ನವರಾತ್ರಿಯ ಮೊದಲನೆಯ ದಿನ ಶೈಲಪುತ್ರಿಯನ್ನು ಆರಾಧಿಸಲ್ಪಟ್ಟರೆ, ಎರಡನೆಯ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. “ಬ್ರಹ್ಮಚಾರಿಣಿ” ಎಂಬ ಹೆಸರು ಎರಡು ಪದಗಳಿಂದ ಉತ್ಪತ್ತಿಯಾಗಿದೆ. *ಇಲ್ಲಿ “ಬ್ರಹ್ಮ” ಎಂದರೆ ತಪಸ್ಸು, “ಚಾರಿಣಿ” ಎಂದರೆ ಕಟ್ಟಾ ಸ್ತ್ರೀ ಅನುಯಾಯಿ ಎಂಬರ್ಥವನ್ನು ಕೊಡುತ್ತದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಬ್ರಹ್ಮಚಾರಿಣಿ ಎಂಬ ಪದವು ಸೌಮ್ಯಳೂ, ಶಾಂತ ಸ್ವಭಾವದವಳಾಗಿದ್ದು, ಆತ್ಮವಿಶ್ವಾಸವನ್ನು ವೃದ್ಧಿಸುವಳು. ಹಾಗೆಯೇ ದೇವಿಯ ಕಾರ್ಯಗಳ ಮೂಲಕ ಮೋಕ್ಷವನ್ನು ಸಿದ್ಧಿಸಿಕೊಳ್ಳಬಹುದು. ಈಕೆಯು ಕೈಯಲ್ಲಿ ಗುಲಾಬಿ ಹೂವನ್ನು ಧರಿಸಿದ್ದು, ಅದರ ಜೊತೆಗೆ ಒಂದು ಕೈಯಲ್ಲಿ ಜಪಮಾಲೆ ಹಾಗೂ ಮತ್ತೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುವಳು. ಶ್ವೇತವಸ್ತ್ರಧಾರಿಣಿಯಾಗಿರುವ ಮಲ್ಲಿಗೆ ಪ್ರಿಯಳೂ ಆಗಿರುವ ಬ್ರಹ್ಮಚಾರಿಣಿಯು ತನ್ನ ಭಕ್ತರಿಗೆ ಸಂತೋಷ ಮತ್ತು ಜ್ಞಾನವನ್ನು ನೀಡುವಳು. ಇವಳು ಕುಜ ಗ್ರಹದ ಅಧಿಪತಿಯೂ ಹೌದು. ಇವಳ ಆರಾಧನೆಯಿಂದ ಅದೃಷ್ಟವೂ ಒದಗುವುದರ ಜೊತೆಗೆ ನಮ್ಮ ಮಾನಸಿಕ ಕ್ಷೋಭೆಯನ್ನು ಪರಿಹರಿಸಿ ನೆಮ್ಮದಿಯನ್ನು ದಯಪಾಲಿಸುವಳು. ಹಾಗೆಯೇ ಇವಳ ಆರಾಧನೆಯು ತಪಸ್ಸಿಗೆ ಸಮವಾಗಿದ್ದು ನಮ್ಮ ಆತ್ಮದೊಳಗಿನ ದುರ್ಗುಣಗಳು ಅವನತಿಯನ್ನು ಕಾಣಲು ಆರಂಭವಾಗಿ ಸದ್ಗುಣಗಳು ಮತ್ತು ಉದಾತ್ತವಾದ ಮನೋಭಾವನೆ ಬೆಳೆಯಲು ಆರಂಭವಾಗುತ್ತದೆ. ನಮ್ಮ ಯಶಸ್ಸಿಗೆ ತೊಡಕಾಗಿರುವ ಎಲ್ಲಾ ಬಗೆಯ ತೊಡಕುಗಳು ನಿವಾರಣೆಯಾಗಿ ಮನಸ್ಸಿಗೆ ಮತ್ತು ನಾವು ಮಾಡಲ್ಪಡುವ ಎಲ್ಲಾ ಕಾರ್ಯಗಳಲ್ಲಿಯೂ ಶಾಂತಿ ನೆಮ್ಮದಿ ದೊರಕುತ್ತದೆ.
“ಬ್ರಹ್ಮಚಾರಿಣಿಯ ಪೌರಾಣಿಕ ಕಥೆ :-”
ದಕ್ಷ ಮಹಾರಾಜನ ಮಗಳು ಸತಿದೇವಿಯು ಯಜ್ಞಕುಂಡದ ಅಗ್ನಿಗೆ ಆಹುತಿಯಾದ ನಂತರ, ರಾಜನಾದ ಹಿಮಪರ್ವತನ ಮಗಳಾಗಿ ಪಾರ್ವತಿಯಾಗಿ ಜನಿಸುವಳು. ಇವಳನ್ನು “ಹೇಮವತಿ” ಎಂದೂ ಕೂಡಾ ಕರೆಯಲಾಗುತ್ತದೆ. ಪಾರ್ವತಿ ದೇವಿಯು ಮಹಾಶಿವನನ್ನು ವಿವಾಹವಾಗಲು ನಿರ್ಧರಿಸುವಳು. ಇವಳ ಈ ನಿರ್ಧಾರವನ್ನು ಇವಳ ಹೆತ್ತವರು ನಿರಾಕರಿಸಿ ಅವಳ ಬಯಕೆಯನ್ನು ನಿರುತ್ಸಾಹಗೊಳಿಸುವರು. ಇದರಿಂದ ಕಂಗಲಾದ ಇವಳು ನಾರದರ ಸೂಚನೆಯಂತೆ ಮಹಾರುದ್ರನನ್ನು ಒಲಿಸುವ ಸಲುವಾಗಿ ಸುಮಾರು 5000 ವರ್ಷಗಳ ಕಾಲ ಘೋರವಾದ ತಪಸ್ಸನ್ನು ಆಚರಿಸುವಳು. ಈ ಕಠಿಣವೆನಿಸಿದ ತಪ್ಪಸ್ಸಿನಿಂದ ಇವಳಿಗೆ “ತಪಶ್ಚಾರಿಣೀ” ಎಂಬ ಹೆಸರು ಬಂದಿತು. ತಪಶ್ಚಾರಿಣೀ ಎಂಬ ಪದಕ್ಕೆ ಅರ್ಥಾತ್ “ಬ್ರಹ್ಮಚಾರಿಣಿ” ಎಂಬ ಹೆಸರು ಇದೆ. ಇವಳು ಘೋರವಾದ ತಪಸ್ಸನ್ನು ಆಚರಿಸುವ ಸಮಯದಿ ಕೇವಲ ಹೂವು, ಹಣ್ಣು ಮತ್ತು ಎಲೆಗಳನ್ನು ಆಹಾರವಾಗಿ ಸೇವಿಸುತ್ತಿದ್ದಳು. ಎಲೆಯನ್ನು ಸಂಸ್ಕೃತ ಭಾಷೆಯಲ್ಲಿ “ಪರ್ಣ”ವೆಂದು ಕರೆಯಲಾಗುತ್ತದೆ. ಆದ್ದರಿಂದ ಬ್ರಹ್ಮಚಾರಿಣಿ ದೇವಿಯನ್ನು “ಅರ್ಪಣಾ” ಎಂದು ಕರೆಯುತ್ತೇವೆ.
ಅದೇ ಸಮಯದಲ್ಲಿ ದೇವತೆಗಳು ಶಿವನನ್ನು ಸಂಪರ್ಕಿಸಿ ತಮಗೆ ತಾರಾಕಾಸುರನಿಂದುಂಟಾಗುತ್ತಿರುವ ತೊಂದರೆಗಳನ್ನು ಸ್ಪಷ್ಟವಾಗಿ ವಿವರಿಸಿ ಹೇಳುವರು. ಈ ಕಾರಣವನ್ನು ಮುಂದಿಟ್ಟುಕೊಂಡು ದೇವತೆಗಳು ಮಹಾಶಿವನು ಪಾರ್ವತಿ ದೇವಿಯನ್ನು ವಿವಾಹವಾಗುವಂತೆ ಮಾಡಲು ಕಾಮದೇವರಲ್ಲಿ ಪ್ರಾರ್ಥಿಸುವರು. ಏಕೆಂದರೆ, ಶಿವನ ಮಗುವಿನಿಂದ ಮಾತ್ರ ಕೊಲ್ಲಲ್ಪಡುವ ವರವನ್ನು ಪಡೆದುಕೊಂಡಿರುವ ತಾರಕಾಸುರನೆಂಬ ಅಸುರನ ಸಂಹಾರ ಮಾಡುವ ಸಲುವಾಗಿ ದೇವತೆಗಳು ಶಿವ ಮತ್ತು ಪಾರ್ವತಿಯನ್ನು ಒಂದು ಮಾಡುವ ಸದುದ್ಧೇಶದಿಂದ ಕಾಮದೇವರ ಬಳಿ ಶಿವನ ಮನದಲ್ಲಿ ಪಾರ್ವತಿ ದೇವಿಯ ಮೇಲೆ ಕಾಮ ಅಥವಾ ಬಯಕೆ ಮೂಡುವಂತೆ ಕೋರಿಕೊಳ್ಳುವರು. ದೇವತೆಗಳ ಕೋರಿಕೆಯನ್ನು ಈಡೇರಿಸುವ ಸಲುವಾಗಿ ಕಾಮ ದೇವನು ಶಿವನನ್ನು ತಲುಪಿ ಬಯಕೆಯ ಬಾಣವನ್ನು ಹಾರಿಸುವನು. ಈ ಕ್ಷಣದಿ ಕುಪಿತಗೊಂಡ ಶಿವನು ತನ್ನ ಹಣೆಯ ಮೂರನೆಯ ಕಣ್ಣನ್ನು ತೆರೆದು ಕಾಮ ದೇವನನ್ನು ಬೂದಿಯಾಗಿಸುವನು.
ಆದರೆ, ಪಾರ್ವತಿ ದೇವಿಯು ಈ ಎಲ್ಲಾ ಘಟನೆಗಳಿಂದ ವಿಚಲಿತಗೊಳ್ಳದೇ ತನ್ನ ಭರವಸೆಯನ್ನು ಅಥವಾ ಶಿವನನ್ನು ಗೆಲ್ಲುವ ಸಂಕಲ್ಪವನ್ನು ಕಳೆದುಕೊಳ್ಳುವುದಿಲ್ಲ. ಹೇಗಾದರೂ ಮಾಡಿ ಶಿವನನ್ನು ಒಲಿಸುವ ಉದ್ದೇಶದಿಂದ ಪಾರ್ವತಿಯು ಶಿವನಂತೆ ಪರ್ವತಗಳಲ್ಲಿ ವಾಸಿಸಲು ಪ್ರಾರಂಭಿಸುವಳು. ಮಾತ್ರವಲ್ಲ, ಶಿವನಂತೆ ತಪಸ್ವಿ ಮತ್ತು ಯೋಗಿನಿಯೂ ಆಗುವಳು. ಪಾರ್ವತಿ ದೇವಿಯ ಈ ಎಲ್ಲಾ ಅಂಶಗಳು ಬ್ರಹ್ಮಚಾರಿಣಿ ದೇವಿಯೆಂದು ಪುರಾಣಗಳಿಂದ ಪರಿಗಣಿಸಲ್ಪಟ್ಟಿದೆ. ಪಾರ್ವತಿ ದೇವಿಯ ತಪಸ್ವಿತನವು ಶಿವನ ಗಮನವನ್ನು ಸೆಳೆದು ಆತನ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ಈ ಸಂದರ್ಭದಲ್ಲಿ ಪಾರ್ವತಿಯ ಮೇಲೆ ಮೋಹ ಬಂದ ಶಿವನು ಸಂನ್ಯಾಸಿಯ ಮಾರು ವೇಷ ರೂಪದಲ್ಲಿ ಪಾರ್ವತಿ ದೇವಿಯನ್ನು ಭೇಟಿಯಾಗುವನು. ಈ ಕ್ಷಣದಲ್ಲಿ ಪಾರ್ವತಿಯ ತಪಸ್ಸನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸಿದರೂ ಶಿವನು ಅಂತಿಮವಾಗಿ ವಿಫಲನಾಗಿ ಪಾರ್ವತಿ ದೇವಿಯ ಇಚ್ಛೆಯಂತೆ ಅವಳ ಅಖಂಡ ಭಕ್ತಿಯೆಂಬ ನಿಷ್ಠೆಗೆ ಪರವಶನಾಗಿ ಶಿವನು ಪಾರ್ವತಿ ದೇವಿಯನ್ನು ಮದುವೆಯಾಗುತ್ತಾನೆ.
ಲೇಖನ: ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍