ಬೆಂಗಳೂರು: ಪಾಪಿ ಮಹಿಳೆಯೊಬ್ಬಳು ತಮ್ಮ ಗಂಡನ ಮೇಲಿನ ಕೋಪಕ್ಕೆ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ.
ಜೆಜೆ ನಗರದಲ್ಲೊಬ್ಬಳು ಮಹಾತಾಯಿ ಮೊದಲ ಗಂಡನ ಮೇಲಿನ ಕೋಪಕ್ಕಾಗಿ ಮಕ್ಕಳಿಗೆ ಕಚ್ಚಿ, ಐಸ್ ನೀರು ಸುರಿದು ಹಿಂಸೆ ಕೊಟ್ಟಿದ್ದಾಳೆ. ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅಂತಾರಲ್ಲ ಇದು ಅದಕ್ಕಿಂತ ಕ್ರೂರ. ಬಾಯ್ ಫ್ರೆಂಡ್ ಜೊತೆ ಸೇರಿ ಮೊದಲ ಗಂಡನ ಮಕ್ಕಳ ಮೇಲೆ ತಾಯಿಯೊಬ್ಬಳು ವಿಕೃತಿ ಮೆರೆದಿದ್ದಾಳೆ. ಆಯೇಷಾ ಹಾಗೂ ಇಮ್ರಾನ್ ಮದ್ವೆಯಾಗಿದ್ದರು. ಇಬ್ಬರಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳು. ಆದರೆ, ಇವರಿಬ್ಬರು ಇತ್ತೀಚೆಗೆ ದೂರವಾಗಿದ್ದರು. ತಾಯಿಯೊಂದಿಗೆ ಮಕ್ಕಳು ಇರಬೇಕೆಂದು ಕೋರ್ಟ್ ಸೂಚಿಸಿದ್ದರು. ಹೀಗಾಗಿ ಮಕ್ಕಳು ಅವಳ ಬಳಿಯೇ ಇದ್ದರು. ಹೀಗಾಗಿ ಇಮ್ರಾನ್ ಆಗಾಗ ಬಂದು ಮಕ್ಕಳನ್ನು ನೋಡಿಕೊಳ್ಳುತ್ತಿದ್ದ. ಆದರೆ, ಮಕ್ಕಳು ತಾಯಿ ಕೊಡುವ ಹಿಂಸೆ ಹೇಳಿರಲಿಲ್ಲ.
ತಾಯಿಯ ಟಾರ್ಚರ್ ಯಾವಾಗ ಹೆಚ್ಚಾಯ್ತೋ ತಡೆದುಕೊಳ್ಳಲು ಸಾಧ್ಯವಾಗದೆ ಪುತ್ರಿ ತಂದೆಯ ಬಳಿ ಎಲ್ಲವನ್ನೂ ಹೇಳಿ ಬಿಟ್ಟಿದ್ದಳು. ಸಲೀಂ ಹಾಗೂ ಜಬೀರ್ ಅನ್ನೋ ಆಯೇಷಾಳ ಫ್ರೆಂಡ್ ಗಳು ಆಗಾಗ ಮನೆಗೆ ಬರುತ್ತಿದ್ದರಂತೆ. ಈ ವಿಚಾರ ಮಕ್ಕಳು ತಂದೆಯ ಬಳಿ ಹೇಳ್ತಾರೆ ಎಂದು ಬೆದರಿಸಿ ಹಲ್ಲೆ ಮಾಡ್ತಿದ್ರಂತೆ. ಜಬೀರ್ ಎಂಬಾತ ಸಿಗರೇಟ್ ನಿಂದ ಸುಡುತ್ತಿದ್ದನಂತೆ. ಅತ್ತರೆ ಬಾಸುಂಡೆ ಬರುವಂತೆ ಹೊಡೀತಿದ್ನಂತೆ. ಪೊಲೀಸ್ ಠಾಣೆಗೆ ಕರೆ ತಂದಾಗ ತಮ್ಮನ್ನ ಸಾಯಿಸಿ, ಆದರೆ ತಾಯಿಯ ಬಳಿ ಕಳಿಸಬೇಡಿ ಎಂದು ಗೋಗರೆದಿದೆಯಂತೆ. ಸದ್ಯ ಮಕ್ಕಳನ್ನು ಇಮ್ರಾನ್ ಸುಪರ್ದಿಗೆ ನೀಡಲಾಗಿದೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಜುವೆನಿಲ್ ಜಸ್ಟಿಸ್ ಕೇಸ್ ನಡಿ ದೂರು ದಾಖಲಾಗಿದೆ.