ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಟೆಕ್ಸಸ್ ನ ಟೆಕ್ಸನ್ನರ ನಾಡಿನ ಪ್ರೇಮ ಅಭಿನಂದನೀಯವಷ್ಟೇ ಅಲ್ಲ ಟೆಕ್ಸನ್ನರ ಆತ್ಮಾಭಿಮಾನ ಶ್ಲಾಘನೀಯವೂ ಹೌದು

Mahesh M Dhandu by Mahesh M Dhandu
October 13, 2020
in Newsbeat, Saaksha Special, ಎಸ್ ಸ್ಪೆಷಲ್
Americans
Share on FacebookShare on TwitterShare on WhatsappShare on Telegram

ಹೆಚ್ಚಿನ ಎಲ್ಲಾ ಅಮೆರಿಕನ್ನರು ತಮ್ಮ ತಮ್ಮ ರಾಜ್ಯಗಳ ಬಗ್ಗೆ ಹೆಮ್ಮೆಪಡುವುದು ದಿಟವಾದರೂ ಈ ಹೆಮ್ಮೆ ಅತೀ ಹೆಚ್ಚಾಗಿರುವುದು ಟೆಕ್ಸಸ್ (Texans) ರಾಜ್ಯದವರಲ್ಲಿ ಅಂದರೆ ಟೆಕ್ಸನ್ನರಲ್ಲಿ. ದಶಕಗಳಷ್ಟು ಕಾಲ ಸ್ವತಂತ್ರ ದೇಶವಾಗಿದ್ದ ಕಾರಣಕ್ಕೋ ಏನೋ ತಮ್ಮ ರಾಜ್ಯದ ಬಗ್ಗೆ ಸಿಕ್ಕಾಪಟ್ಟೆ ಅಭಿಮಾನ ಇವರಿಗೆ. ನೀವು ಯಾವುದೇ ಪಟ್ಟಣದಲ್ಲಿ ಹತ್ತು ಹೆಜ್ಜೆ ನಡೆದರೆ ಕನಿಷ್ಟ ಐದು ಕಡೆ ಅಮೆರಿಕಾದ ರಾಷ್ಟ್ರಧ್ವಜ ಮತ್ತೆ ಅವರ ರಾಜ್ಯಬಾವುಟ ಕಾಣುವಿರಿ. ಎಲ್ಲೆಲ್ಲಿ ರಾಷ್ಟ್ರಧ್ವಜ ಹಾರಿಸ್ತಾರೋ ಅಲ್ಲೆಲ್ಲಾ ರಾಜ್ಯದ ಬಾವುಟ ಹಾರಿಸಲೇಬೇಕು ಇವರಿಗೆ. ಹೆಚ್ಚುಕಮ್ಮಿ ನಮ್ಮ ದಕ್ಷಿಣ ಭಾರತದಷ್ಟು ದೊಡ್ಡದಿರುವ ಈ ದೈತ್ಯ ರಾಜ್ಯಕ್ಕೆ ಒಂಟಿಚುಕ್ಕಿ ರಾಜ್ಯ ಇಲ್ಲ ಲೋನ್ ಸ್ಟಾರ್ ಸ್ಟೇಟ್ ಅಂತಾರೆ. ಇವರ ಬಾವುಟದಲ್ಲಿ ಒಂದು ಚುಕ್ಕಿಯಿರುವುದರಿಂದ ಹೀಗೆನ್ನುವುದು ಅಂದೆನಿಸಿದರೂ ಅನೇಕ ರೀತಿಯಿಂದ ಇವರು ಅಮೆರಿಕಾದೊಳಗೆ ವಿಭಿನ್ನರಾಗಿ ನಿಲ್ಲುವುದೇ ಕಾರಣವಿದ್ದಿರಬಹುದು.

ಆಗಲೇ ಹೇಳಿದ ಹಾಗೇ ಮಹಾದೈತ್ಯ ರಾಜ್ಯವಾಗಿರುವುದರಿಂದ ಎಲ್ಲದೂ ದೊಡ್ಡದಿರಬೇಕೆನ್ನುವುದು ಇವರ ಖಯಾಲಿ. ಅಂತೆಯೇ ಅಲ್ಲಿ ಬಂದೊಡನೆಯೇ ಅವರ ದೊಡ್ಡದರ ಪ್ರೀತಿ ನಿಮ್ಮ ಗಮನಕ್ಕೆ ಬರುತ್ತದೆ. ಅಗಲ ರಸ್ತೆಗಳು, ವಿಸ್ತಾರವಾದ ಉದ್ಯಾನಗಳು, ವಿಶಾಲ ಮನೆಗಳು ಎಲ್ಲೆಡೆ ಕಾಣುತ್ತವೆ. ಅಷ್ಟು ಮಾತ್ರವಲ್ಲದೆ ಇಲ್ಲಿನ ವಿಶೇಷ ಆಕಳ ತಳಿ ಲಾಂಗ್ ಹಾರ್ನ್, ಇಲ್ಲಿನ ಉಪಾಹಾರ ಗೃಹಗಳಲ್ಲಿ ಕೊಡುವ ಊಟದ ಪ್ರಮಾಣ, ಇಲ್ಲಿನ ಜನರ ಹೃದಯ ಎಲ್ಲವೂ ದೊಡ್ಡದೇ (ಟೆಕ್ಸಸ್ ಅನ್ನುವ ಶಬ್ದದ ಹುಟ್ಟಾದುದೇ ಗೆಳೆಯ ಎಂಬ ಶಬ್ದದಿಂದ). ಯಾರಾದರೂ ಸ್ಥಳೀಯ ಹಿರಿಯರ ಹಿಡಿದು ಸ್ವಲ್ಪವೇ ತಲೆ ತಿಂದರೆ ಅವರ ದೊಡ್ಡದರ ಪ್ರೀತಿಯ ಬಗ್ಗೆ ಸಾಕಷ್ಟು ರಸವತ್ತಾದ ಕತೆಗಳ ಹೇಳ್ತಾರೆ. ಅದಕ್ಕೇ ಅಲ್ಲಿನ ಮೀಮರ್‌ಗಳು ಅವರ ದೊಡ್ಡದರ ಹುಚ್ಚಿನ ಬಗ್ಗೆ ನೂರಾರು ಮೀಮ್‌ಗಳನ್ನ ಸೃಷ್ಟಿಸಿ ಇಟ್ಟಿದ್ದಾರೆ.

Related posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

March 12, 2026
ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

March 12, 2026

ಇತಿಹಾಸ ಮರೆತಿರುವ ಕಾಳುಮೆಣಸಿನ ರಾಣಿ ಅಥವಾ ಗಂಡು ರಾಣಿ ಚೆನ್ನಭೈರಾದೇವಿಯ ಸಂಕ್ಷಿಪ್ತ ಕಥನ

ಡಾಲಸ್, ಹ್ಯೂಸ್ಟನ್‌ಗಳಂತ ಮಹಾನಗರಗಳನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳದೇ ಆಸ್ಟಿನ್ ಎಂಬ ಸುರಸುಂದರಿ ನಗರಿಯನ್ನ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದಾರೆ. ಎಲ್ಲೆಡೆ ಹಸುರಿನಿಂದ ಕಂಗೊಳಿಸುವ, ಚಿಕ್ಕಪುಟ್ಟ ಗುಡ್ಡಗಳು, ಚಂದದ ನದಿ, ಸರೋವರಗಳಿಂದ ಕೂಡಿದ ಈ ಊರಿಗೆ ಹೋದರೆ ಅಷ್ಟು ಸುಲಭಕ್ಕೆ ವಾಪಾಸಾಗಲು ಮನಸ್ಸಾಗುವುದಿಲ್ಲ. ಇಲ್ಲಿನ ರಾಜ್ಯಸೌಧ ವೈಟ್‌ಹೌಸಿಗಿಂತಲೂ ದೊಡ್ಡದು ಅಂತ ಕೊಚ್ಚಿಕೊಳ್ತಾರೆ.

ಮೆಕ್ಸಿಕೋ ಕೊಲ್ಲಿಯಲ್ಲಿ ಅಗಾಧವಾದ ತೈಲ ನಿಕ್ಷೇಪಗಳಿರುವುದರಿಂದ, ದುಬಾರಿ ಕ್ಯಾಲಿಫೋರ್ನಿಯಾದಿಂದ ಕಂಪನಿಗಳನ್ನ ತನ್ನತ್ತ ಎಳೆಯುತ್ತಿರುವುದರಿಂದ ಇವರಿಗೆ ದುಡ್ಡಿಗೇನೂ ಕೊರತೆಯಿಲ್ಲ. ಹಾಗೆ ಸಂಪಾದಿಸಿದ ದುಡ್ಡಲ್ಲಿ ಅರ್ಧ ಭಾಗವನ್ನು ಫ್ಲೈಓವರ್ ಕಟ್ಟೋಕೆ, ರಸ್ತೆ ಮಾಡೋಕೆ ಬಳಸ್ತಾರೆ ಅನ್ನೋದು ನನ್ನ ಧೃಡವಾದ ಅಭಿಪ್ರಾಯ. ಬಹಳ ಉತ್ತಮ ರಸ್ತೆಗಳ ಕಾರಣ ಮತ್ತು ಬಯಲು ಪ್ರದೇಶವಾದ ಕಾರಣ ಉಳಿದೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ವೇಗಮಿತಿ ತುಂಬಾ ಜಾಸ್ತಿ. ಚಚ್ಚಿಕೊಂಡು ಓಡಿಸ್ತಾ ಇರ್ತಾರೆ.

ನೈಸರ್ಗಿಕ ಸೌಂದರ್ಯದ ವಿಷಯದಲ್ಲಿ ಇದು ಸುಮಾರಾಗಿದೆಯಷ್ಟೇ. ಅರೆ ಮರುಭೂಮಿ,‌ ಹುಲ್ಲುಗಾವಲು ಇವುಗಳಿಂದಲೇ ತುಂಬಿದೆ. ಅಲ್ಲಿರೋ ಯಾವ್ದೋ ಒಂದು ದನ‌ ಮೇಯಿಸೋ ಮಾಳ ರೋಡ್ ಐಲೆಂಡ್ ರಾಜ್ಯಕ್ಕಿಂತ ದೊಡ್ಡಕಿದೆ ಅಂತ ಕೊಚ್ಕೋತಾರೆ. ಇಲ್ಲಿ ಸುಂದರ ಸ್ಥಳಗಳು‌ ಖಂಡಿತವಾಗಿಯೂ‌‌ ಇವೆ ಆದರೆ‌ ಕಮ್ಮಿ.

ಬರೀ ಸಬ್‌ವೇ, ಕೆಎಫ್‌ಸಿ, ಮೆಕ್ಡಿಗಳೇ ಅಮೆರಿಕಾದ ಆಹಾರ ಸಂಸ್ಕೃತಿಯ ರಾಭಾರಿಗಳೆಂದು ತಿಳಿದವರಿಗೆ ಟೆಕ್ಸ್‌ಮೆಕ್ಸ್ ಅನ್ನೋ ರುಚಿಕರ ಕ್ಯುಸೈನ್ ಇರೋದು ಸ್ವಲ್ಪ ನೆಮ್ಮದಿ ಕೊಡತ್ತೆ.

‘ಚಾರ್ಲೊಟ್ – ಜೋರ್ಡಿಯನ್ ರ ಸಮಯ ಯಾತ್ರೆಯ ವಿಸ್ಮಯ; ಒಂದು ಶತಮಾನ ಹಿಂದಕ್ಕೆ ಹೋಗಿ ಮರಳಿತಾ ಈ ಜೋಡಿ?

ಭಾರತೀಯರು ನಿಧಾನಕ್ಕೆ ಇಲ್ಲಿ ಬಂದು ತುಂಬಿಕೊಳ್ತಾ ಇದಾರೆ. ಹೇಗೆ ಪಂಜಾಬಿನ ಪ್ರತಿಮನೆಯಲ್ಲೂ ಒಬ್ಬರು ಕೆನಡಾದಲ್ಲಿರುವರೋ, ಹಾಗೆ ಆಂಧ್ರದ ಪ್ರತಿಮನೆಯವರೂ ಅಮೇರಿಕಾದಲ್ಲಿ ಅದರಲ್ಲೂ ಅಲ್ಲಿಯದೇ ವಾತಾವರಣವಿರುವ ಟೆಕ್ಸಸ್ಸಿನಲ್ಲಿ ಇರಬೇಕೆನ್ನುವುದು ಅಘೋಷಿತ ನಿಯಮ. ಇನ್ನು ೧೫-೨೦ ವರ್ಷಗಳಲ್ಲಿ ತೆಲುಗು ದೇಶಂ ಅಥವಾ ವೈಎಸ್‌ಆರ್ ಕಾಂಗ್ರೆಸ್ ಅಲ್ಲಿ ಅಧಿಕಾರ ಹಿಡಿಯುವ ಎಲ್ಲಾ ಲಕ್ಷಣಗಳಿವೆ.

ಇದೆಲ್ಲಾ ವಿಕಿಪೀಡಿಯಾದಲ್ಲೋ ಇಂಟರ್‌ನೆಟ್ಟಲ್ಲೋ ಸಿಗತ್ತೆ. ಇದು ಬರಿ ಒಂದು ಚಿಕ್ಕ ಓವರ್‌ವ್ಯೂ ಅಷ್ಟೇ. ಇದನ್ನ ಯಾಕೆ ಕೊಡಬೇಕಾಯಿತೆಂದರೆ ಮೇಲೆ ಹೇಳಿದಂತೆ ಈಗ ಅಲ್ಲಿ ಭಾರತೀಯರು ಬಂದು ತುಂಬುತ್ತಿರುವ ಪ್ರಮಾಣ ನೋಡಿದರೆ ನನ್ನ ಫೇಸ್‌ಬುಕ್ ಬಳಗದಲ್ಲಿನ ಮೂರನೇ ಒಂದು ಭಾಗದಷ್ಟು ಜನ ಇನ್ನು ೧೫-೨೦ ವರ್ಷದಲ್ಲಿ ಒಮ್ಮೆಯಾದರೂ ಉದ್ಯೋಗಕ್ಕಾಗಿಯೋ, ಮಗನ‌ ಮನೆಗೋ, ಬಾಳಂತನಕ್ಕೋ, ವಿದ್ಯಾಭ್ಯಾಸಕ್ಕೋ ಇನ್ಯಾವುದೋ ಕಾರಣಕ್ಕಾದರೂ ಭೇಟಿ‌ ಕೊಟ್ಟೇ ಕೊಡ್ತಾರೆ ಅನ್ನೋದು‌ ನನ್ನ ಧೃಡವಾದ ನಂಬಿಕೆ.

ವಿ.ಸೂ:- ಈ ಪಟ ತೆಗೆದಿದ್ದು ಟೆಕ್ಸಸ್ ಓಕ್ಲಹೋಮಾ ಗಡಿಯಲ್ಲಿ

-ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: #Saaksha TVAmericansTexans
ShareTweetSendShare
Join us on:

Related Posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

by Shwetha
March 12, 2026
0

ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ರಾಜಕೀಯ ತಂತ್ರವನ್ನು ರೂಪಿಸಿದೆ. ಈ ತಂತ್ರಕ್ಕೆ ಆರ್‌ಎಸ್‌ಎಸ್ ಸಹ ಒಪ್ಪಿಗೆ...

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

by Shwetha
March 12, 2026
0

ಮಾರ್ಚ್ 28ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಮುಂದೂಡಲಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಅದರ ಪರಿಣಾಮಗಳಿಂದ ಹಲವು ವ್ಯವಸ್ಥಾತ್ಮಕ ಸಮಸ್ಯೆಗಳು...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

NCERT ಪಠ್ಯಪುಸ್ತಕಗಳ ಸಮಗ್ರ ಪರಿಶೀಲನೆ: ಸುಪ್ರೀಂ ಕೋರ್ಟ್ ಸೂಚನೆ

by Shwetha
March 12, 2026
0

ಸುಪ್ರೀಂ ಕೋರ್ಟ್ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಮಹತ್ವದ ಸೂಚನೆ ನೀಡಿದೆ. NCERT ಪ್ರಕಟಿಸಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಷಯಕ್ಕೆ...

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

by Shwetha
March 12, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಪ್ರಸ್ತುತ ಸಂದರ್ಭದಲ್ಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ತೈಲ ಪೂರೈಕೆ ಮಾರ್ಗ 'ಹಾರ್ಮುಜ್ ಜಲಸಂಧಿ' ಬಹುತೇಕ ಸ್ತಬ್ಧಗೊಂಡಿದೆ. ಇರಾನ್ ನೀಡಿದ್ದ ನೇರ...

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

by Shwetha
March 12, 2026
0

ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ತಿಂಡಿಗಳನ್ನು ತಾತ್ಕಾಲಿಕವಾಗಿ ತಯಾರಿಸದಂತೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ವಿಶೇಷವಾಗಿ ಹೆಚ್ಚು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram