ಸುಶಾಂತ್ ಸಾವಿನ ಬಳಿಕ ಹಲವರ ವಿರುದ್ಧ ಗಂಭೀರವಾಗಿ ಆರೋಪ ಮಾಡುತ್ತಲೇ ಸುದ್ದಿಯಲ್ಲಿರುವ ಕಂಗನಾ ರಣಾವತ್ ನಿವಾಸದ ಬಳಿ ಗುಂಡಿನ ಸದ್ದು ಕೇಳಿಬಂದಿದೆ. ಮನಾಲಿಯ ನಿವಾಸದ ಬಳಿ ಗುಂಡಿನ ಸದ್ದು ಕೇಳಿಬಂದಿದ್ದು ಈ ಬಗ್ಗೆ ಕಂಗನಾ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅಲ್ದೇ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನಿಡಿರುವ ಕಂಗನಾ ಶುಕ್ರವಾರ ತಡರಾತ್ರಿ 11.30ರ ಸಮಯಕ್ಕೆ ಮನಯ ಆವರಣದಲ್ಲಿ ಗುಂಡಿನ ಸದ್ದು ಕೇಳಿಬಂದಿರುವುದಾಗಿ ತಿಳಿಸಿದ್ದಾರೆ. ಅಲ್ದೇ ಇತ್ತೀಚೆಗೆ ನಾನು ರಾಜಕೀಯವಾಗಿ ಹಾಗೂ ದೊಡ್ಡ ದೊಡ್ಡ ಕುಳಗಳ ವಿರುದ್ಧವೂ ಹೇಳಿಕೆಗಳನ್ನು ನೀಡ್ತಿದ್ದು, ಯಾರೋ ನನಗೆ ವಾರ್ನಿಂಗ್ ಕೊಡಲೆಂದೇ ಈ ರೀತಿ ಮಾಡಿದ್ದಾರೆ. ಆದ್ರೆ ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಮಡು ಸುಮ್ಮನೆ ಕೂರುವುದಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲ ಕಂಗನಾ ಟೀಂ ಬೇರೆಯದ್ದೇ ರೀತಿಯಾದ ಚರ್ಚೆಗಳಲ್ಲಿ ತೊಡಗಿದೆ. ಇತ್ತೀಚೆಗೆ ಆದಿತ್ಯ ಠಾಕ್ರೆ ಅವರ ಬಗ್ಗೆಯೂ ಕಂಗನಾ ಮಾತನಾಡಿದ್ದು, ಆ ಕಾರಣದಿಂದಲೇ ದಾಳಿ ಯತ್ನ ನಡೆದಿದೆ ಎಂದು ಆರೋಪಗಳನ್ನು ಮಾಡುತ್ತಿದ್ದಾರೆ.
Parrot’s testimony : ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ….
parrot's testimony : ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ…. ಆಗ್ರಾ: ಒಂಬತ್ತು ವರ್ಷಗಳ ಹಿಂದಿನ ಕೊಲೆ ಪ್ರಕರಣದ ಸಾಕ್ಷಿಯೊಬ್ಬರು ನೀಡಿದ ಹೇಳಿಕೆಯನ್ನ ಆಧರಿಸಿ...