ಖಾಸಗಿ ಲಾಡ್ಜ್ ನಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ Saaksha Tv
ಹಾಸನ : ಬಿಎಸ್ಪಿ ಲಾಡ್ಜ್ ನ ರೂಂವೊಂದರಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆಯು ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನಲ್ಲಿ ನಡೆದಿದೆ.
ಲಕ್ಷ್ಮಣ್, ಸುಶ್ಮಿತಾ ಹಾಗೂ ದಿಲೀಪ್ ಕೊಲೆಮಾಡಿದ ಆರೋಪಿಗಳು ಎಂದು ತಿಳಿದು ಬಂದಿದೆ. ಕೊಲೆಯಾದ ವ್ಯಕ್ತಿ ಹರೀಶ್ ಎಂದು ತಿಳಿದಿದ್ದು, ಈತನು ದಿಲೀಪ್ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಸುಶ್ಮಿತಾ ಬೆಂಗಳೂರಿನಲ್ಲಿ ಏರ್ ಟೆಲ್ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದರು.
ಇವರ ಅನೈತಿಕ ಸಂಭಂದವನ್ನು ತಿಳದಿದ್ದ ಆರೋಪಿ ಲಕ್ಷ್ಮಣ ಕೊಣನೂರಿನ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಹರೀಶ ಹೆಸರಿನಲ್ಲಿ ಲಾಡ್ಜನಲ್ಲಿ ರೂಂ ಬುಕ್ ಮಾಡಿದ್ದ. ರೂಂ ನಲ್ಲಿ ದಿಲೀಪ, ಲಕ್ಷ್ಮಣ, ಸುಶ್ಮಿತಾ ಇದ್ದರು. ಈ ಸಮಯದಲ್ಲಿ ಹರೀಶನ್ನು ಮಾತುಕತೆಗೆ ಕರೆಸಿದ್ದಾರೆ. ಮಾತುಕತೆ ವೇಳೆ ಹರೀಶನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಕ್ಷ್ಮಣ್ ನನ್ನು ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಹಾಗೂ ಆತನ ಪತ್ನಿ ಸುಶ್ಮಿತಾ ಬಂಧನಕ್ಕೆ ಬಲೆ ಬೀಸಿದ್ದಾರೆ.