ಮಡಿಕೇರಿ: ಕ್ರೀಡೆಗಳ ತವರು ಕೊಡಗು ಜಿಲ್ಲೆ ಹಾಕಿಯ ತವರೂರು. ಹಾಕಿಯ ಜತೆಗೆ ಕ್ರಿಕೆಟ್ ಕ್ಷೇತ್ರಕ್ಕೂ ಕೊಡಗು ಜಿಲ್ಲೆಯ ಅನೇಕ ಮುತ್ತುರತ್ನಗಳನ್ನು ನೀಡಿದೆ. ಅವರಲ್ಲಿ ಕೊಡಗಿನ ದಂತಕತೆ ಬೆಳ್ಯಪ್ಪ ಕೂಡ ಒಬ್ಬರು.
ರಾಷ್ಟ್ರೀಯ ಹಾಕಿ ತಂಡದಲ್ಲಿ 6-7 ಮಂದಿ ಹಾಕಿ ಪಟುಗಳು ಕೊಡಗಿನವರೇ ಇದ್ದಾರೆ. ಹಾಗೆ ಇತರ ಕ್ರೀಡೆಯಲ್ಲೂ ಸಾಕಷ್ಟು ಮಂದಿ ದೇಶವನ್ನು ಪ್ರತಿನಿಧಿಸಿದ್ದವರು ಕೊಡಗಿನವರೇ ಆಗಿದ್ದಾರೆ ಎನ್ನುವುದು ಇಲ್ಲಿನವರ ಹೆಮ್ಮೆಯ ವಿಷಯ.
ಕ್ರಿಕೆಟ್ ನಲ್ಲಿ ರಾಬಿನ್ ಉತ್ತಪ್ಪ, ಅಯ್ಯಪ್ಪ.. ಹೀಗೆ ಕೆಲ ಕ್ರಿಕೆಟಿಗರು ಜನ ಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಒಂದು ಕಾಲದಲ್ಲಿ ಅಂದರೆ 60-70 ದಶಕದಲ್ಲಿ ವೈಟ್ ಜರ್ಸಿನಲ್ಲಿ ಕ್ರಿಕೆಟ್ ಮೂಲಕ ದೇಶಕ್ಕೆ ಕೀರ್ತಿ ತಂದವರಲ್ಲಿ ಕೊಡಗಿನವರೇ ಆದ ಬೆಳ್ಯಪ್ಪ ಕೂಡಾ ಒಬ್ಬರು.
ಉತ್ತಮ ಪ್ರದರ್ಶನ ನೀಡಿದರೂ ಕರ್ನಾಟಕ ತಂಡದಲ್ಲಿ ಅವಕಾಶ ಸಿಗದೆ ನೆರೆಯ ತಮಿಳುನಾಡಿನಲ್ಲಿ ನೆಲೆ ಕಂಡುಕೊಂಡವರು ಬೆಳ್ಯಪ್ಪ. ಅಂದಿನ ಮದ್ರಾಸ್ ತಂಡದ ನಾಯಕನಾಗಿ ಬೆಳೆದವರು ಕೊಡಗಿನ ದಂತಕಥೆ ಅಂದರೆ ಅದು ಬೆಳ್ಯಪ್ಪ.
ಬೆಳ್ಯಪ್ಪರ ಹೈಲೈಟ್ಸ್..
ನಾಯಕ: ಮದ್ರಾಸ್ ತಂಡ
ಓಪನಿಂಗ್ ಬ್ಯಾಟ್ಸ್ಮನ್, ವಿಕೆಟ್ ಕೀಪರ್
94 ಪ್ರಥಮ ದರ್ಜೆ ಕ್ರಿಕೆಟ್ಗಳಲ್ಲಿ ಆಟ
ಒಟ್ಟು ರನ್: 4061 ರನ್
ಆವರೇಜ್: 29.42
ಗರಿಷ್ಟ ರನ್: 141
ಕೀಪರ್: 93 ಕ್ಯಾಚ್, 46 ಸ್ಟಂಪ್
1959ರಲ್ಲಿ ತಮ್ಮ ಕ್ರಿಕೆಟ್ ಜೀವನ ಆರಂಭಿಸಿದ ಬೆಳ್ಯಪ್ಪ 1974ರವರೆಗೂ ಮದ್ರಾಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಬೆಳ್ಯಪ್ಪ ಮದ್ರಾಸ್ ತಂಡದ ಆಸರೆಯಂತೆ ಇದ್ದವರು. ಓಪನಿಂಗ್ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಆಗಿಯೂ ಕಡೆತನಕ ತಮ್ಮ ಸಾಮರ್ಥ್ಯ ಮೆರೆದಿದ್ದಾರೆ. 94 ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಬೆಳ್ಯಪ್ಪ, 4061 ರನ್ ಗಳಿಸಿದ್ದಾರೆ. ಇವರ ಆವರೇಜ್ 29.42. ಆದರೆ ಇವರ ಗರಿಷ್ಟ ರನ್ 141, ಕೀಪರ್ ಆಗಿ 93 ಕ್ಯಾಚ್,46 ಸ್ಟಂಪಿಂಗ್ ಮಾಡಿದ್ದಾರೆ.
ಇವರ ಜೊತೆ ಸತತ 20 ವರ್ಷ ತಂಡವನ್ನು ಪ್ರತಿನಿಧಿಸಿಧ್ದ ವಿ.ವಿ ಕುಮಾರ್ ಪ್ರಕಾರ, ಬೆಳ್ಯಪ್ಪ ಮದ್ರಾಸ್ ತಂಡಕ್ಕೆ ಸ್ಪೂರ್ತಿಯಾಗಿದ್ದರು. ಬೆಳ್ಯಪ್ಪ ಮೈದಾನದಲ್ಲಿ ಇರಲಿ, ಇಲ್ಲದಿರಲಿ ತಂಡಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. 60ನೇ ದಶಕ ಕಂಡ ಮದ್ರಾಸ್ ತಂಡದ ಅತ್ಯುತ್ತಮ ನಾಯಕರಾಗಿದ್ದಾರು. ಬೆಳ್ಯಪ್ಪ ಅವರ ಮಾರ್ಗದರ್ಶನದಲ್ಲಿ ಹಲವು ಪಂದ್ಯಗಳನ್ನು ಗೆದ್ದಿದೇವೆ” ಎನ್ನುತ್ತಾರೆ.
ಮತ್ತೊಬ್ಬ ವೇಗದ ಬೌಲರ್ ಕಲ್ಯಾಣ ಸುಂದರಂ ಪ್ರಕಾರ “ನಾನು ಮೊದಲ ರಣಜಿ ಪಂದ್ಯ ಆಡುವ ಸಂದರ್ಭ, ಆಕ್ರಮಣಕಾರಿ ಬ್ಯಾಟ್ಸ್ ಮನ್ ಗಳಿಗೆ ಆಕ್ರಮಣ ಮಾಡುವುದನ್ನು ಸಲಹೆ ನೀಡುತ್ತಿದ್ದರು. ಅದರಂತೆ ಸಫಲವೂ ಆಗುತ್ತಿದ್ದೆ. ಒಂದು ದಿನ ಅಂತರ ಜಿಲ್ಲಾ ಪಂದ್ಯಾವಳಿ ಸಂದರ್ಭ ಅನಾರೋಗ್ಯದಲ್ಲಿದ್ದೆ. ಆದರೂ ನನ್ನನ್ನು ಐದು ಓವರ್ ಬೌಲ್ ಮಾಡಲು ಹೇಳಿ ನನ್ನನ್ನು ರಾಜ್ಯಮಟ್ಟದ ತಂಡಕ್ಕೆ ತಲಪುವಂತೆ ಮಾಡಿದ್ದರು ಅವರು”.
ಗಾಲ್ಫ್ ಪ್ರಿಯರೂ ಆಗಿದ್ದ ಬೆಳ್ಯಪ್ಪ, ಬಿಡುವಿನ ವೇಳೆಯಲ್ಲಿ ಹಾರಿಂಗ್ಟನ್ ರಸ್ತೆಯಲಿದ್ದ ಗಾಲ್ಫ್ ಆಡುತ್ತಿದ್ದರು. ಅಂದಹಾಗೆ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಭರತ್ ರೆಡ್ಡಿ ಇವರ ಖಾಸಾ ಸ್ನೇಹಿತ.
ಇಂತಹ ಕೊಡಗಿನ ದಂತಕಥೆ ತೆರೆಮರೆಯಲ್ಲೆ 79 ವರ್ಷಕ್ಕೆ ಇಹಲೋಕ ತ್ಯಜಿಸಿ ಕ್ರಿಕೆಟ್ ಲೋಕದ ಪಯಣ ಮುಗಿಸಿದ್ದಾರೆ.
ವಿಶೇಷ ವರದಿ: ಗಿರಿಧರ್ ಕೊಂಪುಳೀರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel