ ಬೆರೆಸಿ ಮೂಗಿಗೆ ಬಿಡುವುದರಿಂದ ಉಬ್ಬಸ, ಕೆಮ್ಮು ರೋಗವು ನಿವಾರಣೆಯಾಗುತ್ತದೆ. ಕಾಲಿನ ಹಿಮ್ಮಡಿಯ ಸೀಳಿದರೆ, ಹಸಿ ಈರುಳ್ಳಿಯನ್ನು ಸೀಳಿರುವ ಜಾಗಕ್ಕೆ ತಿಕ್ಕಬೇಕು. ಕಾಲರಾ ರೋಗದಿಂದ ಬಳಲುತ್ತಿರುವವರು ಈರುಳ್ಳಿ ರಸವನ್ನು ಗಂಟೆ ಗಂಟೆಗೆ ಸ್ವಲ್ಪ ಸ್ವಲ್ಪ ಕುಡಿಯಬೇಕು. ಹೀಗೆ ಮಾಡುವುದರಿಂದ ರೋಗವು ಬೇಗ ನಿವಾರಣೆಯಾಗಿ ಹೊಟ್ಟೆಯಲ್ಲಿರುವ ಹುಳಗಳು ಬೇಗ ಸಾಯುತ್ತದೆ.

ಈರುಳ್ಳಿಯನ್ನು ಚೇಳು ಕಚ್ಚಿದ ಸ್ಥಳಕ್ಕೆ ತಿಕ್ಕುವುದರಿಂದ ವಿಷ ಇಳಿಯುತ್ತದೆ. ಈರುಳ್ಳಿ ರಸ, ತುಪ್ಪ ಮತ್ತು ಸಕ್ಕರೆ ಬೆರೆಸಿ ಸೇವಿಸುವುದರಿಂದ ಮೂಲವ್ಯಾಧಿಯು ನಿವಾರಣೆಯಾಗುತ್ತದೆ. ಬಿಳಿ ಈರುಳ್ಳಿ ರಸ, ಬೆಲ್ಲ, ಅರಿಸಿನವನ್ನು ಬೆರೆಸಿ ಮೂಗಿಗೆ ನಶ್ಯದಂತೆ ಏರಿಸಿದರೆ ಕಾಮಾಲೆ ರೋಗದಿಂದ ಗುಣವನ್ನು ಕಾಣಬಹುದು. ಈರುಳ್ಳಿ ರಸವನ್ನು ಸ್ವಲ್ಪ ಕಾಯಿಸಿ, ಅದು ತಣ್ಣಗಾದ ಮೇಲೆ ಕಿವಿಗೆ ಬಿಡುವುದರಿಂದ ಕಿವಿನೋವು, ಕಿವಿಯಲ್ಲಿ ಶಬ್ದ, ಕಿವಿ ಸೋರುವುದು ಮುಂತಾದ ತೊಂದರೆಯಿಂದ ಮುಕ್ತಿ ದೊರಕುತ್ತದೆ. ಬಿಳಿ ಈರುಳ್ಳಿ ರಸವನ್ನು ಮೂಗಿಗೆ ಬಿಡುವುದರಿಂದ ಮತ್ತು ಕಣ್ಣಿಗೆ ಹಚ್ಚುವುದರಿಂದ ಮೂರ್ಛೆರೋಗವು ಗುಣವಾಗುತ್ತದೆ. ಈರುಳ್ಳಿ ರಸಕ್ಕೆ ಉಪ್ಪು, ಕರಿಮೆಣಸಿನ ಪುಡಿ, ನಿಂಬೆರಸ ಬೆರೆಸಿ ಸೇವಿಸುವುದರಿಂದ ವಿಟಮಿನ್ ಗಳು ದೇಹಕ್ಕೆ ದೊರಕುತ್ತದೆ.

ಈರುಳ್ಳಿರಸ ಅಥವಾ ಲೇಪವನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮರೋಗವು ನಿವಾರಣೆಯಾಗುತ್ತದೆ. ಈರುಳ್ಳಿರಸವನ್ನು ಅಂಜನ ಮಾಡಿ ಕಣ್ಣಿಗೆ ಹಚ್ಚುವುದರಿಂದ ದೃಷ್ಟಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ. 2 ರಿಂದ 3 ಹನಿ ಈರುಳ್ಳಿ ರಸವನ್ನು ಜೇನಿನಲ್ಲಿ ಕಲಸಿ ಮಕ್ಕಳಿಗೆ ತಿನ್ನಿಸಿದರೆ ಮಕ್ಕಳ ಹೊಟ್ಟೆನೋವು ಗುಣವಾಗಿ ಹೊಟ್ಟೆಹುಳಗಳ ಸಮಸ್ಯೆ ಮಾಯವಾಗುತ್ತದೆ. ಪ್ರತಿನಿತ್ಯ ಹಸಿ ಈರುಳ್ಳಿಯನ್ನು ಸೇವಿಸಿದರೆ ಹೃದಯಕ್ಕೆ ಒಳ್ಳೆಯದು. ಸುಟ್ಟ ಈರುಳ್ಳಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಇಲ್ಲವಾಗುತ್ತದೆ.
ಇಷ್ಟೆಲ್ಲಾ ಉಪಯೋಗಗಳಿರುವ ಈರುಳ್ಳಿಯನ್ನು ಬರೀ ಬಾಯಿ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ತಿನ್ನದೇ ಹೋದರೆ ನಷ್ಟ ನಿಮ್ಮ ಆರೋಗ್ಯಕ್ಕೆ.. ಹೀಗಾಗಿ ಈರುಳ್ಳಿ ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳಿ.

ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು

 

 

ಶ್ರೀ ಅನ್ನಪೂರ್ಣೆಶ್ವರಿ ಜ್ಯೋತಿಷ್ಯ ಪೀಠಂ
ಶ್ರೀ ಮಹಾ ಕಾಲ ಭೈರವ
ದೈವಜ್ಞ ಪಂಡಿತ್ ಗಜೇಂದ್ರ ಅವಧಾನಿಗಳು
ವಿಳಾಸ – ಡಿವಿಜಿ ರೋಡ್, ಬಸವನಗುಡಿ ಬೆಂಗಳೂರು
ಸರ್ವ ಸಮಸ್ಯೆಗಳಿಗೆ ಗುರುಗಳನ್ನು ಒಮ್ಮೆ ಭೇಟಿ ಕೊಡಿ
ಸಂಪರ್ಕಿಸಿ – 9538175275

Tags: indiaOnionತರಕಾರಿ ಈರುಳ್ಳಿ
ShareTweetSendShare
Join us on:

Related Posts

ಮೋದಿ ಹಾವಾಡಿಗನಲ್ಲ ಭಾರತದ ಗತ್ತಿನ ಸಂಕೇತ: ನಾರ್ವೆ ಪತ್ರಿಕೆಯ ಜನಾಂಗೀಯ ಕುಚೇಷ್ಟೆಗೆ ಭಾರೀ ಆಕ್ರೋಶ

ಮೋದಿ ಹಾವಾಡಿಗನಲ್ಲ ಭಾರತದ ಗತ್ತಿನ ಸಂಕೇತ: ನಾರ್ವೆ ಪತ್ರಿಕೆಯ ಜನಾಂಗೀಯ ಕುಚೇಷ್ಟೆಗೆ ಭಾರೀ ಆಕ್ರೋಶ

by Shwetha
May 21, 2026
0

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಪ್ರವಾಸವು ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಸಂಬಂಧಗಳಿಗಿಂತ ಹೆಚ್ಚಾಗಿ ಪಾಶ್ಚಿಮಾತ್ಯ ಮಾಧ್ಯಮಗಳ ಹಳೆಯ ಚಾಳಿ ಮತ್ತು ಪೂರ್ವಾಗ್ರಹ ಪೀಡಿತ ಧೋರಣೆಗಳಿಂದ...

‘ಮೆಲೋಡಿ ಗಿಫ್ಟ್’ ವಿವಾದ: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

‘ಮೆಲೋಡಿ ಗಿಫ್ಟ್’ ವಿವಾದ: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

by Shwetha
May 21, 2026
0

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇಟಲಿ ಪ್ರಧಾನಿಗೆ ಚಾಕೊಲೇಟ್ ಉಡುಗೊರೆ ನೀಡಿದ ವೈರಲ್ ವಿಡಿಯೋವನ್ನು ಟೀಕಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ...

ಪ್ರಧಾನಿ ಪ್ರಶ್ನೆಗಳಿಂದ ಓಡಿಹೋಗುವುದು ದೇಶದ ವರ್ಚಸ್ಸಿಗೆ ಧಕ್ಕೆ: ರಾಹುಲ್ ಗಾಂಧಿ

ಪ್ರಧಾನಿ ಪ್ರಶ್ನೆಗಳಿಂದ ಓಡಿಹೋಗುವುದು ದೇಶದ ವರ್ಚಸ್ಸಿಗೆ ಧಕ್ಕೆ: ರಾಹುಲ್ ಗಾಂಧಿ

by Shwetha
May 21, 2026
0

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸದ ನಡುವೆಯೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾರ್ವೆ ಪ್ರಧಾನಿ ಜೊನಸ್ ಗಹ್ರ್ ಸ್ಟೋರ್...

ಡಿಕೆ-ನಿಖಿಲ್ ನಡುವೆ ಟಾಕ್ ವಾರ್: 136 ಎಂಎಲ್ಎ ಇಟ್ಟುಕೊಂಡು ಏನು ಹರಿದಿರಿ?

ಡಿಕೆ-ನಿಖಿಲ್ ನಡುವೆ ಟಾಕ್ ವಾರ್: 136 ಎಂಎಲ್ಎ ಇಟ್ಟುಕೊಂಡು ಏನು ಹರಿದಿರಿ?

by Shwetha
May 21, 2026
0

ಡಿಕೆ. ಶಿವಕುಮಾರ್ ಹಾಗೂ ನಿಖಿಲ್ ಕುಮಾರಸ್ವಾಮಿ ನಡುವಿನ ವಾಕ್ಸಮರ ಇದೀಗ ಮತ್ತಷ್ಟು ತೀವ್ರಗೊಂಡಿದೆ. ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ಕೇಂದ್ರ ಸಚಿವ...

ಗೋಹತ್ಯೆ ನಿಷೇಧ ಕಾಯ್ದೆ ರದ್ದತಿಗೆ ಮುಸ್ಲಿಂ ಸಂಘಟನೆಗಳ ಪಟ್ಟು: ಸಿದ್ದರಾಮಯ್ಯ ಸರ್ಕಾರಕ್ಕೆ ಅಗ್ನಿಪರೀಕ್ಷೆ

ಗೋಹತ್ಯೆ ನಿಷೇಧ ಕಾಯ್ದೆ ರದ್ದತಿಗೆ ಮುಸ್ಲಿಂ ಸಂಘಟನೆಗಳ ಪಟ್ಟು: ಸಿದ್ದರಾಮಯ್ಯ ಸರ್ಕಾರಕ್ಕೆ ಅಗ್ನಿಪರೀಕ್ಷೆ

by Shwetha
May 21, 2026
0

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಮುಸ್ಲಿಂ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram