ಕೊರೊನಾ ವಿಚಾರದಲ್ಲಿ ಜನರ ಜವಾಬ್ದಾರಿ ದೊಡ್ಡದು : ಬಿ.ಸಿ.ಪಾಟೀಲ್
ಕೊಪ್ಪಳ : ಕೊರೊನಾ ವಿಚಾರದಲ್ಲಿ ಜನರ ಜವಾಬ್ದಾರಿ ದೊಡ್ಡದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಲಾಕ್ ಡೌನ್ ವಿಚಾರವಾಗಿ ಕೊಪ್ಪಳ ತಾಲೂಕು ಗಿಣಗೇರಿ ಕೆರೆ ಬಳಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಲಾಕ್ಡೌನ್ ಮಾಡಲ್ಲ ಎಂದು ನಿನ್ನೆ ಸಿಎಂ ಹೇಳಿದ್ದಾರೆ.
ಜನ ಸಾಮಾನ್ಯರ ಜವಾಬ್ದಾರಿಯೂ ದೊಡ್ಡದು, ಜನ ಅರ್ಥ ಮಾಡ್ಕೋಬೇಕು. ಜನರು ಸಹಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಇನ್ನು ಜನರು ಕಳೆದ ವರ್ಷ ಸಮಸ್ಯೆ ಅನುಭವಿಸಿದ್ದಾರೆ. ಜನ ಸಹಕರಿಸದಿದ್ದರೆ ಲಾಕ್ಡೌನ್ ಅನಿವಾರ್ಯ ಆಗುತ್ತದೆ ಎಂದು ಲಾಕ್ ಡೌನ್ ಬಗ್ಗೆ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದರು.
ಇನ್ನು ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿ.ಸಿ.ಪಾಟೀಲ್, ಈಶ್ವರಪ್ಪ-ಸಿದ್ದರಾಮಯ್ಯ ಇಬ್ಬರೂ ಮದ್ದಾನೆ ಇದ್ದಂತೆ.
ಮದ್ದಾನೆ ಗುದ್ದಾಡುವಾದ ಗುಬ್ಬಿ ಬುದ್ದಿ ಹೇಳಬಾರದು. ಅವರವರ ಮಾತುಗಳಿಗೆ ಅವರವರೇ ಪ್ರತಿಕ್ರಿಯೆ ಕೊಡ್ತಾರೆ. ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ ಎಂದು ಪ್ರಶ್ನಿಸಿದರು.