ಕಣ್ಣಿಗೆ ಕಾರದ ಪುಡಿ ಎರಚಿ ಪತಿಯನ್ನು ಕಾಪಾಡಿಕೊಂಡ ಪತ್ನಿSaakssha Tv
ಹೈದರಾಬಾದ್: ಪತಿಯನ್ನು ಹತ್ಯೆ ಮಾಡಲು ಬಂದ ದುಷ್ಕರ್ಮಿಗಳಿಗೆ, ಪತ್ನಿ ಕಣ್ಣಿಗೆ ಕಾರದ ಪುಡಿ ಎರಚಿ ಪತಿಯನ್ನು ಕಾಪಾಡಿಕೊಂಡ ಘನೆಯು ತೆಲೆಂಗಾಣದ ವಾರಾಂಗಲ್ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ರಾತ್ರಿ ನಾಲ್ಕು ಮಂದಿ ದುಷ್ಕರ್ಮಿಗಳು ದಿ ವಾರಂಗಲ್ ಜಿಲ್ಲಾ ಲಾರಿ ಅಸೋಸಿಯೇಶನ್ ಅಧ್ಯಕ್ಷ ವೇಮುಲಾ ಭೂಪಾಲ್ ಅವರ ಮನೆಗೆ ನುಗ್ಗಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ಸಮಯದಲ್ಲಿ ವೇಮುಲಾ ಪತ್ನಿ ಕಲ್ಯಾಣಿ ಅಡುಗೆ ಮನೆಗೆ ಹೋಗಿ ಕಾರದ ಪುಡಿ ತಂದು ಎರಚಿದ್ದಾರೆ. ನಮ್ಮನ್ನು ಕಾಪಾಡಿ ಎಂದು ಜೋರಾಗಿ ಕಿರಿಚಿಕೊಂಡಿದ್ದಾರೆ.
ಇವರ ಕಿರಿಚಾಟ ಕೇಳಿ ಅಕ್ಕ-ಪಕ್ಕದ ಮನೆಯವರು ಬಂದಿದ್ದಾರೆ. ನೆರೆ ಹೊರೆಯವರು ಬರುವುದನ್ನು ಕಂಡು ನಾಲ್ಕು ಜನ ಆರೋಪಿಗಳಲ್ಲಿ ಮೂವರು ಆಟೋದಲ್ಲಿ ಪರಾರಿಯಾಗಿದ್ದಾರೆ. ಇನ್ನೂ ಉಳಿದ ಒಬ್ಬ ದುಷ್ಕರ್ಮಿಯ ಕಣ್ಣಿಗೆ ಹೆಚ್ಚು ಕಾರದ ಪುಡಿ ಬಿದ್ದಿರುವುದರಿಂದ ಆತನಿಗೆ ಪರಾರಿಯಾಗಲು ಸಾಧ್ಯವಾಗದೆ ಇರುವ ಕಾರಣ ಸಿಕ್ಕಿಬಿದ್ದಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.