ಕೊರೊನಾ ಹರಡದಂತೆ ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಜೊತೆಗೆ ಹೊರ ರಾಜ್ಯದಿಂದ ಬರುವವರಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ವಿದೇಶದಿಂದ ಬರುವವರನ್ನು 15 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಬೇಕು ಎಂದು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಅದಕ್ಕಾಗಿ ವಿದೇಶದಿಂದ ಬಂದವರನ್ನು ಗುರುತಿಸಲು ಸೀಲ್ ಹಾಕುವ ಪ್ಲ್ಯಾನ್ ಮಾಡಿತ್ತು. ಸೀಲ್ ಹಾಕುವ ಮೂಲಕ ವಿದೇಶದಿಂದ ಬಂದವರು ಯಾವ ದಿನದಿಂದ ಯಾವ ದಿನಾಂಕದವರೆಗೂ ಕ್ವಾರಂಟೈನ್ ನಲ್ಲಿ(ಗೃಹ ದಿಗ್ಬಂಧನ) ಇರಬೇಕು ಎಂದು ಹೇಳಿತ್ತು. ಕೊರೋನಾ ಪೀಡಿತರಿಲ್ಲದವರ ಸುರಕ್ಷಿತೆಗಾಗಿ ಇದನ್ನ ಪಾಲಿಸಬೇಕಿದೆ ಎಂದು ಸರ್ಕಾರ ಹೇಳಿತ್ತು. ಇದೀಗ ಹಾಕಿರುವ ಸೀಲ್ ಎಷ್ಟರಮಟ್ಟಿಗೆ ಪರಿಣಾಮಾಕಾರಿ ಎನ್ನುವ ಪ್ರಶ್ನೆ ಕಾಡುತ್ತಿದೆ. ಹೌದು Proud to Protect Bengaluru ಮತ್ತು ದಿನಾಂಕ ನಮೂದಿಸಿದ ಸೀಲ್ ಅಳಿಸಿ ಹೋಗುತ್ತಿದಿಯಂತೆ. ಹಾಗಾಂತ ಸ್ವತಃ ಸೀಲ್ ಹಾಕಿಸಿಕೊಂಡವರೇ ಪೋಟೋ ಕ್ಲಿಕ್ಕಿಸಿ ವೈರಲ್ ಮಾಡಿದ್ದಾರೆ. ಅಲ್ಲದೆ ಮಾರ್ಚ್ 21 ಕ್ಕೆ ಹಾಕಿರುವ ಸೀಲ್, ಮಾರ್ಚ್ 23ಕ್ಕೆ ಅಳಸಿ ಹೋಗಿದೆ. ಇದರಿಂದಾಗಿ ಆರೋಗ್ಯ ಇಲಾಖೆ ಮಾಡುತ್ತಿರುವ ಎಡವಟ್ಟು ಕಂಡು ಬಂದಿದೆ.
2028ರ ಮೈತ್ರಿ ಚರ್ಚೆ: ಬಿಜೆಪಿ ಜಿಲ್ಲಾ ಘಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ
2028ರ ವಿಧಾನಸಭಾ ಚುನಾವಣೆಗೆ ಜೆಡಿಎಸ್–ಬಿಜೆಪಿ ಮೈತ್ರಿ ವಿಚಾರವಾಗಿ ರಾಜಕೀಯ ಸಂದೇಶಗಳು ಹೊರಬರುತ್ತಿರುವ ಹಿನ್ನೆಲೆ, ಬಿಜೆಪಿಯ ಜಿಲ್ಲಾ ಘಟಕದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಾಗಿದೆ...








