ರಾಜ್ಯಕ್ಕೆ ಮತ್ತೆ ಎರಡು ಡಿಸಿಎಂ ಸ್ಥಾನ ಸೃಷ್ಟಿ ???
ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ರಾಜ್ಯಕ್ಕೆ ಮತ್ತೆ ಎರಡು ಡಿಸಿಎಂ ಸ್ಥಾನಗಳನ್ನ ಸೃಷ್ಟಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಆದರೆ ಯಾರು ಈ ಡಿ ಸಿ ಎಂ ಸ್ಥಾನದಲ್ಲಿ ಕೂರಲಿದ್ದಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಬಿಟ್ ಕಾಯಿನ್ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿರುವ ನಡುವೆಯೇ ಎಚ್ಚೆತ್ತಿರುವ ಬಿಜೆಪಿ ವರಿಷ್ಠರು ವಿರೋಧ ಪಕ್ಷಗಳನ್ನ ಎದುರಿಸಲು ಮತ್ತು ಪ್ರಬಲವಾಗಿ ಪಕ್ಷದ ಪರವಾಗಿ ನಿಲ್ಲಲು ಸಮರ್ಥರನ್ನು ಡಿಸಿಎಂ ಹುದ್ದೆಗೆ ತರಲು ನಿರ್ಧರಿಸಿದ್ದಾರೆ ಎಂದು ದೆಹಲಿ ಮೂಲಗಳು ತಿಳಿಸಿವೆ.
ಬಸವರಾಜ್ ಬೊಮ್ಮಾಯಿಯವರು ದೆಹಲಿ ಪ್ರವಾಸದ ನಂತರ ಜಗದೀಶ್ ಶೇಟ್ಟರ್ ಅವರನ್ನ ಬಿಜೆಪಿ ಹೈ ಕಂಮಾಂಡ್ ದಿಢೀರ್ ಅಂತ ಕರೆಸಿಕೊಂಡಿದ್ದು ಸಹ ಚರ್ಚೆ ಹುಟ್ಟಿಕೊಳ್ಳಲು ಕಾರಣವಾಗಿದೆ.
ಬಸವರಾಜ ಬೊಮ್ಮಾಯಿ ಅವರು ಏಕಾಂಗಿಯಾಗಿ ವಿಪಕ್ಷದ ಟೀಕೆಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ಪಕ್ಷದಲ್ಲಿ ಹಾಗೂ ರಾಜ್ಯ ನಾಯಕರಲ್ಲಿ ಭಿನ್ನಾಭಿಪ್ರಾಯಗಳು ಕೂಡ ಹುಟ್ಟಿ ಕೊಳ್ಳುತ್ತಿವೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಬಲ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಲು ಪಕ್ಷ ನಿರ್ಧರಿಸಿದೆ.